ಮಾವು ಬಾಳೆ ತೆಂಗು ಹಲಸು

ಮಾವು ಬಾಳೆ, ತೆಂಗು, ಹಲಸು
ರಸದ ಕಬ್ಬು ಬೆಳೆಯಲಿ
ಸುತ್ತಮುತ್ತ ಚೈತ್ರ ಚಿತ್ರ
ಪ್ರೇಮ ಪತ್ರ ಬರೆಯಲಿ
ಜೀವಸೂತ್ರ ಗೆಲ್ಲಲಿ

ಸೂರ್ಯ ಚಂದ್ರ ಮುಗಿಲು ಚುಕ್ಕಿ
ವಿಶ್ವ ಲಾಲಿ ಹಾಡಲಿ
ಹಕ್ಕಿ ಕಂಠ ಹಾಲು ಬೋನ
ಜೇನುತುಪ್ಪ ಸುರಿಯಲಿ
ಬೇವು ಬೆಲ್ಲವಾಗಲಿ

ನೂರು ಜಾತಿ ನೂರು ಕೋತಿ
ಬೇಲಿ ಓತಿ ಹೋಗಲಿ
ಒಡಕು ಕೆಡಕು ಬೆರಕಿ ನಾಯಿ
ಬಾಲ ಮುಚ್ಚಿಹೋಗಲಿ
ನವಿಲು ಬಂದು ಆಡಲಿ

ಕೋಮು ಕೊಂಬು ಢಂಬು ಢಳಹು
ಗಂಧ ಗುಡಿಯು ಆಗಲಿ
ಕಲ್ಲು ಗುಡ್ಡ ಹೋಗಲಿ
ಅಡ್ಡ ದೊಡ್ಡ ಗಿಡ್ಡ ಮಡ್ಡ
ಬೆಳ್ಳಿ ಗುಡ್ಡವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಸ್ಮಯ
Next post ನೋವಿಲ್ಲದೌಷಧವಿಲ್ಲದಾರೋಗ್ಯ ಮೇಲಲ್ಲವೇ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…