Home / ಲೇಖನ / ಇತರೆ / ಚಾಲಕ ಗ್ರೇಟ್

ಚಾಲಕ ಗ್ರೇಟ್

ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ.

ದಿನಾಂಕ ೦೩-೦೮-೨೦೧೫ ರಂದು ಸೋಮವಾರ ದಿನದಂದು ಬೆಳಗಿನ ಜಾವ ೪ ಗಂಟೆಯಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆಯು ೩೫ ಜನ ಪ್ರಯಾಣಿಕರನ್ನು ಸುಹಾಸ್ ಸುಖಾಸೀನ ಬಸ್‌ನ್ನು ಸುರಕ್ಷಿತವಾಗಿ ಎಡಗಡೆಗೆ ನಿಲ್ಲಿಸುವಲ್ಲಿ ಬಸ್ ಚಾಲಕ ಅಬ್ದುಲ್ ಕೆ. ಕೊಟ್ನಾಳ್ ವಯಸ್ಸು ೩೯ ಇವರ ಸಮಯ ಪ್ರಜ್ಞೆಯನ್ನು ಎಂಥಾದರೂ ಮೆಚ್ಚಲೇಬೇಕು!

ಹೌದು! ಸಾರಿಗೆ ಸಂಸ್ಥೆಯ ಬಸ್ ಚಾಲಕ ತಾನು ಸಾವಿನ ದವಡೆಯಲ್ಲಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಮೇಲೆ ಮೃತಪಟ್ಟ ಕರುಣಾ ಜನಕವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್ ಕುಷ್ಟಗಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದೆ.

ವಿಜಯಪುರ ಜಿಲ್ಲೆ ಇಂಡಿ ಡಿಪೋದ ವಾಹನವು ಬೆಂಗಳೂರಿನಿಂದ ಇಂಡಿಗೆ ಹೋಗುತ್ತಿತ್ತು. ಚಾಲಕ ಹೃದಯಾಘಾತಕ್ಕೆ ಒಳಗಾದ ನಂತರವೂ ಬಸ್ ಚಲಿಸುತ್ತಿತ್ತು! ವೇಗದೂತ ಬಸ್ ವೇಗವಾಗಿ ಚಲಿಸುತ್ತಿತ್ತು ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಬಸ್ಸಿನಲ್ಲಿದ್ದವರು ಗಾಬರಿಬಿದ್ದು ಎದ್ದು ಕುಳಿತರು. ಚಾಲಕನ ಕ್ಯಾಬಿನ್ ಚಿಲಕವಾಕಿತ್ತು! ಏನೆಂದು ನೋಡುವಷ್ಟರಲ್ಲಿ ಬಸ್ ಜಮೀನಿನಲ್ಲಿ ಹೋಗಿ ನಿಂತಿತು! ಚಾಲಕನ ಉಸಿರು ನಿಂತು ಹೋಗಿತ್ತು!

ಇದನ್ನೆಲ್ಲ ಪ್ರಥಮ ವರ್‍ತಮಾನವಾಗಿ ಕುಷ್ಟಗಿ ಡಿಪೋ ಮ್ಯಾನೇಜರ್‌ ಮಂಜುನಾಥ್ ಸಾರಿಗೆ ನಿಯಂತ್ರಕ ಕಾಸೀಂಸಾಬ್‌ ಕಾಯಿಗಡ್ಡೆ ವರದಿ ಮಾಡಿರುವರಲ್ಲದೆ, ಪ್ರಯಾಣಿಕರನ್ನು ಮುಂದಿನ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಹೆದ್ದಾರಿಯ ಟೋಲ್‌ಗೇಟ್ ಅಂಬುಲೆನ್ಸ್ ಮೂಲಕ ಚಾಲಕನ ಮೃತ ದೇಹವನ್ನು ಕುಷ್ಟಗಿ ಸರ್‍ಕಾರಿ ಆಸ್ಪತ್ರೆಗೆ ಕಳಿಸಿರುವರು.

ಇದನ್ನೆಲ್ಲ ನೋಡಿದಾಗ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಗ್ರೇಟ್ ಅಲ್ಲವೇ? ನಾವು ನೀವು ಚಾಲಕರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...