Home / ಕವನ / ಕವಿತೆ / ಬಾಯಿಲ್ಲದವರು

ಬಾಯಿಲ್ಲದವರು

ಎಷ್ಟೋ ಸಲ ನಿಮಗನ್ನಿಸಬಹುದು
ಇದು ಮೋಸ, ಇದು ಅನ್ಯಾಯ ಎಂದು.
ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ
ಏಕೆಂದರೆ… ನಾವು ಬಾಯಿಲ್ಲದವರು.

ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ
ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ?
ವಂತಿಕೆ ಕೊಡುವೆವೆಂದರೂ ಸೀಟೇಕೆ ಇಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಶೇಕಡ ತೊಂಭತ್ತು ಬಂದರೂ ಮೆಡಿಕಲ್
ಸೀಟು ಸಿಗಲೇ ಇಲ್ಲ… ಅವನಿಗೇಕೆ
ಶೇಕಡ ನಲವತ್ತಕ್ಕೇ ಸಿಕ್ಕಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಅಭಿನಂದನೆಗಳು. ನಿಮಗೆ ನೌಕರಿ ಸಿಕ್ಕಿತು!
ಹರಿಯಾಣದ ‘ಕುಗ್ರಾಮ್’ ನಲ್ಲಿ ಕೂಡಲೆ ಸೇರಿ.
ಅರೆ! ಅವರಿಗೆ ಹೇಗೆ ತಮ್ಮೂರಿಗೇ ಆಯಿತು?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸ್ಕೂಟರ್ ಬೇಕೇ? ಬುಕ್ ಮಾಡಿ ಹೋಗಿ
ಹತ್ತೇ ವರ್ಷಗಳಲ್ಲಿ ಸ್ಕೂಟರ್ ನಿಮ್ಮದೇ!
ಕೆಲವರಿಗೆ ಕೂಡಲೇ ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಭಾನುವಾರ ಸಂಜೆ ಸಿನಿಮಾ ನೋಡಲೇ ಬೇಕು.
ವಿಪರೀತ ಗದ್ದಲ. ಖಂಡಿತ ಟಿಕೆಟ್ ಸಿಗದು.
ಬ್ಲ್ಯಾಕಲ್ಲಾದರೆ ಬೇಕಾದಷ್ಟು ಸಿಗುವುದಂತಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.

ಸೈಟು, ಸಿಮೆಂಟು, ಲೈಸೆನ್ಸು, ತೆರಿಗೆ
ಇನ್ನೂ ಎಷ್ಟೋ ವಿಷಯಗಳಲ್ಲಿ
ರಾಜಾರೋಷ ಅನ್ಯಾಯ ನಡೀತಿದೆಯಲ್ಲ?
ಕೇಳುವಂತಿಲ್ಲ… ನಾವು ಬಾಯಿಲ್ಲದವರು.
*****
೧೧-೦೭-೧೯೮೪

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...