ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ
ನಿದ್ರೆಯೆಮಗಿಲ್ಲ
ಕನಸಿನ್ನೆಲ್ಲಿ ಬಹುದವ್ವಾ

[ದಿಟವಾದಡೆ-ನಿಜವಾದರೆ]

ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು ಹೇಳಿರುವ ವಚನ.

ನೀವು ಪುಣ್ಯವಂತರು. ನಲ್ಲ ಅಗಲಿದರೆ ಅವನ ಕನಸು ಕಂಡು ಸುಖಿಯಾಗುತ್ತೀರಿ. ಕನಸು ದಿಟವಾದರೆ ಮಾತ್ರ ನನ್ನ ನಲ್ಲ ನಿಜ. ನೀವು ಪುಣ್ಯವಂತರು. ಯಾಕೆಂದರೆ ನಿಮ್ಮ ಮನಸ್ಸು ನಿಮ್ಮ ಬಳಿ ಇದೆ, ಇಲ್ಲದ ನಲ್ಲನ ಕನಸು ತೋರುತ್ತದೆ. ಮನಸ್ಸನ್ನು ಮಹಾಲಿಂಗ ಗಜೇಶ್ವರನಿಗೆ ಕೊಟ್ಟಿರುವುದರಿಂದ ನನಗೆ ಮನಸ್ಸೂ ಇಲ್ಲ, ಆದ್ದರಿಂದಲೇ ಕನಸೂ ಇಲ್ಲ.

ಮನಸ್ಸು ಕೊಟ್ಟೆ. ಅವನು ಸಿಗಲಿಲ್ಲ. ಅವನೊಡನೆಯೇ ನನ್ನ ಮನಸೂ ಕನಸೂ ಹೋಗಿಬಿಟ್ಟಿವೆ ಎಂಬುದು ಕೇವಲ ಚೆಲುವಾದ ಮಾತುಗಳು ಮಾತ್ರವಲ್ಲ. ಅನುಭವದ ಬಗ್ಗೆ ಮಾತನಾಡಿಕೊಳ್ಳುವುದರ ಸುಳ್ಳುತನವನ್ನು ಕುರಿತದ್ದು. ಮತ್ತೂ ಮನಸು, ಕನಸು ಎರಡೂ ಇಲ್ಲವಾದ ತಹತಹ, ತಳಮಳವನ್ನು ಕುರಿತದ್ದು.

ಕೇವಲ ಅಕ್ಕ ಮಾತ್ರವಲ್ಲ, ಅನೇಕ ವಚನಕಾರರು ತಮ್ಮನ್ನು ಹೆಣ್ಣು ಎಂದು ಭಾವಿಸಿ ತಮ್ಮ ಮತ್ತು ದೇವರ ಸಂಬಂಧ ಕುರಿತು ಹೇಳಿಕೊಂಡಿದ್ದಾರೆ. ಭಕ್ತಿಯ ಹೆಣ್ಣು ಮುಖ ಅರಿಯಲು ಹೆಣ್ಣೆ ಯಾಕಾಗಬೇಕು, ಹೆಣ್ಣು ಮನಸು ಸಾಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಡನ ಕೂಗು
Next post ವಿಸ್ಮಯ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…