ಶಾಂತಿ ಮಳೆ

ಬರೀ ಮಾತುಗಳು ಇವು
ಕೇವಲ ಅರ್ಥಕಳಕೊಂಡ ಶಬ್ದಗಳು
ಬೀಜ ನೆಲದಲ್ಲಿ ಹೂತು ಪಸೆಯೊಡೆದು
ಮೊಳಕೆ ಕಟ್ಟಿ ಬೇರು ಬಿಡುವತನಕ
ಇವು ಅರ್ಥವಿಲ್ಲದ ಕೇವಲ ಮಾತುಗಳು.

ಬರೀ ಮಾತುಗಳು ಇವು
ಉಗುಳಿನ ವಿಷಕ್ಕೆ ನಂಜೇರಿದ
ಮಹಾತ್ಮನ ಶಾಂತಿ ಮಂತ್ರದ ಬೀಜ
ಮೊಳಕೆಯೊಡೆಯಲಿಲ್ಲ ಇಲ್ಲಿ
ಬೇರು ಬಿಟ್ಟು ಬೆಳೆದು ಮರವಾಗಲಿಲ್ಲ.

ಬರೀ ಮಾತುಗಳು ಇವು
ಆರಿತು ನಾಲಿಗೆಯ ಪಸೆ
ಬಂಜೆಯಾಯಿತು ನೆಲದ ಒಡಲು
ಉರಿದಾಯ್ತು ಬೋಳು ಹಾಳುಹಾಳು
ಪಸೆಯಿಲ್ಲ, ತಂಪಿಲ್ಲ, ಬರೀ ಧೂಳು.

ಬರೀ ಮಾತುಗಳು ಇವು
ಅರ್ಥಕಳಕೊಂಡ ಶಾಂತಿಮಂತ್ರ
ಅವಿರತ ಹತ್ಯೆ, ಕೋಮುಲಗಲಭೆಗಳು
ಗಲ್ಲಿ ಗಲ್ಲಿಗಳಲ್ಲಿ ಕೊಲೆಗಳು
ಬೀದಿ ಬೀದಿಗಳಲ್ಲಿ ಅತ್ಯಾಚಾರಗಳು
ಅಮಾಯಕರ ಮೃತ್ಯುಕೂಪಗಳು.

ಶಾಂತಿ…. ಶಾಂತಿ…. ಶಾಂತಿ
ಕಳಿಂಗದಿಂದ – ಕಲ್ಯಾಣದತನಕ
ಏಸುವಿನಿಂದ – ಪೈಗಂಬರತನಕ
ಬುದ್ಧನಿಂದ – ಬಸವನತನಕ
ಧೋ ಎಂದು ಸುರಿಯಲಿ ಶಾಂತಿ ಮಳೆ
ಬೆಳೆಯಲಿ ಸಮೃದ್ಧ ಶಾಂತಿ ಮಳೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯಂಕರ ರೋಗ ಸಾರ್‍ಸ್‌ಗೆ ಮದ್ದು
Next post ಮೂಡುತಿಹನದೊ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…