ಹರಿಯ ಭಜಿಸಿದವರಿಗಿಲ್ಲ

ಹರಿಯ ಭಜಿಸಿದವರಿಗಿಲ್ಲ
ಹಸಿವು ಅನ್ನಾದಿಗಳಚಿಂತೆ|
ಹರಿಯ ಭಜಿಸಿದವರಿಗಿಲ್ಲ
ಜ್ಞಾನಾದಿಗಳ ಕೊರತೆ|
ಹರಿಯಭಜಿಸದಲೆ ಅಲೆದರೆಲ್ಲುಂಟು?
ಅಣುರೇಣುತೃಣಕಾಷ್ಠ ಅವನ
ಅಧೀನವಾಗಿರುವಾಗ||

ದುಡಿದವರಿಗೆಲ್ಲಾ
ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ
ಕುಬೇರನ ಬಳಿಯಲ್ಲಿರುತ್ತಿತ್ತೇ ಭಂಡಾರ|
ಓದಿದವರಿಗೆಲ್ಲ ವಿದ್ಯೆ ಒಲಿದಿದ್ದರೆ
ಸರಸ್ವತಿ ಬಳಿ ಇರುತ್ತಿತೇ ಜ್ಞಾನಸಾಗರ
ಹರಿಯ ಕೃಪೆಯಿಂದಾಗಲಿಲ್ಲವೆ
ವಾಲ್ಮೀಕಿ ರಾಮಾಯಣ||

ಅಕ್ಷರವನರಿಯದ ಬಾಲಕ ತಿಮ್ಮಣ್ಣ
ಹರಿಯನುಭಜಿಸಿ ಆಸ್ಥಾನ ದಿವಾನನಾದ|
ಹರಿಯಭಜಿಸಿ ಅಂತ್ಯ ಸಮಯದಿ
ಅಜಮಿಳನು ಮೋಕ್ಷವ ಪಡೆದ|
ಈ ಕಲಿಯುಗದಲಿ
ಹರಿಯ ನಂಬಿದ ಕನಕದಾಸರು
ಶ್ರೀಕೃಷ್ಣನ ದರುಶನ ಪಡೆದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!
Next post ಗೋರಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys