ಸ್ವಾತಂತ್ರ್ಯ

ದುರಾದೃಷ್ಟ ಅದೃಷ್ಟಗಳ ನಡುವೆ
ಬೇಯುತ್ತಿರುವ ‘ಸ್ವಾತಂತ್ರ್ಯ’
ಗೋರಿ ಕಟ್ಟಕೊಳ್ಳುವ ಸ್ವಾಮಿಗಳ
ಮಹಾಪೂರ, ಭೂಕಂಪಗಳಡಿ
ಕೊಳೆಯುವ ಸಹನೀಯರ
ಕನವರಿಕೆಯ ವೃತ್ತಪತ್ರಿಕೆಗಳ
ಅಜ್ಜಿಯ ತೇಲುಗಣ್ಣು
ಮಕ್ಕಳ ವರ್ಷಾಂತ್ಯ ಪರಿಣಾಮ-
ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು
ಕೊಲೆ ಶೀಲ ಹರಣ –
ಕತ್ತಲೆಯೊಳಗೆ ಏಳುವ ಕೊತ್ತಳಗಳು
ಬಿಸಿಲಿನಡಿ ಅಂಧಕಾರದ ಭವಿಷ್ಯ
ಕಣ್ಣಿನ ಗೂಡು, ಒಡಲಾಳು
ಬೊಜ್ಜು ಡಯಟ್‌ಗಳ ಪಟ್ಟಿ
ನಿಂತ ನೀರು, ಹರಿಯುವ ಹೊಳೆ
ಅಳುವು ನಗುವು
ಅಭಿಮಾನ ದುರಭಿಮಾನದ
ಸ್ವಾತಂತ್ರ್ಯದಡಿ ಅನಾಮಿಕರ
ಮುಗ್ಧರ ನೆತ್ತರ ಹರಿಸುವ
ರಾಜಕೀಯ ಮೊಳಕೆಗಳು
ಚಿವುಟಿದಷ್ಟು ನಾಲ್ಕಾಗಿ ಚಿಗಿಯುತ್ತವೆ
ಆಕಾಶಕ್ಕೇರದ ಪ್ರಪಾತಕ್ಕೆ ಬೀಳದ
ತ್ರಿಶಂಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರೈದೇವ
Next post ಲಿಂಗಮ್ಮನ ವಚನಗಳು – ೩೨

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…