Home / ಲೇಖನ / ವಿಜ್ಞಾನ / ಇರೋಡಿಯಂ ಪ್ರಾಜೆಕ್ಟರ್

ಇರೋಡಿಯಂ ಪ್ರಾಜೆಕ್ಟರ್

ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನೆಯ ಪ್ರೋಜೆಕ್ಟರ್‌ಗಳು ಬಂದಿವೆ. ಹಳೆಯದರದಲ್ಲಿ ಅನೇಕ ನ್ಯೂನ್ಯತೆಗಳಿದ್ದ ಕಾರಣವೂ ಸಹ ಅವು ಮೂಲೆ ಗುಂಪಾದವು. ಈದೀಗ ಸುಧಾರಣೆಗೊಂಡು ನೂತನ ತಂತ್ರಜ್ಞಾನ ‘ಇರೀಡಿಯಂ’ ಮಸೂರದ ಪ್ರೋಜೆಕ್ಟರ್ ಹೊರಬಂದಿವೆ.

ಇರೀಡಿಯಂ ತಂತ್ರಜ್ಞಾನದ ಈ ಪ್ರೋಜೆಕ್ಟರ್ ಬಹಳ ಚಿಕ್ಕದ್ದು ಇದನ್ನು ಬೇಕಾದರೆ ಮಡಚಿ ಜೇಬಿನಲ್ಲಿಟ್ಟುಕೊಳ್ಳಬಹುದು. ಇದರ ಮಸೂರ (ಲೆನ್ಸ್)ನಲ್ಲಿ ಇರೀಡಿಯಂ ಪದಾರ್ಥದ ಲೇಪನವಿರುತ್ತದೆ. ಇದರಲ್ಲಿ ಹರಿಯುವ ಬೆಳಕನ್ನು ಅದು ವಿದ್ಯುನ್ಮಾನಮಯ ‘ಡಯೋಡ್’ ಟ್ಯೂಬ್‌ಗಳಿಗೆ ಕಳಿಸುತ್ತದೆ. ಈ ಬಿಂಬ ಸಂಕೇತಗಳು ವಿದ್ಯುತ್ ಸಂಕೇತಗಳಾಗಿರುತ್ತವೆ. ಈ ಡಯೋಡ್ ಟ್ಯೂಬುಗಳು ನಂತರ ಮರು ಬೆಳಕಿಗೆ ಪರಿವರ್ತಿಸಿ ಪರದೆಯ ಮೇಲೆ ಬೀಳುತ್ತವೆ. ಈ ಚಿತ್ರಗಳು ಅತ್ಯಂತ ಸ್ಪಷ್ಟವಾಗಿರುತ್ತವೆ. ಇನ್ನೊಂದು ವಿಶೇಷವೇನೆಂದರೆ ಇದಕ್ಕೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲವಿರುವುದು. ಈ ಪ್ರೋಜೆಕ್ಟರ್ ದುಬಾರಿಯಾದರೂ ಕೆಲಸ ಮಾಡುವುದು ಸುಲಭ.

ಈ ಪ್ರಯೋಗಗಳು ಯಶಸ್ವಿಯಾಗಿ ವಿದೇಶಗಳಲ್ಲಿ ಮತ್ತು ಕೆಲವು ನಿವಾಸಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಎಲ್ಲೆಂದರಲ್ಲಿ ಸಾಗಿಸಬಹುದಾದ ಇದರ ಸಾಧನೆ ಹಿರಿದಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಂತರೆಲ್ಲರ ಮನೆಗಳಲ್ಲಿಯೂ ರಂಜಿಸುವ ದಿನ ದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...