ನಾನು ಎಲ್ಲಿ ಕರೆದೆ ನಿನ್ನ?

ನಾನು ಎಲ್ಲಿ ಕರೆದೆ ನಿನ್ನ?
ನೀನೆ ಬಂದೆ ಬೆನ್ನಿಗೆ
ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ

ಕಾಡಿ ಬೇಡಿ ಭಾಷೆ ಹೂಡಿ
ಹನಿ ಚಿಮ್ಮಿದೆ ಕಣ್ಣಲಿ
ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ

ಹಾಲು ಜೇನು ಹಣ್ಣ ರಸದ
ಅಭಿ‍ಷೇಕವ ಸಲಿಸಿ
ರುಚಿ ಜಿನುಗುವ ತಿನಿಸ ಇತ್ತೆ ಕನಸಿನ ಮಳೆ ಕರೆಸಿ

ತಂಗಳು ಬಾಳಾಯಿತು ಸವಿ-
ಗೊಂದಲಗಳ ಹಾಡು
ಬಣ್ಣದ ಎಲೆ ಹೂ ತುಂಬಿದ, ಗುರಿ ಮರೆಸಿದ ಕಾಡು

ಗಣಿತ ಪಾಠವಾದ ಬಾಳ
ಭಾವಮಣಿತಕೊಲಿಸಿ
ತೊರೆದು ನಿಂತೆ ನನ್ನ ಹಂಗ, ನೆನಪ ಮಾತ್ರ ವರಿಸಿ

ನೀನು ನಿನ್ನ ಪ್ರೀತಿ ರೀತಿ
ಎಲ್ಲ ಗೂಢ ನನಗೆ
ಅರ್ಥ ಯಾಕೆ, ನಿತ್ಯ ಸ್ಮರಣೆ, ಗಂಗೆ ನೀನು ನನಗೆ
*****
ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿ
Next post ನಗೆ ಡಂಗುರ – ೧೦೮

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys