ಕೂಪಕ್ಕೆ ಬಿದ್ದ ಬೆಳಕು

ಆಸೆಯನ್ನೊಮ್ಮೆ ಜಾಡಿಸಿ ಕೊಡವಿ
ಮೇಲೆದ್ದು ಬಂದವನಂತೆ
ನಟಿಸಿದ ಆತ
ಕಾವಿ, ಜಪಮಣಿಯನ್ನು
ಬಹಳವಾಗಿ ಪ್ರೀತಿಸುತ್ತ
ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ.

ಚಿತ್ರ-ವಿಚಿತ್ರ ಬದುಕಿನ
ಲಯವ ಮಾರ್ಪಡಿಸಲೆಂಬಂತೆ
ಜಗಕೆ ಬೆಳಕಿನ ಬಟ್ಟೆ ತೊಡಿಸಲು
ಮಠ ಮಾನ್ಯವಾಯಿತು

ಸಂಗ ಅರಸಿ ಬಂದರು
ಐಹಿಕರು, ಪಾಪಿಗಳು ಮನಃಶ್ಯಾಂತಿ
ಬಯಸಿ,
ಫಲ ಪುಷ್ಪ, ಬೆಳ್ಳಿ ಬಂಗಾರ
ಕಾಣಿಕೆಯಾಗಿ ನೀಡುತ್ತ
ತಮ್ಮ ಪಾಪದ ಲೇಪನ
ಕಣಕಣವಾಗಿ ಕರಗಲೆಂಬಂತೆ.

ಆಸೆ ತ್ಯಜಿಸಿದ ದೊರೆ
ಭಕ್ತರ ಆಸೆ ಪೂರ್‍ಐಸಲು
ದಾನವನ್ನು ಎರಡೂ ಕೈಗಳಿಂದ
ಬಾಚಿಕೊಂಡ-
ಬಯಲ ಆಲಯದಲ್ಲೂ
ಅದೇ ಕೊಳೆತ ಹಣ್ಣಿನ ತಿರುಳು
ಅಪ್ಯಾಯವಾದವು
ನಿಧಾನವಾಗಿ ಮತ್ತದೇ ಕೂಪಕ್ಕೆ ಬಿದ್ದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿವು
Next post ವಾನ್‌ಗಾಫ್‌ನ ಬೂಟುಗಳು

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys