ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ
ನಿದ್ರೆಯೆಮಗಿಲ್ಲ
ಕನಸಿನ್ನೆಲ್ಲಿ ಬಹುದವ್ವಾ

[ದಿಟವಾದಡೆ-ನಿಜವಾದರೆ]

ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು ಹೇಳಿರುವ ವಚನ.

ನೀವು ಪುಣ್ಯವಂತರು. ನಲ್ಲ ಅಗಲಿದರೆ ಅವನ ಕನಸು ಕಂಡು ಸುಖಿಯಾಗುತ್ತೀರಿ. ಕನಸು ದಿಟವಾದರೆ ಮಾತ್ರ ನನ್ನ ನಲ್ಲ ನಿಜ. ನೀವು ಪುಣ್ಯವಂತರು. ಯಾಕೆಂದರೆ ನಿಮ್ಮ ಮನಸ್ಸು ನಿಮ್ಮ ಬಳಿ ಇದೆ, ಇಲ್ಲದ ನಲ್ಲನ ಕನಸು ತೋರುತ್ತದೆ. ಮನಸ್ಸನ್ನು ಮಹಾಲಿಂಗ ಗಜೇಶ್ವರನಿಗೆ ಕೊಟ್ಟಿರುವುದರಿಂದ ನನಗೆ ಮನಸ್ಸೂ ಇಲ್ಲ, ಆದ್ದರಿಂದಲೇ ಕನಸೂ ಇಲ್ಲ.

ಮನಸ್ಸು ಕೊಟ್ಟೆ. ಅವನು ಸಿಗಲಿಲ್ಲ. ಅವನೊಡನೆಯೇ ನನ್ನ ಮನಸೂ ಕನಸೂ ಹೋಗಿಬಿಟ್ಟಿವೆ ಎಂಬುದು ಕೇವಲ ಚೆಲುವಾದ ಮಾತುಗಳು ಮಾತ್ರವಲ್ಲ. ಅನುಭವದ ಬಗ್ಗೆ ಮಾತನಾಡಿಕೊಳ್ಳುವುದರ ಸುಳ್ಳುತನವನ್ನು ಕುರಿತದ್ದು. ಮತ್ತೂ ಮನಸು, ಕನಸು ಎರಡೂ ಇಲ್ಲವಾದ ತಹತಹ, ತಳಮಳವನ್ನು ಕುರಿತದ್ದು.

ಕೇವಲ ಅಕ್ಕ ಮಾತ್ರವಲ್ಲ, ಅನೇಕ ವಚನಕಾರರು ತಮ್ಮನ್ನು ಹೆಣ್ಣು ಎಂದು ಭಾವಿಸಿ ತಮ್ಮ ಮತ್ತು ದೇವರ ಸಂಬಂಧ ಕುರಿತು ಹೇಳಿಕೊಂಡಿದ್ದಾರೆ. ಭಕ್ತಿಯ ಹೆಣ್ಣು ಮುಖ ಅರಿಯಲು ಹೆಣ್ಣೆ ಯಾಕಾಗಬೇಕು, ಹೆಣ್ಣು ಮನಸು ಸಾಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಡನ ಕೂಗು
Next post ವಿಸ್ಮಯ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…