Home / ಕವನ / ಕವಿತೆ / ಬಾಯಿಲ್ಲದವರು

ಬಾಯಿಲ್ಲದವರು

ಎಷ್ಟೋ ಸಲ ನಿಮಗನ್ನಿಸಬಹುದು
ಇದು ಮೋಸ, ಇದು ಅನ್ಯಾಯ ಎಂದು.
ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ
ಏಕೆಂದರೆ… ನಾವು ಬಾಯಿಲ್ಲದವರು.

ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ
ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ?
ವಂತಿಕೆ ಕೊಡುವೆವೆಂದರೂ ಸೀಟೇಕೆ ಇಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಶೇಕಡ ತೊಂಭತ್ತು ಬಂದರೂ ಮೆಡಿಕಲ್
ಸೀಟು ಸಿಗಲೇ ಇಲ್ಲ… ಅವನಿಗೇಕೆ
ಶೇಕಡ ನಲವತ್ತಕ್ಕೇ ಸಿಕ್ಕಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಅಭಿನಂದನೆಗಳು. ನಿಮಗೆ ನೌಕರಿ ಸಿಕ್ಕಿತು!
ಹರಿಯಾಣದ ‘ಕುಗ್ರಾಮ್’ ನಲ್ಲಿ ಕೂಡಲೆ ಸೇರಿ.
ಅರೆ! ಅವರಿಗೆ ಹೇಗೆ ತಮ್ಮೂರಿಗೇ ಆಯಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸ್ಕೂಟರ್ ಬೇಕೇ? ಬುಕ್ ಮಾಡಿ ಹೋಗಿ
ಹತ್ತೇ ವರ್ಷಗಳಲ್ಲಿ ಸ್ಕೂಟರ್ ನಿಮ್ಮದೇ!
ಕೆಲವರಿಗೆ ಕೂಡಲೇ ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಭಾನುವಾರ ಸಂಜೆ ಸಿನಿಮಾ ನೋಡಲೇ ಬೇಕು.
ವಿಪರೀತ ಗದ್ದಲ. ಖಂಡಿತ ಟಿಕೆಟ್ ಸಿಗದು.
ಬ್ಲ್ಯಾಕಲ್ಲಾದರೆ ಬೇಕಾದಷ್ಟು ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸೈಟು, ಸಿಮೆಂಟು, ಲೈಸೆನ್ಸು, ತೆರಿಗೆ
ಇನ್ನೂ ಎಷ್ಟೋ ವಿಷಯಗಳಲ್ಲಿ
ರಾಜಾರೋಷ ಅನ್ಯಾಯ ನಡೀತಿದೆಯಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
*****
೧೧-೦೭-೧೯೮೪

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...