Home / ಲೇಖನ / ವಿಜ್ಞಾನ / ಸಮುದ್ರದಲ್ಲಿ ಏನಡಗಿದೆ!

ಸಮುದ್ರದಲ್ಲಿ ಏನಡಗಿದೆ!

೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ.

ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ ಸಾಗರ ತಳದಲ್ಲಿ ಆಳವಾದ ಕಮರಿಗಳಿದ್ದರೆ, ಫ್ಲೂರಿಡಾದ ಕರಾವಳಿ ಸಾಗರದಲ್ಲಿ ಮೈಲುಗಟ್ಟಲೇ ಎತ್ತರವಾದ ಶಿಖರಗಳಿವೆ, ಬರೆಗಾನ್ ಬಳಿ ಏರಿಳಿತಕ್ಕೊಳಗಾಗುವ ಮರಳು ದಿಣ್ಣೆಗಳಿವೆ. ಅಮೇರಿಕಾದ ಕರಾವಳಿ ಪ್ರದೇಶದ ತಳವನ್ನು ಶ್ರವಣಾತೀತ ಧ್ವನಿ ತರಂಗಗಳಿಂದ ಅಧ್ಯಯನ ಮಾಡಲಾಯಿತು.
ಅದರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆದರಿಸಿ ಸಾಗರದ ತಳದ ನಕ್ಷೆಯನ್ನು ಚಿತ್ರಿಸಿದಾಗ ಮೇಲೆ ಹೇಳಿದ ರೋಚಕ ವಿಷಯಗಳು ಬೆಳಕಿಗೆ ಬಂದವು. ಅದೇ ರೀತಿ ಮೆಕ್ಸಿಕೋ ಆಖ್ಯಾತದಲ್ಲಿ ಅಧ್ಯಯನ ನಡೆಯಿಸಿದಾಗ ಸಾಗರದ ಆಳವು ಚಂದ್ರನ ಮೈಯಂತೆ ಇರುವುದು ಕಂಡು ಬಂದಿದೆ. ಅಂದರೆ ಒಂದೆಡೆ ಆಳವಾಗಿ ಕಮರಿಗಳಿದ್ದರೆ, ಇನ್ನೊಂದೆಡೆ ಎತ್ತರವಾದ
ಶಿಖರಗಳಿವೆ. ಅವುಗಳಲ್ಲಿ ಕೆಲವೊಂದು ಕಮರಿಗಳು ಎಷ್ಟು ಆಳವಾಗಿದೆ ಎಂದರೆ ಅವು ಒಂದೊಂದು ದ್ವೀಪವನ್ನೆ ಒಡಲೊಳಗೆ ಅಡಗಿಸಿಟ್ಟುಕೊಳ್ಳಬಹುದು. ಇದಕ್ಕೆ ಕಾರಣ ಸಮುದ್ರ ತಳದಲ್ಲಿರುವ ಉಪ್ಪಿನ ದಿಣ್ಣೆಗಳ ಚಲನೆ ಇರಬೇಕೆಂದು ವಿಜ್ಞಾನಿಗಳು ನಂಬಿದ್ದಾರೆ.

ಈಗ ವಿಜ್ಞಾನಿಗಳು ಸಂಪರ್ಕಕ್ಕೋಸ್ಕರ ಸಾಗರದಾಳದಲ್ಲಿ ದ್ಯೂತಿತಂತು ಕೇಬಲ್‌ಗಳನು ಹಾಕಲು ಸಾಗರದ ತಳದ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...