Home / ಕವನ / ಕವಿತೆ / ತಿರುಗಿ ನೋಡೇ ಒಮ್ಮೆ

ತಿರುಗಿ ನೋಡೇ ಒಮ್ಮೆ

ಹಳೆಯೂರ ಧಿಕ್ಕರಿಸಿ
ಹೊಸ ಊರುಗಳ ಕನಸಿ
ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ
ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ

“ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ
ಇಟ್ಟ ಸಿಂಧೂರ, ಎದೆಕವಚ ನೀನೇ” ಎಂದು
ನನ್ನೂರ ದಾರಿಯನು ತೂರಿ ತೇರಿನ ಕಳಸ
ಏರಬಲ್ಲ ಸವಾರಧೀರ ಬಾರೋ” ಎಂದು,
ಮದಿಸಿ ಮೈಬಿಲ್ಲಿನಲಿ ಹೂಡಿದವಳೆ
ಹೊತ್ತ ಭಾರದ ಕೆಳಗೆ ತೆತ್ತ ಧನ್ಯತೆ ಪಡೆದು
ತಾಳಲಾಗದ ಸುಖದಿ ನರಳಿದವಳೆ,
ಎಲ್ಲಿ ಹೋಯಿತು ಹೇಳೆ ಹೆಣ್ಣೆ, ಘಮ ಘಮ ಹಣ್ಣೆ
ಬಿಗಿದ ಹೆಡೆ ಫಟ್ಟೆಂದು ಕಡಿಯಿತೇನೇ ?

“ಮೊಗ್ಗು ಕಚ್ಚಿದ ಎದೆಗೆ
ಹೂವು ಕಚ್ಚಿದ ಕವೆಗೆ
ಚಿಗುರು ಸೊಕ್ಕಿದ ಕೆನ್ನೆ, ಕೆಂಪುತುಟಿಗೆ
ಹಗಲಿರುಳು ತೂಗಿದವ
ಕಾಲವನೆ ತೇಗಿದವ
ಮಳೆ ಕೆರೆವವನೆ ನನ್ನ ಮಣ್ಣ ಬಿಸಿಗೆ
ಬಾರೋ ಬಾರೋ ಬದುಕು ಹಗುರ ಬಾರೋ
ಹೇರಿಕೊಳ್ಳುವೆ ನಿನ್ನ ಭಾರ ತಾರೋ”
ಎಂದು ಕೂಗಿದ ಹೆಣ್ಣೆ
ಜೇನು ಹನಿಯುವ ಹಣ್ಣೆ
ಇರುಳು ಇಳಿಯುವ ಮೊದಲೆ ಎಲ್ಲಿ ಹೋದೆ ?
ಮರುಳು ಹಾಡುವ ಮೈಯ ತೊರೆದೆ ಹೇಗೆ ?

ಅಲಕಾವತಿಯ ಕನಸುಬುರುಡೆಗಳ ಬಿಗಿದಪ್ಪಿ
ವರುಷಶಾಪವ ಈಜಿ ಬಂದ ಜೀವ
ಹೇಗೆ ತಾಳೀತು ಬಾಳೀತು ಉದುರಲು ಮುತ್ತು
ಬರಿಯ ಚಿಪ್ಪನು, ಮರೆತು ಕುದಿವ ನೋವ ?
ನಾಳೆಗಳ ಸೂತ್ರದಲಿ ನಿನ್ನೆ ನೆನಪನು ಕೋದು
ಬಾಳುವುದೆ ಜೀವನವೆ ಹೇಳು ಚೆನ್ನೆ
ಸಾರ ತೀರಿದ ಬಾಳು ತುರಿವ ತಿರುಳಿನ ಕರಟ
ದನಿಸತ್ತ ಚೇಷ್ಟೆಗಳ ಮೂಕ ಸನ್ನೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...