ಚಾಲಕ ಗ್ರೇಟ್

ಚಾಲಕ ಗ್ರೇಟ್

ನಾನು ಸಾರಿಗೆ ಸಂಸ್ಥೆಯಲ್ಲಿ ೩೦ ವರ್‍ಷಗಳಷ್ಟು ಸೇವೆ ಮಾಡಿದೆ. ನನ್ನ ಅನುಭವದಲ್ಲಿ ನಮ್ಮ ಚಾಲಕ ನಿರ್‍ವಾಹಕರು ಭಲೇ ಗ್ರೇಟ್. ಹಗಲು ಇರುಳು ಅವರು ಶ್ರಮಿಸಿ ಪ್ರಯಾಣಿಕರಿಗೆ, ಸಂಸ್ಥೆಗೆ ಕೀರ್‍ತಿ ತರುವರು. ಅವರ ದುಡಿಮೆ ಸ್ವರ್‍ಗ ಸಮಾನ.

ದಿನಾಂಕ ೦೩-೦೮-೨೦೧೫ ರಂದು ಸೋಮವಾರ ದಿನದಂದು ಬೆಳಗಿನ ಜಾವ ೪ ಗಂಟೆಯಲ್ಲಿ ಜರುಗಿದ ಹೃದಯ ವಿದ್ರಾವಕ ಘಟನೆಯು ೩೫ ಜನ ಪ್ರಯಾಣಿಕರನ್ನು ಸುಹಾಸ್ ಸುಖಾಸೀನ ಬಸ್‌ನ್ನು ಸುರಕ್ಷಿತವಾಗಿ ಎಡಗಡೆಗೆ ನಿಲ್ಲಿಸುವಲ್ಲಿ ಬಸ್ ಚಾಲಕ ಅಬ್ದುಲ್ ಕೆ. ಕೊಟ್ನಾಳ್ ವಯಸ್ಸು ೩೯ ಇವರ ಸಮಯ ಪ್ರಜ್ಞೆಯನ್ನು ಎಂಥಾದರೂ ಮೆಚ್ಚಲೇಬೇಕು!

ಹೌದು! ಸಾರಿಗೆ ಸಂಸ್ಥೆಯ ಬಸ್ ಚಾಲಕ ತಾನು ಸಾವಿನ ದವಡೆಯಲ್ಲಿದ್ದರೂ ಪ್ರಯಾಣಿಕರ ಜೀವ ಉಳಿಸಿದ ಮೇಲೆ ಮೃತಪಟ್ಟ ಕರುಣಾ ಜನಕವಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮ್ಯಾದನೇರಿ ಕ್ರಾಸ್ ಕುಷ್ಟಗಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದೆ.

ವಿಜಯಪುರ ಜಿಲ್ಲೆ ಇಂಡಿ ಡಿಪೋದ ವಾಹನವು ಬೆಂಗಳೂರಿನಿಂದ ಇಂಡಿಗೆ ಹೋಗುತ್ತಿತ್ತು. ಚಾಲಕ ಹೃದಯಾಘಾತಕ್ಕೆ ಒಳಗಾದ ನಂತರವೂ ಬಸ್ ಚಲಿಸುತ್ತಿತ್ತು! ವೇಗದೂತ ಬಸ್ ವೇಗವಾಗಿ ಚಲಿಸುತ್ತಿತ್ತು ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಬಸ್ಸಿನಲ್ಲಿದ್ದವರು ಗಾಬರಿಬಿದ್ದು ಎದ್ದು ಕುಳಿತರು. ಚಾಲಕನ ಕ್ಯಾಬಿನ್ ಚಿಲಕವಾಕಿತ್ತು! ಏನೆಂದು ನೋಡುವಷ್ಟರಲ್ಲಿ ಬಸ್ ಜಮೀನಿನಲ್ಲಿ ಹೋಗಿ ನಿಂತಿತು! ಚಾಲಕನ ಉಸಿರು ನಿಂತು ಹೋಗಿತ್ತು!

ಇದನ್ನೆಲ್ಲ ಪ್ರಥಮ ವರ್‍ತಮಾನವಾಗಿ ಕುಷ್ಟಗಿ ಡಿಪೋ ಮ್ಯಾನೇಜರ್‌ ಮಂಜುನಾಥ್ ಸಾರಿಗೆ ನಿಯಂತ್ರಕ ಕಾಸೀಂಸಾಬ್‌ ಕಾಯಿಗಡ್ಡೆ ವರದಿ ಮಾಡಿರುವರಲ್ಲದೆ, ಪ್ರಯಾಣಿಕರನ್ನು ಮುಂದಿನ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಲ್ಲದೆ, ಹೆದ್ದಾರಿಯ ಟೋಲ್‌ಗೇಟ್ ಅಂಬುಲೆನ್ಸ್ ಮೂಲಕ ಚಾಲಕನ ಮೃತ ದೇಹವನ್ನು ಕುಷ್ಟಗಿ ಸರ್‍ಕಾರಿ ಆಸ್ಪತ್ರೆಗೆ ಕಳಿಸಿರುವರು.

ಇದನ್ನೆಲ್ಲ ನೋಡಿದಾಗ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಗ್ರೇಟ್ ಅಲ್ಲವೇ? ನಾವು ನೀವು ಚಾಲಕರಿಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲೆ ನಿನ್ನಯ ತಮ್ಮನೆಲ್ಲಿ?
Next post ಕಿವುಡರ ಹಾಡು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…