ಬೆಳಗು

– ಪಲ್ಲವಿ –

ಕರೆಯಿತು ಜಾಗೃತ ವಿಹಗಕುಲ….
ನೆರೆಯಿತು ರಾಗದಿ ಗಗನತಲ !


ಇಳೆಯನು ಬಳಸಿದ ತಾಮಸ ಜಾಲ….
ಕಳೆಯಲು ಮೂಡಿತು ಕಾಂತಿಯ ಮೂಲ !
ಕಳಕಳ ನಗುತಿದೆ ಅರಳಿದ ಕಮಲ….
ಅಳಿವೃಂದವು ಗುಂಜಾರವಲೋಲ-
ಕರೆಯಿತು ಜಾಗೃತ ವಿಹಗಕುಲ!


ಮಿಸುನಿರಸದ ತೊರೆ ಮೀರಿತು ತೀರ,
ಬಾನಿಂದಿಳಿಯಿತು ಭುವನಕೆ ಪೂರ;
ಕಣ್ಣೆದೆ ಸೆಳೆವುದು ಶುಭಶೃಂಗಾರ
ಜೀವನ ಕಾವ್ಯದ ನವರಸಸಾರ….
ಕರೆಯಿತು ಜಾಗೃತ ವಿಹಗಕುಲ !


ಎಲ್ಲಿ ಅಡಗಿತೋ ನಿದ್ರೆಯ ಭೂತ !
ಎಲ್ಲೆಡೆ ಕಾಣ್ಬಳು ಪೃಥಿವಿ ಜಾಗೃತ –
ಉಲ್ಲಸ ಹರಡಿದೆ ಉದಯದ ಗೀತ –
ಮೆಲ್ಲಗೆ ಮೊಗದೋರಿದ ದಿನನಾಧ !
ಕರೆಯಿತು ಜಾಗೃತ ವಿಹಗಕುಲ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಷ್ಟ್ರೀಯತೆಯಲ್ಲಿ ಕುರುಡಾಗದ ಕವಿ
Next post ಬೇಡತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys