ನಾನು ಎಲ್ಲಿ ಕರೆದೆ ನಿನ್ನ?

ನಾನು ಎಲ್ಲಿ ಕರೆದೆ ನಿನ್ನ?
ನೀನೆ ಬಂದೆ ಬೆನ್ನಿಗೆ
ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ

ಕಾಡಿ ಬೇಡಿ ಭಾಷೆ ಹೂಡಿ
ಹನಿ ಚಿಮ್ಮಿದೆ ಕಣ್ಣಲಿ
ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ

ಹಾಲು ಜೇನು ಹಣ್ಣ ರಸದ
ಅಭಿ‍ಷೇಕವ ಸಲಿಸಿ
ರುಚಿ ಜಿನುಗುವ ತಿನಿಸ ಇತ್ತೆ ಕನಸಿನ ಮಳೆ ಕರೆಸಿ

ತಂಗಳು ಬಾಳಾಯಿತು ಸವಿ-
ಗೊಂದಲಗಳ ಹಾಡು
ಬಣ್ಣದ ಎಲೆ ಹೂ ತುಂಬಿದ, ಗುರಿ ಮರೆಸಿದ ಕಾಡು

ಗಣಿತ ಪಾಠವಾದ ಬಾಳ
ಭಾವಮಣಿತಕೊಲಿಸಿ
ತೊರೆದು ನಿಂತೆ ನನ್ನ ಹಂಗ, ನೆನಪ ಮಾತ್ರ ವರಿಸಿ

ನೀನು ನಿನ್ನ ಪ್ರೀತಿ ರೀತಿ
ಎಲ್ಲ ಗೂಢ ನನಗೆ
ಅರ್ಥ ಯಾಕೆ, ನಿತ್ಯ ಸ್ಮರಣೆ, ಗಂಗೆ ನೀನು ನನಗೆ
*****
ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿ
Next post ನಗೆ ಡಂಗುರ – ೧೦೮

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…