ಅಣುಶಕ್ತಿಗಡಿಯಾರ

ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ
ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ. ಕರಾರುವಾಕ್ಕಾಗಿ ಸಮಯ ತೋರಿಸುವ ಅದ್ಭುತ ಗಡಿಯಾರವೆಂದರೆ ಅಣುಶಕ್ತಿ ಗಡಿಯಾರಗಳು. ಕ್ರಿ.ಶ. ೧೯೪೬ರಲ್ಲಿ ಡಾ|| ವಿಲ್ಲರ್ಟ್ ಫ್ರಾಂಕ್ ಎಂಬ ಒಬ್ಬ ಅಮೇರಿಕದ ಭೌತವಿಜ್ಞಾನಿಯು ಈ ಗಡಿಯಾರವನ್ನು ಸಂಶೋಧಿಸಿದ ವಾಷಿಂಗ್‌ಟನ್ ಡಿ.ಸಿಯ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನಲ್ಲಿ ಇಂತಹ ಮೊದಲ ಗಡಿಯಾರವನ್ನು ತಯಾರಿಸಿ ಇಡಲಾಯಿತು.

೧೭,೦೦,೦೦೦ ವರ್ಷಗಳ ಆವಧಿಯವರೆಗೆ ಒಂದು ಸೆಕೆಂಡಿನಷ್ಟು ಕರಾರುವಾಕ್ಕಾಗಿ ಈ ಗಡಿಯಾರ ಇರುತ್ತದೆ. ಸಮಯದ ಅಳತೆಯ ಕ್ಷೇತ್ರದಲ್ಲಿ ಇದು ಈಗಾಗಲೇ ಕ್ರಾಂತಿಯನ್ನುಂಟು ಮಾಡಿದೆ. ಪರಮಾಣುಗಳ ಕೆಲವು ಆಣುಗಳು ಉತ್ಪಾದಿಸುವ ಕಂಪನಗಳನ್ನು ಈ ಅಣುಶಕ್ತಿ ಗಡಿಯಾರವು ಅಳೆಯುತ್ತದೆ. ತೂಗಾಡುವಿಕೆಗಳ ಸಂಖ್ಯೆಯನ್ನು ಲೆಕ್ಕಮಾಡುವುದರಿಂದ ಸಮಯವನ್ನು ಅಳೆಯಲಾಗುತ್ತದೆ. ಹೆಚ್ಚಿನ ಅಣುಶಕ್ತಿಗಡಿಯಾರಗಳು ೧,೪೦೦ ರಿಂದ ೪೦,೦೦೦MHzವರೆಗೆ ಸೂಕ್ಷ್ಮ ಅಲೆಗಳ ಪ್ರದೇಶದಲ್ಲಿ ಆಗುವ ತೂಗಾಡುವಿಕೆಗಳ ಸಂಖ್ಯೆಯನ್ನು ಅಳತೆಮಾಡಿ ಕಾಲವನ್ನು ಕಂಡು ಹಿಡಿಯಲಾಗುತ್ತದೆ.

ಈ ರೀತಿಯ ಅಣುಶಕ್ತಿ ಗಡಿಯಾರಗಳ ಅಭಿವೃದ್ದಿಯಿಂದಾಗಿ ಪ್ರಪಂಚವು ೧೯೭೨ರ ಪ್ರಾರಂಭದಿಂದಲೂ ಅಣುಶಕ್ತಿ ಸಮಯಕ್ಕೆ ಬದಲಾಯಿಸಿಕೊಂಡಿತು. ಈಗ ಅಂತರಾಷ್ಟ್ರೀಯ ಒಪ್ಪಿಗೆಯಾಗಿರುವ ಅತಿ ಚಿಕ್ಕ ಸಮಯ ಘಟಕವು ಅಣುಶಕ್ತಿಸೆಕೆಂಡ್ ಆಗಿದೆ.

ಈ ಗಡಿಯಾರಗಳ ಅನುಕೂಲ ಮತ್ತು ಉಪಯೋಗ: ವಾತಾವರಣದ ಚಂಚಲತೆಯಿಂದಾಗಲಿ ಅಥವಾ ಭೂಮಿಯ ಸುತ್ತುವಿಕೆಯ ವ್ಯತ್ಯಾಸಗಳಿಂದಾಗಲಿ ಇದರ ಮೇಲೆ ಯಾವುದೇ ಪರಿಣಾಮ ಬೀರಲಾರದು ಏಕೆಂದರೆ ಭೂಮಿಯು ಪ್ರತಿವರ್ಷವೂ ಒಂದು ಸೆಕೆಂಡಿನಷ್ಟು ತನ್ನ ಸುತ್ತುವಿಕೆಯಲ್ಲಿನಿಧಾನವಾಗುತ್ತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಮತ್ತೆ…
Next post ಮರುಭೂಮಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys