Home / ಕವನ / ಕವಿತೆ / ಕೇಂದ್ರದ ಸುತ್ತ

ಕೇಂದ್ರದ ಸುತ್ತ

ಜನನದಿಂದ ಆ ಮರಣದವರೆಗೆ
ಜೀವನದ ಮಧ್ಯ ಮಹಜಾಲದುಡಿಗೆ

ಭೂಮ್ಯೋಮ ಭೂಮ ವಿನ್ಯಾಸವಿಹುದು
ಸಂಸಾರ ಮತ್ತು ಸನ್ಯಾಸವಿಹುದು

ಮನಮೊನೆಯ ಮೇಲೆ ಕುಳಿತಿಹುದು ಹರಣ
ಹಾರುವುದೆ ಅದರ ಅತ್ಯಂತ ಧ್ಯಾನ

ಹನಿಹನಿಯು ಕೂಡಿ ಹಗರಣದ ಹಣವು
ಸೋರುವುದೆ ಅದರ ಚಿರನವ್ಯ ಗುಣವು

ಚಣಚಣವು ಹರಿದು ಬಾಳಾಯ್ತು ನದಿಯು
ಕುಣಿಕುಣಿದ ಸೂತ್ರ ನಿರ್ಣಯದ ವಿಧಿಯು

ಅರಳುವುದು ಸುಮವು ತುಂಬುವುದು ಮನವು
ಹೊರಳುವುದು ನೆಲಕೆ ಅದೊ ನೋಡು ನೆನವು

ತೊಗಲುಡಿಕೆಯದಕೆ ಮಾಂಸಲದ ಜೆಲುವು
ಹಗಲುಡಿಗೆ ಕಳಚಿ ರಾತ್ರಿಯಲಿ ಎಲುವು

ಚಿರ ಯೌವನದಲಿ ಮೆರೆಯುವಳು ಮುದುಕಿ
ನವ ಭಾವದಲ್ಲಿ ಬುದ್ದಿಯನು ಮುಸುಕಿ

ನಗು ಹೂವು ನೋಡ ಅಳುದೇಟಿಗಂಟಿ
ಸುಖ ಚೆಂಗುಲಾಬಿ ನೋವಾಗೆ ಕಂಟಿ

ಬಂದಿಹುದು ಪ್ರಾಣ ಇರಲಿಕೇನಲ್ಲ
ಬಂದಿಹುದು ವಯಸು ಚಿರವಾಗಿಯಲ್ಲ

ಅಹ ಸೃಷ್ಟಿ ಮೂಲ ಬಹು ಚಿತ್ರ ಚಿತ್ರ
ನಗುತಿಹುದು ತತ್ವ ತಿಳಿದಂಥ ನೇತ್ರ

ನೆರೆದಂತೆ ಜಾತ್ರೆ ಮರುದೀನಕೆ ಬಯಲು
ಬಯಲಾಟ ರಾತ್ರಿ ಬೆಳಗಾಗೆ ಬಯಲು

ಬೀಸಿದಳು ಅಕ್ಕ ಬಯಲಿನಲಿ ಬಟ್ಟೆ
ಬಟ್ಟೆಯನು ಹಿಡಿಯೆ ಅದು ಮೂರ ಬಟ್ಟೆ

ಸೆಳೆಹುದು ಜಾಲ ಹಣ ಬೆಡಗಿನಲ್ಲಿ
ನಂದನದಿ ಬಾಲ ಬೆರಗಾಗಲಿಲ್ಲಿ

ನಗುವೇನು ಆಟ ಹರಿದಾಟಗಳಲಿ
ಚಿಗುರುವುದು ಒಗರು ಹಾರಾಟಗಳಲಿ

ಸೂತ್ರಕ್ಕೆ ಕುಣಿದು ಮೈಮೈಯ ಮಣಿದು
ಪಾತ್ರಗಳ ಬಣ್ಣ ಬಣ್ಣದಲಿ ಹೆಣೆದು

ಮಳೆ ಬಂದು ನಿಂತ ಅಡವಿಯಲಿ ಮೌನ
ಇಳೆಗಾಯ್ತು ಧನ್ಯದೋಕುಳಿಯ ಮಾನ

ಬೀಜಕ್ಕೆ ಇಳೆಗೆ ಬರುವಂಥ ತವಕ
ಬೇನೆಯಲಿ ಬಳಲಿ ಜೀವರಸ ಪಾಕ

ಆಕ್ರಂದನಕ್ಕೆ ತೊಟ್ಟಲಿನು ಕಟ್ಟಿ
ಆನಂದವೆನುತ ಹೆಸುರಿಟ್ಟು ತಟ್ಟಿ

ತಾಯ್ತನದ ಸಿರಿಯ ಹೂ ಮಾಲೆ ಮುಡಿದು
ಬೀಗುವುದು ಕಲ್ಲು ಹಿರಿತನವ ಪಡೆದು

ಅತ್ತಿತ್ತ ಕಾಲ ಲಯದಲ್ಲಿ ಹಾಕಿ
ಒಂದೆರಡು ಒಡೆದು ಒಂದಾಗಿ ಸೋಕಿ
ಕೇಂದ್ರವನೆ ಹಿಡಿದು ಸುತ್ತಲೂ ಸುತ್ತಿ
ಜೀವಾಣು ಬಹುದು ಕೇಂದ್ರಕ್ಕೆ ಒತ್ತಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...