ವಿಸ್ಮಯ

ಯಾರೋ ಬರೆದ ಕವನ
ಕಾಡಿತ್ತು ಎಡೆಬಿಡೆದೆನ್ನ ಮನ
ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ
ಬೆನ್ನು ಹತ್ತಿದ ನಕ್ಷತ್ರಿಕನಂತೆ
ಕಣ್ಣಾಡಿಸಿದೆ ಅರ್ಥವಾಗಲಿಲ್ಲ
ನವ್ಯವೋ ನವೋದಯವೋ
ಏನೋ ತೋಚಿದ್ದು ಗೀಚಿದ್ದು
ಭಟ್ಟಿ ಇಳಿಸಿದ್ದಾರೆ.

ಓದಿದೆ ಒಂದಲ್ಲ ಹತ್ತಾರು ಸಲ
ಜ್ಞಾನ ಚಕ್ಷುಗಳಿಂದ
ಪದಗಳ ಪದರವ
ನಯವಾಗಿ ಬಿಡಿಸಿದೆ.
ಅಂಟು ಅಂಟು ಬ್ರಹ್ಮಗಂಟು
ಸಾಮರಸ್ಯದ ಸವಿನಂಟು
ಒಳಹೊಕ್ಕಾಗ ವಿಸ್ಮಯ
ಶಬ್ದಲಂಕಾರದ ಚಾತುರ್‍ಯ
ಅದ್ಭುತ ಮಾಯಾಜಾಲ
ಕಳಿತ ಹೊನ್ನಿನ ಫಲ
ಒಂದೊಂದರಲ್ಲಿ ಅದೇನು ಅರ್‍ಥ
ಭಾವಾರ್‍ಥ ಗೂಢಾರ್‍ಥ
ಬೆರಗಾದೆ ಬಳಸಿದ ರೀತಿಗೆ
ಪದಗಳಿಂದ ಪದಗಳು
ಪದಗಳಲ್ಲಿ ಪದಗಳು
ಪದ್ಯವಾದದ್ದಾದರೂ ಹೇಗೆ?
ಬಾಯಿಮಾತಿನ ಮಾತಲ್ಲಿ ಬಿಡಿ
ಕಡಲ ಮಂಥನದಿಂದ
ಅಮೃತ ಹೊರ ಹೊಮ್ಮಿದಂತೆ
ಹೃದಯಾಂತರಾಳದ ಭಾವ
ಚಿಲುಮೆ ಚಿಮ್ಮಿದಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಮನಸೇ ಇಲ್ಲ, ಕನಸಿನ್ನೆಲ್ಲಿ
Next post ಮಾವು ಬಾಳೆ ತೆಂಗು ಹಲಸು

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys