ಸ್ವಾಗತವೋ ಬೀಳ್ಕೊಡುಗೆಯೋ!

ಅಡ್ಡಾಡುತ್ತಾ ದಿಕ್ತಪ್ಪಿ ಬಂದ
ತುಂಡಕರು
ಕಾಲಿಗೆ ತೊಡರುತ್ತಾ
ಮುದ್ದುಗರೆಯುವ ನಿಲುಮೆಗೆ
ಕೊಚ್ಚಿ ಹೋಗಿ…..

ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ
ಅಂಡಲೆಯುವ ಜೀವಾತ್ಮವ
ನಿಯತಕ್ಕೆ ಕಟ್ಟಿ ಹಾಕುವುದೂ
ಹಿಂಸೆಯೇ ಎಂದರಿವಾಗುವ
ಕಾಲಕ್ಕೆ ಮೀರುತ್ತದೆ ಕಾಲ.

‘ಇದೋ ಬಾಗಿಲು ತೆರೆದಿಟ್ಟಿದೆ
ಯಾರ ಅಂಕೆಯೂ
ಯಾವ ಶಂಕೆಯೂ ಇಲ್ಲದೇ
ಬೇಕೆಂದೆಡೆಗೆ ಹಾರು’
*

ಸ್ವಾಗತವೋ, ಬೀಳ್ಕೊಡುಗೆಯೋ!
*

ಅಕಾಲಿಕ ನಿರ್ಧಾರದ ಆ ಕ್ಷಣ
ಉಸಿರು ಅದುಮುತ್ತಿರುವ ಸಂಕಟಕ್ಕೆ
ಚಡಪಡಿಸುತಿರುವ ಜೀವ.
*

ನೀರ ಸೆಳೆತಕ್ಕೆ ಬಿದ್ದ ಮೀನು
ಅದಿನ್ನೆಷ್ಟು ಈಜಬಹುದು
ಜೀವ ಸೋಲದೇ?
ಆಡುತ್ತಾಡುತ್ತಲೇ
ಯಾರೋ ನಿರ್ದಾಕ್ಷಿಣ್ಯದಿ
ಹೊರ ತೆಗೆದೆಸೆದರೆ
ಬಾಯ್ಬಿಡುತಿಹ ಪ್ರಾಣಕ್ಕೆ
ಅನಾಯಾಸದಿ ಮುಕ್ತಿಯ
ದಡ ಸೇರಿಸುವ
ಕರುಣಾಳುವಿಗೆ
ವಿದಾಯ ಹೇಳಿ
ನಿರುಮ್ಮಳವಾಗಿ
ತೆರೆದ ಬಾಗಿಲಿನಿಂದ ಕಾಲೆಳೆಯುತ್ತಾ
ಬಟ್ಟಂಬಯಲಿಗೆ ಬಂದು ನಿಂತರೆ

ಆಗಸ ತುಂಬಿದ ನಕ್ಷತ್ರಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ
Next post ಮನ ಮಂಥನ ಸಿರಿ – ೩

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys