ದುರಾದೃಷ್ಟ ಅದೃಷ್ಟಗಳ ನಡುವೆ
ಬೇಯುತ್ತಿರುವ ‘ಸ್ವಾತಂತ್ರ್ಯ’
ಗೋರಿ ಕಟ್ಟಕೊಳ್ಳುವ ಸ್ವಾಮಿಗಳ
ಮಹಾಪೂರ, ಭೂಕಂಪಗಳಡಿ
ಕೊಳೆಯುವ ಸಹನೀಯರ
ಕನವರಿಕೆಯ ವೃತ್ತಪತ್ರಿಕೆಗಳ
ಅಜ್ಜಿಯ ತೇಲುಗಣ್ಣು
ಮಕ್ಕಳ ವರ್ಷಾಂತ್ಯ ಪರಿಣಾಮ-
ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು
ಕೊಲೆ ಶೀಲ ಹರಣ –
ಕತ್ತಲೆಯೊಳಗೆ ಏಳುವ ಕೊತ್ತಳಗಳು
ಬಿಸಿಲಿನಡಿ ಅಂಧಕಾರದ ಭವಿಷ್ಯ
ಕಣ್ಣಿನ ಗೂಡು, ಒಡಲಾಳು
ಬೊಜ್ಜು ಡಯಟ್ಗಳ ಪಟ್ಟಿ
ನಿಂತ ನೀರು, ಹರಿಯುವ ಹೊಳೆ
ಅಳುವು ನಗುವು
ಅಭಿಮಾನ ದುರಭಿಮಾನದ
ಸ್ವಾತಂತ್ರ್ಯದಡಿ ಅನಾಮಿಕರ
ಮುಗ್ಧರ ನೆತ್ತರ ಹರಿಸುವ
ರಾಜಕೀಯ ಮೊಳಕೆಗಳು
ಚಿವುಟಿದಷ್ಟು ನಾಲ್ಕಾಗಿ ಚಿಗಿಯುತ್ತವೆ
ಆಕಾಶಕ್ಕೇರದ ಪ್ರಪಾತಕ್ಕೆ ಬೀಳದ
ತ್ರಿಶಂಕು.
*****
Related Post
ಸಣ್ಣ ಕತೆ
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಟೋಪಿ ಮಾರುತಿ
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…