Home / ಕವನ / ಕವಿತೆ / ಕೇಂದ್ರದ ಸುತ್ತ

ಕೇಂದ್ರದ ಸುತ್ತ

ಜನನದಿಂದ ಆ ಮರಣದವರೆಗೆ
ಜೀವನದ ಮಧ್ಯ ಮಹಜಾಲದುಡಿಗೆ

ಭೂಮ್ಯೋಮ ಭೂಮ ವಿನ್ಯಾಸವಿಹುದು
ಸಂಸಾರ ಮತ್ತು ಸನ್ಯಾಸವಿಹುದು

ಮನಮೊನೆಯ ಮೇಲೆ ಕುಳಿತಿಹುದು ಹರಣ
ಹಾರುವುದೆ ಅದರ ಅತ್ಯಂತ ಧ್ಯಾನ

ಹನಿಹನಿಯು ಕೂಡಿ ಹಗರಣದ ಹಣವು
ಸೋರುವುದೆ ಅದರ ಚಿರನವ್ಯ ಗುಣವು

ಚಣಚಣವು ಹರಿದು ಬಾಳಾಯ್ತು ನದಿಯು
ಕುಣಿಕುಣಿದ ಸೂತ್ರ ನಿರ್ಣಯದ ವಿಧಿಯು

ಅರಳುವುದು ಸುಮವು ತುಂಬುವುದು ಮನವು
ಹೊರಳುವುದು ನೆಲಕೆ ಅದೊ ನೋಡು ನೆನವು

ತೊಗಲುಡಿಕೆಯದಕೆ ಮಾಂಸಲದ ಜೆಲುವು
ಹಗಲುಡಿಗೆ ಕಳಚಿ ರಾತ್ರಿಯಲಿ ಎಲುವು

ಚಿರ ಯೌವನದಲಿ ಮೆರೆಯುವಳು ಮುದುಕಿ
ನವ ಭಾವದಲ್ಲಿ ಬುದ್ದಿಯನು ಮುಸುಕಿ

ನಗು ಹೂವು ನೋಡ ಅಳುದೇಟಿಗಂಟಿ
ಸುಖ ಚೆಂಗುಲಾಬಿ ನೋವಾಗೆ ಕಂಟಿ

ಬಂದಿಹುದು ಪ್ರಾಣ ಇರಲಿಕೇನಲ್ಲ
ಬಂದಿಹುದು ವಯಸು ಚಿರವಾಗಿಯಲ್ಲ

ಅಹ ಸೃಷ್ಟಿ ಮೂಲ ಬಹು ಚಿತ್ರ ಚಿತ್ರ
ನಗುತಿಹುದು ತತ್ವ ತಿಳಿದಂಥ ನೇತ್ರ

ನೆರೆದಂತೆ ಜಾತ್ರೆ ಮರುದೀನಕೆ ಬಯಲು
ಬಯಲಾಟ ರಾತ್ರಿ ಬೆಳಗಾಗೆ ಬಯಲು

ಬೀಸಿದಳು ಅಕ್ಕ ಬಯಲಿನಲಿ ಬಟ್ಟೆ
ಬಟ್ಟೆಯನು ಹಿಡಿಯೆ ಅದು ಮೂರ ಬಟ್ಟೆ

ಸೆಳೆಹುದು ಜಾಲ ಹಣ ಬೆಡಗಿನಲ್ಲಿ
ನಂದನದಿ ಬಾಲ ಬೆರಗಾಗಲಿಲ್ಲಿ

ನಗುವೇನು ಆಟ ಹರಿದಾಟಗಳಲಿ
ಚಿಗುರುವುದು ಒಗರು ಹಾರಾಟಗಳಲಿ

ಸೂತ್ರಕ್ಕೆ ಕುಣಿದು ಮೈಮೈಯ ಮಣಿದು
ಪಾತ್ರಗಳ ಬಣ್ಣ ಬಣ್ಣದಲಿ ಹೆಣೆದು

ಮಳೆ ಬಂದು ನಿಂತ ಅಡವಿಯಲಿ ಮೌನ
ಇಳೆಗಾಯ್ತು ಧನ್ಯದೋಕುಳಿಯ ಮಾನ

ಬೀಜಕ್ಕೆ ಇಳೆಗೆ ಬರುವಂಥ ತವಕ
ಬೇನೆಯಲಿ ಬಳಲಿ ಜೀವರಸ ಪಾಕ

ಆಕ್ರಂದನಕ್ಕೆ ತೊಟ್ಟಲಿನು ಕಟ್ಟಿ
ಆನಂದವೆನುತ ಹೆಸುರಿಟ್ಟು ತಟ್ಟಿ

ತಾಯ್ತನದ ಸಿರಿಯ ಹೂ ಮಾಲೆ ಮುಡಿದು
ಬೀಗುವುದು ಕಲ್ಲು ಹಿರಿತನವ ಪಡೆದು

ಅತ್ತಿತ್ತ ಕಾಲ ಲಯದಲ್ಲಿ ಹಾಕಿ
ಒಂದೆರಡು ಒಡೆದು ಒಂದಾಗಿ ಸೋಕಿ
ಕೇಂದ್ರವನೆ ಹಿಡಿದು ಸುತ್ತಲೂ ಸುತ್ತಿ
ಜೀವಾಣು ಬಹುದು ಕೇಂದ್ರಕ್ಕೆ ಒತ್ತಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...