ದುರಾದೃಷ್ಟ ಅದೃಷ್ಟಗಳ ನಡುವೆ
ಬೇಯುತ್ತಿರುವ ‘ಸ್ವಾತಂತ್ರ್ಯ’
ಗೋರಿ ಕಟ್ಟಕೊಳ್ಳುವ ಸ್ವಾಮಿಗಳ
ಮಹಾಪೂರ, ಭೂಕಂಪಗಳಡಿ
ಕೊಳೆಯುವ ಸಹನೀಯರ
ಕನವರಿಕೆಯ ವೃತ್ತಪತ್ರಿಕೆಗಳ
ಅಜ್ಜಿಯ ತೇಲುಗಣ್ಣು
ಮಕ್ಕಳ ವರ್ಷಾಂತ್ಯ ಪರಿಣಾಮ-
ಸ್ವಾತಂತ್ರ್ಯದಡಿಯಲ್ಲಿ ಸಾಯುವ ವಧು
ಕೊಲೆ ಶೀಲ ಹರಣ –
ಕತ್ತಲೆಯೊಳಗೆ ಏಳುವ ಕೊತ್ತಳಗಳು
ಬಿಸಿಲಿನಡಿ ಅಂಧಕಾರದ ಭವಿಷ್ಯ
ಕಣ್ಣಿನ ಗೂಡು, ಒಡಲಾಳು
ಬೊಜ್ಜು ಡಯಟ್ಗಳ ಪಟ್ಟಿ
ನಿಂತ ನೀರು, ಹರಿಯುವ ಹೊಳೆ
ಅಳುವು ನಗುವು
ಅಭಿಮಾನ ದುರಭಿಮಾನದ
ಸ್ವಾತಂತ್ರ್ಯದಡಿ ಅನಾಮಿಕರ
ಮುಗ್ಧರ ನೆತ್ತರ ಹರಿಸುವ
ರಾಜಕೀಯ ಮೊಳಕೆಗಳು
ಚಿವುಟಿದಷ್ಟು ನಾಲ್ಕಾಗಿ ಚಿಗಿಯುತ್ತವೆ
ಆಕಾಶಕ್ಕೇರದ ಪ್ರಪಾತಕ್ಕೆ ಬೀಳದ
ತ್ರಿಶಂಕು.
*****
Related Post
ಸಣ್ಣ ಕತೆ
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…