Home / ಲೇಖನ / ವಿಜ್ಞಾನ / ಸಮುದ್ರದಲ್ಲಿ ಏನಡಗಿದೆ!

ಸಮುದ್ರದಲ್ಲಿ ಏನಡಗಿದೆ!

೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ.

ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ ಸಾಗರ ತಳದಲ್ಲಿ ಆಳವಾದ ಕಮರಿಗಳಿದ್ದರೆ, ಫ್ಲೂರಿಡಾದ ಕರಾವಳಿ ಸಾಗರದಲ್ಲಿ ಮೈಲುಗಟ್ಟಲೇ ಎತ್ತರವಾದ ಶಿಖರಗಳಿವೆ, ಬರೆಗಾನ್ ಬಳಿ ಏರಿಳಿತಕ್ಕೊಳಗಾಗುವ ಮರಳು ದಿಣ್ಣೆಗಳಿವೆ. ಅಮೇರಿಕಾದ ಕರಾವಳಿ ಪ್ರದೇಶದ ತಳವನ್ನು ಶ್ರವಣಾತೀತ ಧ್ವನಿ ತರಂಗಗಳಿಂದ ಅಧ್ಯಯನ ಮಾಡಲಾಯಿತು.
ಅದರಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆದರಿಸಿ ಸಾಗರದ ತಳದ ನಕ್ಷೆಯನ್ನು ಚಿತ್ರಿಸಿದಾಗ ಮೇಲೆ ಹೇಳಿದ ರೋಚಕ ವಿಷಯಗಳು ಬೆಳಕಿಗೆ ಬಂದವು. ಅದೇ ರೀತಿ ಮೆಕ್ಸಿಕೋ ಆಖ್ಯಾತದಲ್ಲಿ ಅಧ್ಯಯನ ನಡೆಯಿಸಿದಾಗ ಸಾಗರದ ಆಳವು ಚಂದ್ರನ ಮೈಯಂತೆ ಇರುವುದು ಕಂಡು ಬಂದಿದೆ. ಅಂದರೆ ಒಂದೆಡೆ ಆಳವಾಗಿ ಕಮರಿಗಳಿದ್ದರೆ, ಇನ್ನೊಂದೆಡೆ ಎತ್ತರವಾದ
ಶಿಖರಗಳಿವೆ. ಅವುಗಳಲ್ಲಿ ಕೆಲವೊಂದು ಕಮರಿಗಳು ಎಷ್ಟು ಆಳವಾಗಿದೆ ಎಂದರೆ ಅವು ಒಂದೊಂದು ದ್ವೀಪವನ್ನೆ ಒಡಲೊಳಗೆ ಅಡಗಿಸಿಟ್ಟುಕೊಳ್ಳಬಹುದು. ಇದಕ್ಕೆ ಕಾರಣ ಸಮುದ್ರ ತಳದಲ್ಲಿರುವ ಉಪ್ಪಿನ ದಿಣ್ಣೆಗಳ ಚಲನೆ ಇರಬೇಕೆಂದು ವಿಜ್ಞಾನಿಗಳು ನಂಬಿದ್ದಾರೆ.

ಈಗ ವಿಜ್ಞಾನಿಗಳು ಸಂಪರ್ಕಕ್ಕೋಸ್ಕರ ಸಾಗರದಾಳದಲ್ಲಿ ದ್ಯೂತಿತಂತು ಕೇಬಲ್‌ಗಳನು ಹಾಕಲು ಸಾಗರದ ತಳದ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯಿಂದ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...