Home / ಕವನ / ಕವಿತೆ / ಬಾಯಿಲ್ಲದವರು

ಬಾಯಿಲ್ಲದವರು

ಎಷ್ಟೋ ಸಲ ನಿಮಗನ್ನಿಸಬಹುದು
ಇದು ಮೋಸ, ಇದು ಅನ್ಯಾಯ ಎಂದು.
ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ
ಏಕೆಂದರೆ… ನಾವು ಬಾಯಿಲ್ಲದವರು.

ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ
ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ?
ವಂತಿಕೆ ಕೊಡುವೆವೆಂದರೂ ಸೀಟೇಕೆ ಇಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಶೇಕಡ ತೊಂಭತ್ತು ಬಂದರೂ ಮೆಡಿಕಲ್
ಸೀಟು ಸಿಗಲೇ ಇಲ್ಲ… ಅವನಿಗೇಕೆ
ಶೇಕಡ ನಲವತ್ತಕ್ಕೇ ಸಿಕ್ಕಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಅಭಿನಂದನೆಗಳು. ನಿಮಗೆ ನೌಕರಿ ಸಿಕ್ಕಿತು!
ಹರಿಯಾಣದ ‘ಕುಗ್ರಾಮ್’ ನಲ್ಲಿ ಕೂಡಲೆ ಸೇರಿ.
ಅರೆ! ಅವರಿಗೆ ಹೇಗೆ ತಮ್ಮೂರಿಗೇ ಆಯಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸ್ಕೂಟರ್ ಬೇಕೇ? ಬುಕ್ ಮಾಡಿ ಹೋಗಿ
ಹತ್ತೇ ವರ್ಷಗಳಲ್ಲಿ ಸ್ಕೂಟರ್ ನಿಮ್ಮದೇ!
ಕೆಲವರಿಗೆ ಕೂಡಲೇ ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಭಾನುವಾರ ಸಂಜೆ ಸಿನಿಮಾ ನೋಡಲೇ ಬೇಕು.
ವಿಪರೀತ ಗದ್ದಲ. ಖಂಡಿತ ಟಿಕೆಟ್ ಸಿಗದು.
ಬ್ಲ್ಯಾಕಲ್ಲಾದರೆ ಬೇಕಾದಷ್ಟು ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸೈಟು, ಸಿಮೆಂಟು, ಲೈಸೆನ್ಸು, ತೆರಿಗೆ
ಇನ್ನೂ ಎಷ್ಟೋ ವಿಷಯಗಳಲ್ಲಿ
ರಾಜಾರೋಷ ಅನ್ಯಾಯ ನಡೀತಿದೆಯಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
*****
೧೧-೦೭-೧೯೮೪

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...