Home / ಲೇಖನ / ವಿಜ್ಞಾನ / ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ “ಪೊಲರೈಯ್ಡ್ ಕ್ಯಾಮರಾ” ಎಂದು ಕರೆಯಲಾಗುವ ತಕ್ಷಣ ಚಿತ್ರ ಬಿಂಬವನ್ನು ತಯಾರಿಸಿಕೊಡುವ ಅದ್ಭುತ ಕ್ಯಾಮರ ಇದಾಗಿದೆ. ಇದು ವಿಜ್ಞಾನ ಜಗತ್ತಿಗೆ ನೂತನ ಕೊಡುಗೆಯಾಗಿದೆ. ಇದನ್ನು ಸಂಯುಕ್ತಸಂಸ್ಥಾನದ ‘ಎಡ್ವಿನ್ ಹರ್ಬರ್ಟ್’ ಎಂಬ ವಿಜ್ಞಾನಿ
ಕಂಡುಹಿಡಿದ. ಅಲ್ಲಿಯವರೆಗೆ “ಕಪ್ಪು-ಬಿಳುಪು ಕ್ಯಾಮರಾಗಳು ಸಾಕಷ್ಟು ಸಮಯದ ನಂತರ ಫಲಿತಾಂಶ ನೀಡುತ್ತಿದ್ದವು. ಆದರೆ ತತ್‌ಕ್ಷಣದಲ್ಲಿ ಅದು ಬಣ್ಣದಲ್ಲಿ ಫೋಟೋಗಳನ್ನು ನೀಡಬಲ್ಲ ಈ ಕ್ಯಾಮರಾ ದುಬಾರಿಯಾಗಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ.

ಮುಂದುವರೆದಂತೆ ೧೯೭೨ರಲ್ಲಿ ಎಡ್ವಿನ್. ಹೆಚ್. ಲ್ಯಾಂಡ್ ಎಸ್.ಎಕ್ಷ್-೭೦ ಎಂದು ಕರೆಯಲ್ಪಡುವ ತನ್ನ ಕ್ಯಾಮರದ ಸುಧಾರಿತ ‘ಜೇಬು ಮಾದರಿ’ಯನ್ನು ಸೊಸೈಟಿ ಆಫ್
ಪೋಟೋಗ್ರಾಫಿಕ್ ಸೈಂಟಿಸ್ಟ್ ಅಂಡ್ ಇಂಜಿನಿಯರ್ಸ್‌ಗೆ ಪರಿಚಯಿಸಿದ. ಇದರಲ್ಲಿ ಛಾಯಾ ಚಿತ್ರಣ ಕ್ರಿಯೆಯು ಸೂಕ್ಷ್ಮ ಎಲೆಕ್ಟ್ರಾನಿಕ್ ಪರಿಧಿಗಳಿಂದ ತಮ್ಮಷ್ಟಕ್ಕೆ ತಾವೇ ನಿಯಂತ್ರಿಸಲ್ಪಡುತ್ತವೆ. ೧೯೪೮ರಲ್ಲಿ ಎಡ್ವಿನ್ ಲ್ಯಾಂಡನು “ಪೊಲಾರ್ ವಿಷನ್” ಎಂದು ಕರೆಯಲ್ಪಡುವ ಒಂದು ತಕ್ಷಣ ಗೃಹಚಲನ ಚಿತ್ರ ವ್ಯವಸ್ಥೆಯನ್ನು ಕಂಡುಹಿಡಿದು ಪರಿಚಯಿಸಿದ. ಇಂತಹ ಕ್ಯಾಮರಗಳು ಅದ್ಭುತವಾಗಿದ್ದು ಪ್ರಪಂಚದಾದ್ಯಂತ ಹವ್ಯಾಸಿ ಛಾಯಾ ಚಿತ್ರಗಾರರಿಂದ ಬಳಕೆಯಾಗಲ್ಪಡುತ್ತವೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...