ಹಕ್ಕಿ ಮರ

ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ
ಅರಳುವ ಒಂಟಿತನಕ್ಕೆ ಪಕ್ಕದಲ್ಲಿ
ಮರದಲ್ಲಿ ಕುಳಿತು ಹಕ್ಕಿ ಹಾಡಿತು,
ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ
ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು,
ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು ಕಂಡು.

ರಾಗವಿಲ್ಲದ ಪದಗಳಿಗೆ ಹಕ್ಕಿ
ಮೆಲ್ಲಗೆ ನೇವರಿಸಿ ಪ್ರೀತಿ ಕೊರಳು ತುಂಬಿ
ಹಾಡು ಹಾಡಿತು, ಅಂಟುನಂಟಿಲ್ಲದ ಹಂಗಿನಲ್ಲಿ,
ಮೊಳಕೆ ಹರಡಿ ಚಿಗುರು ಚಿಮ್ಮಿ
ಹಸಿರೆಲ್ಲಾ ಮರದ ತುಂಬಾ ಹರಡಿ ಹಾಯಾಗಿ,
ನಕ್ಷತ್ರಗಳು ಹಿರಿಡಿದವು ಬಾನಿನಿಂದ ಇಳಿದು ಬಂತು
ಬೆಳಕು ನೆರಳುಗಳಾಟಕೆ ಕುಪ್ಪಳಿಸಿದ
ಹಕ್ಕಿ ಜೋಕಾಲಿ ಜೀಕಿ ಹಾರಿ ಏರಿ ಮತ್ತೆ
ಅವಿತು ಕೊಳ್ಳುವ ತಾಣವನ್ನು ತನಗೇ ತಾನೆ
ಬಾಹುಗಳ ಚೆಲ್ಲಿ ಅಂಗೈಯಲ್ಲಿ ಹೊಸೆದು

ಬಿಗಿದು ಬಯಲ ಅನಂತ ಬಾಳಲೆಂದು
ಟೊಂಗೆಯ ಸಂಧಿಯಲಿ ಗೂಡು ಕಟ್ಟಿತು ಪ್ರೀತಿಯಗುಂಗಿನಲಿ.
ಹಿಡಿ ಯಲಾಗದ ಬೆಳದಿಂಗಳು ಹರಡಿ
ಮರದ ಕೊಂಬೆ ರೆಂಬೆಯಲಿ ಇಬ್ಬನಿ
ಹಾಸಿ ಮರ್ಮರಕೆ ಚಿಗಿತು ಚೆಲ್ಲುವ
ಕನಸುಗಳ ಹೂಗಳು ಗೂಡಿನಲಿ
ಶೃಂಗಾರ ಕಾವ್ಯದ ಲಹರಿ ಹರಿದು ಬಂತು
ಹಕ್ಕಿ ಕೊರಳ ಗಾನದಲಿ ಮರದ ನಾದದಲಿ
ಮುಟ್ಟಲಾಗದ ಪ್ರೀತಿ ಕೂಟದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರೋಡಿಯಂ ಪ್ರಾಜೆಕ್ಟರ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೪

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…