ಕಿವುಡರ ಹಾಡು

ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧||

ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ|
ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨||

ನಿನ್ನ ರೊಟ್ಟಿ ನಿನಗಿರಲಿ ನಿನ್ನ ಬುತ್ತಿ ನಿನಗಿರಲಿ|
ನಮ ಗಂಗನಳ್ಳಿ ಹಾದ್ಯೊಂದ್ಯಾವು ಕಡಿಗಾದ| ಕೋ ||೩||

ಏ ಗಂಡಾ ಏ ಪುರುಷಾ ಹಾದ್ಯಾಗ ನನಗೊಬ್ಬ|
ರೊಟ್ಟಿ ಬೇಡುತಿದ್ದಾ| ಕೋ ||೪||

ಏ ಭಾರ್‍ಗೆ ಏ ಮೂಳಾ ನಾಕು ಮೂಲಿ ಬೆಳಿಯಲಿ|
ಕಿಂವ್ಯಾಗ್ವಾಲಿ ಬುಗುಡಿ ಮಾಡಸೇನಂದಾ| ಕೋ ||೫||

ಏ ಅತ್ತಿ ಏ ಮಾವಾ ಹೊಲದಾಗ ನನ ಗಂಡಾ|
ಮಲಿಯಾರೆ ಮೂಗಾರೆ ಕೊಯ್ದೇನಂದಾ| ಕೋ ||೬||

ಒಳಗೀನಕ್ಕೆಂತಾ ಆದಾಳ್ಹಾದಾಽಳಂದ ನೆರಮನಿ|
ಕುಂಬಾರ್‍ಗ ನನಗ ಹಾದರಿಟ್ಟಾಽಳ| ಕೋ ||೭||

ಅವ್ರಾಣಿ ಅಪ್ರಾಣಿ ದೇವರಾಣಿ ದಿಂಡರಾಣಿ|
ತೊಗರೀಯ ಗುಗ್ಗರಿ ತಿಂದಿಲ್ಲ ಅತ್ತಿ| ಕೋ ||೮||
****
ಕಿವುಡರ ಹಾಡು

ಗೆಂಡ, ಹೆಂಡತಿ, ಅತ್ತೆ, ಎಲ್ಲರೂ ಕಿವುಡರು. ಒಬ್ಬರು ಒಂದು ಕೇಳಿದರೆ ಇನ್ನೊಬ್ಬರು ಇನ್ನೊಂದು ಹೇಳುತ್ತಾರೆ. ಮೊದಲು ಸೊಸೆಗೆ ದಾರಿಕಾರನೊಬ್ಬನು ಹಾದಿಯನ್ನು ವಿಚಾರಿಸುವನು. ಇಲ್ಲಿಂದ ಮುಂದೆ ಒಬ್ಬೊಬ್ಬರ ಅಸಂಬದ್ಧ ಪ್ರಲಾಪಕ್ಕೆ ಆರಂಭ.

ಛಂದಸ್ಸು: ತ್ರಿಪದಿಯ ಪೂರ್ವಾರ್ಧ.

ಶಬ್ಧ ಪ್ರಯೋಗಗಳು:- ಭಾರಿಗೆ ಮತ್ತು ಮೂಳ=ಬೈಗುಳುಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಾಲಕ ಗ್ರೇಟ್
Next post ಕೆರೆಯ ತಡಿಯಲ್ಲಿ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…