Home / ಲೇಖನ / ವಿಜ್ಞಾನ / ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!

ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!

ತಾಯಿಯ ಹಾಲು ಅಮೃತಕ್ಕೆ ಸಮಾನ. ಬೆಳೆಯುವ ಮಕ್ಕಳು ಈ ಹಾಲನ್ನು ಸೇವಿಸಿ ಭವಿಷತ್ತಿನಲ್ಲಿ ಕಾಯಿಲೆಗಳಿಲ್ಲದೇ ಆರೋಗ್ಯವಾಗಿ ಬದುಕಬಹುದು, ಎಂದು ವೈದ್ಯಲೋಕ ಮನವಿ ಮಾಡಿಕೊಳ್ಳುತ್ತಲೇ ಇದೆ. ಈ ಹಾಲು ತಾಯಿ ಉಣ್ಣುವ ಆಹಾರದಿಂದಲೇ ರಕ್ತವಾಗಿ, ಹಾಲಾಗಿ ಬರುತ್ತದೆಂದ ಮೇಲೆ ಆಹಾರ ಪದಾರ್ಥಗಳು ಶುದ್ಧವಾಗಿರಬೇಕೆಂಬುವುದು ಅಷ್ಟೇ ನಿಜ. ಆದರೆ ಇಂದಿನ ಆಹಾರ, ವಿಷಯುಕ್ತವಾಗಿ ತಾಯಿಯ ಹಾಲಲ್ಲೂ ಸಹಜವಾಗಿ ವಿಷದ ಅಂಶಗಳು ಬರುತ್ತವೆ ಎಂದು ಇತ್ತೀಚಿಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ವಿಷದ ಅಂಶ ಅವ್ಯಕ್ತವಾಗಿ ಸೇರಿಸುವದರಿಂದ ಆಹಾರದ ಗುಣವನ್ನು ಅಳೆಯುವುದು ಕಷ್ಟ ಮತ್ತು ಪ್ರತಿಯೊಬ್ಬ ತಾಯಿಗೂ ಆಹಾರವನ್ನು ವ್ಶೆದ್ಯಕೀಯವಾಗಿ ಪರೀಕ್ಷಿಸಿ ಕೊಡುವುದಂತೂ ಅಸಾಧ್ಯ ಹೀಗಾಗಿ ನಿಷ್ಕಲ್ಮಶವೆಂದು ತಿಳಿದ ತಾಯಿಯ ಹಾಲೇ ವಿಷವಾದಾಗ ಶುದ್ಧತೆ ಹುಡುಕುವುದಾದರೂ ಏಲ್ಲಿ! ಎಂಬುವುದು ನಾಗರೀಕರ ಪ್ರಶ್ನೆ.

ಏಷ್ಯಾ, ಆಫ್ರಿಕಾ, ಲ್ಯಾಟಿನ್, ಅಮೆರಿಕಾ ನಾಡುಗಳಲ್ಲಿ ಕೀಟನಾಶಕಗಳ ಬಳಕೆ ಅತಿಯಾಗಿದ್ದು ಗಾಳಿ ಆ ಅಂಶವನ್ನು ತಳ್ಳಿಕೊಂಡು ಹೋಗಿ ಶುದ್ಧ ಪ್ರದೇಶವನ್ನು ಈಗ ವಿಷಮಯಗೊಳಿಸುತ್ತಲಿದೆ. ಇದು ಆಹಾರದ ಜತೆಯಲ್ಲಿ ಅಥವಾ ನೀರಿನಲ್ಲಿ ಸೇವಿಸುವ ಗಾಳಿಯಲ್ಲಿ ಸೇರಿ ತಾಯಿಯ ಹಾಲಿಗೂ ಪಾದಾರ್ಪಣೆ ಮಾಡಿದೆ. ಈ ಮೂಲಕ ಮಗುವಿಗೆ ಉಣಿಸಲ್ಪಡುತ್ತದೆ. ಹೀಗಾಗಿ ತಾಯಿಯ ಹಾಲೂ ಕೂಡಾ ಕೀಟನಾಶಕ ನಂಜಿನಿಂದ ಮುಕ್ತವಾಗಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ.

೧೯೭೭ ರಲ್ಲಿ ಜಪಾನ್, ಅಮೆರಿಕಾದಲ್ಲೆಲ್ಲ ಸಂಶೋಧಿಸಿದಾಗ ತಾಯಿಯ ಹಾಲಿನಲ್ಲಿ ೧,೧೦೦ ರಿಂದ ೧,೫೦೦ ವರೆಗೆ ಪಿ. ಸಿ. ಬಿ. ಕೀಟನಾಶಕದ ನಂಜು ೧,೯೦೦ ರಷ್ಟು ಡಿ.ಡಿ.ಟಿ. ನಂಜು ೨,೫೦೦ ರಷ್ಟು ಬಿ. ಹೆಚ್. ಸಿ. ನಂಜು ಕಂಡು ಬಂದಿತು. ಇಟಲಿ, ಗ್ರೀಸ್, ಕೆನಡಾದ ತಾಯಂದಿರರ ಹಾಲಿನಲ್ಲಿ ಈ ಕೀಟನಾಶಕದ ನಂಜಿನ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. B.H.C. ನಂಜು ೭ ರಿಂದ ೧೫ ರಷ್ಟು D.D.T. ನಂಜು ೩೫ ರಿಂದ ೪೭ ರಷ್ಟು P.C.B. ನಂಜು ೭೦ರ ವರೆಗಿತ್ತು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಅಮೇರಿಕಾದಲ್ಲಿ D.D.T.ಯ ಮೇಲೆ ನಿರ್ಬಂಧವಿರುವುದರಿಂದ ಅಲ್ಲಿಯ ತಾಯಂದಿರರ ಮೇಲೆ ಹಾಲಿನಲ್ಲಿ D.D.T. ಗಿಂತ P.C.B. ನಂಜು ಹೆಚ್ಚಿನ ಪ್ಪಮಾಣದಲ್ಲಿ ಕಂಡು ಬಂದಿದೆ. ಭಾರತದಲ್ಲಿ ೧೯೮೮-೯೯ ಸುಮಾರಿನ ಅಧ್ಯಯನದಂತೆ ತಾಯಿಯ ಹಾಲಿನಲ್ಲಿ ೭೫೦ ರಷ್ಟು B.H.C. ನಂಜು ೩,೭೪೦ ರಷ್ಟು, D.D.T ನಂಜು ಕಂಡು ಬಂದಿದೆ. ಚೀನಾ, ಕೀನ್ಯಾ ಮೆಕ್ಸಿಕೊಗಳ ತಾಯಿಂದಿರರ ಹಾಲಿನಲ್ಲಿ ಈ ನಂಜಿನ ಅಂಶಗಳು ಅಗಾಧ ಪ್ರಮಾಣದಲ್ಲಿ ಇರುವುದರಿಂದ ಅಲ್ಲಿಯ ಮಕ್ಕಳ ಗತಿ ದೇವರೇ ಬಲ್ಲ. ಅಂದರೆ ಇಲ್ಲಿಯ ತಾಯಂದಿರರ ಹಾಲಿನಲ್ಲಿ೬,೬೦೦ ರವರೆಗೆ ನಂಜು ೬,೨೦೦ ರವರೆಗೆ ಇದೆ, ಎಂದು ದೃಢಪಟ್ಟಿದೆ. ಇದು ಅಪಾಯದ ಮಟ್ಟ ಇನ್ನೂ ಏಷ್ಯಾ, ಆಫ್ರಿಕಾ, ಅಮೇರಿಕಾದ ಮಕ್ಕಳು ಕೀಟನಾಶಕ ವಿಷಯುಕ್ತ ಹಾಲನ್ನು ಕುಡಿಯುತ್ತವೆ. ಆದರೆ ಯುರೋಪಿನ ಮಕ್ಕಳು ಅಷ್ಟೇನೂ ನಂಜಿನ ಮಿಶ್ರಣಡ ಹಾಲು ಕುಡಿಯಲಾರಂಭಿಸಿಲ್ಲವೆಂದು ವರದಿ ತಿಳಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...