Home / ಕವನ / ಕವಿತೆ / ಬಾಯಿಲ್ಲದವರು

ಬಾಯಿಲ್ಲದವರು

ಎಷ್ಟೋ ಸಲ ನಿಮಗನ್ನಿಸಬಹುದು
ಇದು ಮೋಸ, ಇದು ಅನ್ಯಾಯ ಎಂದು.
ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ
ಏಕೆಂದರೆ… ನಾವು ಬಾಯಿಲ್ಲದವರು.

ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ
ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ?
ವಂತಿಕೆ ಕೊಡುವೆವೆಂದರೂ ಸೀಟೇಕೆ ಇಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಶೇಕಡ ತೊಂಭತ್ತು ಬಂದರೂ ಮೆಡಿಕಲ್
ಸೀಟು ಸಿಗಲೇ ಇಲ್ಲ… ಅವನಿಗೇಕೆ
ಶೇಕಡ ನಲವತ್ತಕ್ಕೇ ಸಿಕ್ಕಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಅಭಿನಂದನೆಗಳು. ನಿಮಗೆ ನೌಕರಿ ಸಿಕ್ಕಿತು!
ಹರಿಯಾಣದ ‘ಕುಗ್ರಾಮ್’ ನಲ್ಲಿ ಕೂಡಲೆ ಸೇರಿ.
ಅರೆ! ಅವರಿಗೆ ಹೇಗೆ ತಮ್ಮೂರಿಗೇ ಆಯಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸ್ಕೂಟರ್ ಬೇಕೇ? ಬುಕ್ ಮಾಡಿ ಹೋಗಿ
ಹತ್ತೇ ವರ್ಷಗಳಲ್ಲಿ ಸ್ಕೂಟರ್ ನಿಮ್ಮದೇ!
ಕೆಲವರಿಗೆ ಕೂಡಲೇ ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಭಾನುವಾರ ಸಂಜೆ ಸಿನಿಮಾ ನೋಡಲೇ ಬೇಕು.
ವಿಪರೀತ ಗದ್ದಲ. ಖಂಡಿತ ಟಿಕೆಟ್ ಸಿಗದು.
ಬ್ಲ್ಯಾಕಲ್ಲಾದರೆ ಬೇಕಾದಷ್ಟು ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸೈಟು, ಸಿಮೆಂಟು, ಲೈಸೆನ್ಸು, ತೆರಿಗೆ
ಇನ್ನೂ ಎಷ್ಟೋ ವಿಷಯಗಳಲ್ಲಿ
ರಾಜಾರೋಷ ಅನ್ಯಾಯ ನಡೀತಿದೆಯಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
*****
೧೧-೦೭-೧೯೮೪

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...