Home / ಲೇಖನ / ವಿಜ್ಞಾನ / ನಾವು ಎತ್ತರ ಏಕೆ ಬೆಳಯುವುದಿಲ್ಲ?

ನಾವು ಎತ್ತರ ಏಕೆ ಬೆಳಯುವುದಿಲ್ಲ?

ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ ಕುಳ್ಳರಾಗಿ ಬೆಳೆದಿರುವ ಉದಾಹರಣೆಗಳು ಇವೆ.

ಆಗ ತಾನೆ ಜನಿಸಿದ ಶಿಶುಗಳು ಸಾಮಾನ್ಯವಾಗಿ ೫೦ ಸೆಂ.ಮೀ. ಉದ್ದವಿದ್ದರೆ ಮುಂದೆ ೨೦ ವರ್ಷಗಳಲ್ಲಿ ೧.೭ ಮೀಟರ್ ಬೆಳೆಯುತ್ತದೆ. ನಾವೇಕೆ ನಮ್ಮ ವಯಸ್ಸಿನ ಪರ್‍ಯಂತರ ಬೆಳಯುವುದಿಲ್ಲ? ಎಂಬ ಪ್ರಶ್ನೆ ಏಳದಿರದು. ಈ ಪ್ರಶ್ನೆಗೆ ಶರೀರ ವಿಜ್ಞಾನಿಗಳು ನಮ್ಮ ಶರೀರದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ “ಎಂಡೋಕೈನ್” ಗ್ರಂಥಗಳಿದ್ದು ಕುತ್ತಿಗೆಯಲ್ಲಿನ ಥೈರಾಯ್ಡ್‌ ಮಿದುಳಿಗೆ ಹೊಂದಿಕೊಂಡಿರುವ ಪಿಟ್ಯುಟರಿ, ಎದೆಯಲ್ಲಿ ಥೈಮಸ್ ಹಾಗೂ ಲೈಂಗಿಕ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳ ಬೆಳವಣಿಗೆ ಹತೋಟಿಯಲ್ಲಿಡುತ್ತವೆ. ಇವುಗಳ ಪ್ರಭಾವ ಹದ್ದು ಮೀರಿದರೆ ನಮ್ಮ ಕೈ ಕಾಲು ಭುಜ ಮುಂತಾದ ಅಂಗಗಳು ರಾಕ್ಷಸೋಪಾದಿಯಲ್ಲಿ ಬೆಳದು ಬಿಡುತ್ತವೆ. ಮತ್ತು ಇವು ಅಗತ್ಯಾನುಸಾರ ವರ್ತಿಸಿದ್ದರೂ ಮನುಷ್ಯ ಕುಳ್ಳಗಾಗುತ್ತಾನೆಂದು ವಿವರಣೆಗೊಡುತ್ತಾರೆ.

ಎಳೆಯತನದಲ್ಲಿ ಥೈಮಸ್ ಗ್ರಂಥಿಗಳ ಚಟುವಟಿಗೆ ತೀವ್ರವಾಗಿ ಸಾಗಿ ೧೩-೧೪ ರ ವಯಸ್ಸಿನಲ್ಲಿ ಕ್ಷೀಣಿಸುತ್ತವೆ. ನಂತರ ಲೈಂಗಿಕ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ಎತ್ತರ ೨೨ನೇ ವಯಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಒಂದು ವೇಳೆ ಲೈಂಗಿಕ ಗ್ರಂಥಿಗಳ ಉತ್ಪತ್ತಿ ಮೊದಲೇ ಆದರೆ ಎತ್ತರ ಬೆಳೆಯುವಲ್ಲಿ ಆಗುವುದಿಲ್ಲ. ಒಂದು ವೇಳೆ ಈ ಲೈಂಗಿಕ ಗ್ರಂಥಿಗಳು ಬಹಳ ತಡವಾಗಿ ಸೃಜಿಸಲಾರಂಭಿಸಿದರೆ ವ್ಯಕ್ತಿಗಳು ಬೃಹದಾಕಾರವಾದ ಎತ್ತರಕ್ಕೆ ಬೆಳೆಯುತ್ತಾರೆ. (ಥೈಮಸ್‌ನಿಂದಾಗಿ) ಒಂದು ಸಮೀಕ್ಷೆಯಂತೆ ೨೫ ನೇ ವಯಸ್ಸಿನ ನಂತರವೂ ವ್ಯಕ್ತಿಗಳು ಎತ್ತರ ಅತ್ಯಲ್ಪ ಪ್ರಮಾಣದಲ್ಲಿ ಏರುಮುಖವನ್ನೇ ಕಾಣುತ್ತದೆ. ಗರಿಷ್ಠ ಎತ್ತರವನ್ನು ನಾವು ತಲುಪುವುದು ೩೫-೪೦ ರ ಪ್ರಾಯದಲ್ಲಿ ವೈಶಿಷ್ಯವೆಂದರೆ ೪೦ ವರ್ಷ ವಯಸ್ಸಿನ ನಂತರ ನಾವು ಹತ್ತು ವರ್ಷಗಳಿಗೆ ೧೨ ಮಿಲಿ ಮೀಟರ್‌ನಂತೆ ಕುಳ್ಳರಾಗುತ್ತೇವೆ. ಕೀಲುಗಳಲ್ಲಿರುವ ‘ಕಾರ್ಟರೇಜ್’ ಎಂಬ ವಸ್ತು ಕುಗ್ಗುವುದೇ ಈ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಶರೀರ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...