Home / ಲೇಖನ / ವಿಜ್ಞಾನ / ಸಮುದ್ರದಲ್ಲಿ ಏನಡಗಿದೆ!

ಸಮುದ್ರದಲ್ಲಿ ಏನಡಗಿದೆ!

೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ.

ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ ಸಾಗರ ತಳದಲ್ಲಿ ಆಳವಾದ ಕಮರಿಗಳಿದ್ದರೆ, ಫ್ಲೂರಿಡಾದ ಕರಾವಳಿ ಸಾಗರದಲ್ಲಿ ಮೈಲುಗಟ್ಟಲೇ ಎತ್ತರವಾದ ಶಿಖರಗಳಿವೆ, ಬರೆಗಾನ್ ಬಳಿ ಏರಿಳಿತಕ್ಕೊಳಗಾಗುವ ಮರಳು ದಿಣ್ಣೆಗಳಿವೆ. ಅಮೇರಿಕಾದ ಕರಾವಳಿ ಪ್ರದೇಶದ ತಳವನ್ನು ಶ್ರವಣಾತೀತ ಧ್ವನಿ ತರಂಗಗಳಿಂದ ಅಧ್ಯಯನ ಮಾಡಲಾಯಿತು.
ಅದರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆದರಿಸಿ ಸಾಗರದ ತಳದ ನಕ್ಷೆಯನ್ನು ಚಿತ್ರಿಸಿದಾಗ ಮೇಲೆ ಹೇಳಿದ ರೋಚಕ ವಿಷಯಗಳು ಬೆಳಕಿಗೆ ಬಂದವು. ಅದೇ ರೀತಿ ಮೆಕ್ಸಿಕೋ ಆಖ್ಯಾತದಲ್ಲಿ ಅಧ್ಯಯನ ನಡೆಯಿಸಿದಾಗ ಸಾಗರದ ಆಳವು ಚಂದ್ರನ ಮೈಯಂತೆ ಇರುವುದು ಕಂಡು ಬಂದಿದೆ. ಅಂದರೆ ಒಂದೆಡೆ ಆಳವಾಗಿ ಕಮರಿಗಳಿದ್ದರೆ, ಇನ್ನೊಂದೆಡೆ ಎತ್ತರವಾದ
ಶಿಖರಗಳಿವೆ. ಅವುಗಳಲ್ಲಿ ಕೆಲವೊಂದು ಕಮರಿಗಳು ಎಷ್ಟು ಆಳವಾಗಿದೆ ಎಂದರೆ ಅವು ಒಂದೊಂದು ದ್ವೀಪವನ್ನೆ ಒಡಲೊಳಗೆ ಅಡಗಿಸಿಟ್ಟುಕೊಳ್ಳಬಹುದು. ಇದಕ್ಕೆ ಕಾರಣ ಸಮುದ್ರ ತಳದಲ್ಲಿರುವ ಉಪ್ಪಿನ ದಿಣ್ಣೆಗಳ ಚಲನೆ ಇರಬೇಕೆಂದು ವಿಜ್ಞಾನಿಗಳು ನಂಬಿದ್ದಾರೆ.

ಈಗ ವಿಜ್ಞಾನಿಗಳು ಸಂಪರ್ಕಕ್ಕೋಸ್ಕರ ಸಾಗರದಾಳದಲ್ಲಿ ದ್ಯೂತಿತಂತು ಕೇಬಲ್‌ಗಳನು ಹಾಕಲು ಸಾಗರದ ತಳದ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...