ಮುದ್ದು ಕಂದನ ವಚನಗಳು : ಆರು

ಯೋಗ
ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ
ಸಹಜಯೋಗವೆ ಯೋಗ ರಾಜಯೋಗ
ಮಾಡೂವ ಕೈ ಕೆಲಸ ನೆನಪಿನಾಟವ ಮಾಡು
ಕರ್‍ಮಯೋಗವೆ ಯೋಗ ಮುದ್ದುಕಂದ

ಸಂಸಾರ
ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ
ಸಂಸಾರ ಸುಂದರದ ದ್ರಾಕ್ಷಿತೋಟ
ಹೂವು ಹಣ್ಣಿನ ತೋಟ ಮಾವು ಗಿಳಿಗಳ ತೋಟ
ಬದುಕು ಜೀವನ ಯೋಗ ಮುದ್ದುಕಂದ

ಪುರುಷಾರ್‍ಥ
ಕಳೆದದ್ದು ನಾಟಕವು ಸತ್ತದ್ದು ಬಯಲಾಟ
ಬಯಲ ಯುದ್ಧವು ಈಗ ಬಂತು ಬಂತು
ಪುರುಷಾರ್‍ಥವೇ ಸತ್ಯ ಕಾಯಕವೆ ಕೈವಲ್ಯ
ಸನ್ನೇಸಿ ನೀನಲ್ಲ ಮುದ್ದುಕಂದ

ಆಹಾರ
ಬಿಸಿರೊಟ್ಟಿ ಕಾರಬ್ಯಾಳಿ ಮೆಣಸಿಂಡಿ ಹೋಗ್ಯಾವ
ಸ್ಯಾಂಡ್ವಿಚ್ಚು ಬರ್‍ಗರು ನುಗ್ಗಿ ಬಂದ್ವು
ಹತ್ತು ಹೇರಿನ ಜ್ವಾಳಾ ಹೊತ್ತು ಒಗೆಯುವ ಹುಡುಗ
ಬೇಲ್ಪೂರಿ ಚಾಕುಡದ ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ
Next post ರೋಹಿಣಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys