ಮರುಭೂಮಿ

ಆಕಾಶ ಸಾಕ್ಷಿಯಾಗಿ
ಸೂರ್ಯನೊಂದಿಗೆ ಕೂಡಿದ
ಹೊಟ್ಟೆ ಉಬ್ಬುಬ್ಬಿನ ಮರುಭೂಮಿಯ
ಬಸಿರು, ಸುಖವಾಗಿ ಪ್ರಸವಿಸಲೇ ಇಲ್ಲ
ಬಯಕೆಯಲಿ ಬೆಂದು
ಓಯಸಿಸ್ ನೀರು ಕುಡಿದು
ತನ್ನ ಸಿಟ್ಟಿಗೆ ತಾನೇ ಕ್ಯಾಕ್ಟಸ್ ಗಂಟಿಯಾಗಿ
ಮೈ ಪರಿಚಿಕೊಂಡು, ದಳ್ಳುರಿಗೆ
ಸಿಡಿದೆದ್ದ ಬಸುರಿನ ತುಣುಕುಗಳು
ಇಡಿಯಾಗಿ ಸುರಿಯುವ
ಮರಳ ದಿಬ್ಬಗಳು
ಜಾದೂಗಾರನ ಕಣ್ಕಟ್ಟಿನಂತೆ
ಬಿಸಿಲಿಗೆ ಬೆತ್ತಲೆಯಾಗಿ
ಬಿದ್ದ ಮರುಭೂಮಿ
ಸಾವಿರಾರು ವರ್ಷಗಳಿಂದ
ಹಾತೊರೆಯುತ್ತಿದೆ ಮೋಕ್ಷಕ್ಕೆ
ವಿದೇಶಿಗರ ಶಸ್ತ್ರಗಳ ಛೇದನದೊಳಗೆ
ಬಸಿರಿನಿಂದ ಪುಟಿದೆದ್ದ ಕೂಸು ಈ ‘ಪೆಟ್ರೋಲ್’
ಮರುಭೂಮಿಯ ಹಡಗು ‘ಒಂಟೆಗೆ’
ಈಗ ಮಾಲಿಕನ ಪ್ರೀತಿ ಇಲ್ಲ
ಅವನ ಕಾರುಗಳಡಿ ಸಿಕ್ಕು ಒದ್ದಾಡುತ್ತಿದೆ
‘ಓಯೊಸಿಸ್’ ಸುತ್ತಲಿನ ಪ್ರೇಮಿಗಳು
ಮನೆಗೆ ಮರಳು ಬೀಳಲು ಬಿಟ್ಟು
ದಿನ್ನೆಯ ಮೇಲಿಂದ ಹಾರುತ್ತಿದ್ದರೆ
ವಿದೇಶಿಗರು ಜಾರು ಬಂಡೆಯಾಡುತ್ತಿದ್ದಾರೆ.
*****

ಪುಸ್ತಕ: ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣುಶಕ್ತಿಗಡಿಯಾರ
Next post ನಾನು ಎಲ್ಲಿ ಕರೆದೆ ನಿನ್ನ?

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…