Home / ಕವನ / ಕವಿತೆ / ಮನಕ್ಕ್ ಒಪ್ಪೊ ಮಾತು

ಮನಕ್ಕ್ ಒಪ್ಪೊ ಮಾತು

ಯೆಚ್ಗೆ ಯೆಂಡ ಕೇಳ್ತಾನಿದ್ರೆ
ಮಚ್ನೆ ಎತ್ತಿ ಕೊಚ್ತೀನ್ ಅಂತ
ಯೋಳ್ತೀಯಲ್ಲ ಮುನಿಯಣ್ಣ-
ಕೊಲ್ಲೋ ಕೆಲಸ ಬದಕ್ಸೊ ಕೆಲಸ
ಎಲ್ಲಾ ನಿಂಗೆ ಕೊಟ್ಟೋರಾರು?
ಸಲ್ಲದ್ ಮಾತು ಕಾಣಣ್ಣ! ೧

ಮಾತ್ಗೆ ಮಾತು! ಯೇಟ್ಗೆ ಯೇಟು!
ಯಾತ್ಕೆ ಯೋಳ್ತಿ ಕೊಲ್ತೀನ್ ಅಂತ?
ಗ್ರಾಸ್ತ ಅಲ್ಲ ನಿನ್ ವಿದ್ದೆ!
ಕಚ್ ಗಿಚ್ ಕಾಸ್ನ ಈಸ್ಕೋವೊಲ್ಲೆ!
ಯೆಚ್ಗೆ ಕೇಳ್ದ್ರೆ ಕೋಪಾ ಬಲ್ಲೆ!
ಮಸ್ತಾಗೈತೆ ನಿನ್ ವಿದ್ದೆ! ೨

ಕೊಲ್ಲೋ ಕೆಲಸ ನಿಂದ್ ಅಲ್ಲಾಣ್ಣ!
ಕೊಲ್ಲೋಕ್ ಒಬ್ಬನ್ ಮಡಗೌನ್ ದೇವ್ರು!
ಈಸ್ವರನಂತ ಔನ್ ಎಸರು!
ಬ್ರಾಂಣ ಒಬ್ಬ ಅಬ್ಯಾಸಿಲ್ದೆ
ಓಮ ಮಾಡಿ ಸುಟ್‌ಕೊಂಡ್ನಂತೆ
ಮೀಸೆ ಜತೇಗ್ ಗಡ್ಡಾನ! ೩

ಇನ್ನಾ ಯೋಳ್ತೀನ್ ಕೇಳ್ ಮುನಿಯಣ್ಣ!
ಮೀನ್‌ಗಳ್ ಬಂದ್ರೆ ತಿನ್ನಾಕ್ ತನ್ನ
ಯೋಳ್ತದಂತೆ ಗಾಳ್ದುಳ:
‘ನನ್ ಇಡದ್ ನುಂಗೋಕ್ ಸುತ್ತೀ ಸುತ್ತೀ
ನೀನ್ ಇಲ್ ಬಂದ್ರೆ ಕುಂತೌನ್ ಅಲ್ಲಿ
ಮೇಲ್ ನಿನ್ ನುಂಗೋಕ್ ಬೆಸ್ತ್ರವ!’ ೪

ಯೆಂಡ ಮಾರೋದ್ ನಿಂದು ಕೆಲಸ!
ಬುಂಡೆ ಒಡೆಯಾದ್ ನಿಂಗ್ ಯಾಕಣ್ಣ!
ಕೋಪಿಸ್ಬೇಡ ಮುನಿಯಣ್ಣ!
ಮನಕೆ ಒಪ್ಪೋ ಮಾತೇಳ್ತೀನಿ-
ನಾನು ರತ್ನ ಯೇನೇಳ್ದೇಂತ
ನೆಪ್ನಾಗ್ ಇಟ್ಕೊ ಮುನಿಯಣ್ಣ! ೫
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...