ರೋಹಿಣಿ

ಜ್ಯೋತಿಗಳ ಸಾಸಿರವನೊಳಕೊಂಡ ನಭದಲ್ಲಿ
ನೂರು ಸೂರ್‍ಯರ ನಡುವೆ ನಿಂತು ಮಿನುಗುವ ತಾರೆ!
ನಿನ್ನ ಕಿರುವೆಳಕ ದೊರೆವೆತ್ತಿಹೆನು, ಮೈದೋರೆ
ನಿನ್ನ ಸುಂದರ ದೀಪ್ತಿ ನನ್ನ ಜೀವಿತದಲ್ಲಿ
ನಿಸ್ಸೀಮ ನಿರವೇದ್ಯವನ್ನರಿವರಿಹರೆಲ್ಲಿ
ಭೂತಲದಿ? ನನಗಿಲ್ಲ ಎಣ್ದೆಸೆಗಳಲಿ ಸೂರೆ-
ಯಾಗುತಿರುವಗ್ಗಳಿಕೆ ಎಳೆತನವ ನೀ ಬೀರೆ,
ನಿನ್ನ ಹಿರಿತನಕೊಪ್ಪಿ ಒಸೆದಿಹೆನು ನಿನ್ನಲ್ಲಿ

ರೋಹಿಣಿಯೆ! ಹೊಳೆಹೊಳವ ನಿನ್ನ ರತ್ನ ಕಿರೀಟ-
ದೊಂದು ಹರಳೊಳು ಮೂಡಬಹುದು ವಿಶ್ವದ ಗುಟ್ಟು,
ನೂರು ಸೂರ್‍ಯರ ಪ್ರಭಯ ಪ್ರತಿಬಿಂಬ, ಚಲುವತಿಯ
ಸಾಮ್ರಾಜ್ಯ! ಜನರೆಲ್ಲ ಕಂಡು ನಿನ್ನೀ ಮಾಟ-
ವನ್ನು ನುಡಿಯುವರಾಗ : “ರೋಹಿಣಿಯ ಹೊಸ ಹುಟ್ಟು
ಕಿರಿದಲ್ಲ. ಅದು ಮೂಡಿಸಿದೆ ಚಿರಂತನ ಕಥಯ!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಕಂದನ ವಚನಗಳು : ಆರು
Next post ಕಾಡುತಾವ ನೆನಪುಗಳು – ೩

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…