ಸ್ವಾಗತವೋ ಬೀಳ್ಕೊಡುಗೆಯೋ!

ಅಡ್ಡಾಡುತ್ತಾ ದಿಕ್ತಪ್ಪಿ ಬಂದ
ತುಂಡಕರು
ಕಾಲಿಗೆ ತೊಡರುತ್ತಾ
ಮುದ್ದುಗರೆಯುವ ನಿಲುಮೆಗೆ
ಕೊಚ್ಚಿ ಹೋಗಿ…..

ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ
ಅಂಡಲೆಯುವ ಜೀವಾತ್ಮವ
ನಿಯತಕ್ಕೆ ಕಟ್ಟಿ ಹಾಕುವುದೂ
ಹಿಂಸೆಯೇ ಎಂದರಿವಾಗುವ
ಕಾಲಕ್ಕೆ ಮೀರುತ್ತದೆ ಕಾಲ.

‘ಇದೋ ಬಾಗಿಲು ತೆರೆದಿಟ್ಟಿದೆ
ಯಾರ ಅಂಕೆಯೂ
ಯಾವ ಶಂಕೆಯೂ ಇಲ್ಲದೇ
ಬೇಕೆಂದೆಡೆಗೆ ಹಾರು’
*

ಸ್ವಾಗತವೋ, ಬೀಳ್ಕೊಡುಗೆಯೋ!
*

ಅಕಾಲಿಕ ನಿರ್ಧಾರದ ಆ ಕ್ಷಣ
ಉಸಿರು ಅದುಮುತ್ತಿರುವ ಸಂಕಟಕ್ಕೆ
ಚಡಪಡಿಸುತಿರುವ ಜೀವ.
*

ನೀರ ಸೆಳೆತಕ್ಕೆ ಬಿದ್ದ ಮೀನು
ಅದಿನ್ನೆಷ್ಟು ಈಜಬಹುದು
ಜೀವ ಸೋಲದೇ?
ಆಡುತ್ತಾಡುತ್ತಲೇ
ಯಾರೋ ನಿರ್ದಾಕ್ಷಿಣ್ಯದಿ
ಹೊರ ತೆಗೆದೆಸೆದರೆ
ಬಾಯ್ಬಿಡುತಿಹ ಪ್ರಾಣಕ್ಕೆ
ಅನಾಯಾಸದಿ ಮುಕ್ತಿಯ
ದಡ ಸೇರಿಸುವ
ಕರುಣಾಳುವಿಗೆ
ವಿದಾಯ ಹೇಳಿ
ನಿರುಮ್ಮಳವಾಗಿ
ತೆರೆದ ಬಾಗಿಲಿನಿಂದ ಕಾಲೆಳೆಯುತ್ತಾ
ಬಟ್ಟಂಬಯಲಿಗೆ ಬಂದು ನಿಂತರೆ

ಆಗಸ ತುಂಬಿದ ನಕ್ಷತ್ರಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ
Next post ಮನ ಮಂಥನ ಸಿರಿ – ೩

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…