ದುರಾದೃಷ್ಟ ಅದೃಷ್ಟಗಳ ನಡುವೆ
ಬೇಯುತ್ತಿರುವ ‘ಸ್ವಾತಂತ್ರ್ಯ’
ಗೋರಿ ಕಟ್ಟಕೊಳ್ಳುವ ಸ್ವಾಮಿಗಳ
ಮಹಾಪೂರ, ಭೂಕಂಪಗಳಡಿ
ಕೊಳೆಯುವ ಸಹನೀಯರ
ಕನವರಿಕೆಯ ವೃತ್ತಪತ್ರಿಕೆಗಳ
ಅಜ್ಜಿಯ ತೇಲುಗಣ್ಣು
ಮಕ್ಕಳ ವರ್ಷಾಂತ್ಯ ಪರಿಣಾಮ-
ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು
ಕೊಲೆ ಶೀಲ ಹರಣ –
ಕತ್ತಲೆಯೊಳಗೆ ಏಳುವ ಕೊತ್ತಳಗಳು
ಬಿಸಿಲಿನಡಿ ಅಂಧಕಾರದ ಭವಿಷ್ಯ
ಕಣ್ಣಿನ ಗೂಡು, ಒಡಲಾಳು
ಬೊಜ್ಜು ಡಯಟ್ಗಳ ಪಟ್ಟಿ
ನಿಂತ ನೀರು, ಹರಿಯುವ ಹೊಳೆ
ಅಳುವು ನಗುವು
ಅಭಿಮಾನ ದುರಭಿಮಾನದ
ಸ್ವಾತಂತ್ರ್ಯದಡಿ ಅನಾಮಿಕರ
ಮುಗ್ಧರ ನೆತ್ತರ ಹರಿಸುವ
ರಾಜಕೀಯ ಮೊಳಕೆಗಳು
ಚಿವುಟಿದಷ್ಟು ನಾಲ್ಕಾಗಿ ಚಿಗಿಯುತ್ತವೆ
ಆಕಾಶಕ್ಕೇರದ ಪ್ರಪಾತಕ್ಕೆ ಬೀಳದ
ತ್ರಿಶಂಕು.
*****
Related Post
ಸಣ್ಣ ಕತೆ
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…