Home / ಕವನ / ಕವಿತೆ / ಮನಕ್ಕ್ ಒಪ್ಪೊ ಮಾತು

ಮನಕ್ಕ್ ಒಪ್ಪೊ ಮಾತು

ಯೆಚ್ಗೆ ಯೆಂಡ ಕೇಳ್ತಾನಿದ್ರೆ
ಮಚ್ನೆ ಎತ್ತಿ ಕೊಚ್ತೀನ್ ಅಂತ
ಯೋಳ್ತೀಯಲ್ಲ ಮುನಿಯಣ್ಣ-
ಕೊಲ್ಲೋ ಕೆಲಸ ಬದಕ್ಸೊ ಕೆಲಸ
ಎಲ್ಲಾ ನಿಂಗೆ ಕೊಟ್ಟೋರಾರು?
ಸಲ್ಲದ್ ಮಾತು ಕಾಣಣ್ಣ! ೧

ಮಾತ್ಗೆ ಮಾತು! ಯೇಟ್ಗೆ ಯೇಟು!
ಯಾತ್ಕೆ ಯೋಳ್ತಿ ಕೊಲ್ತೀನ್ ಅಂತ?
ಗ್ರಾಸ್ತ ಅಲ್ಲ ನಿನ್ ವಿದ್ದೆ!
ಕಚ್ ಗಿಚ್ ಕಾಸ್ನ ಈಸ್ಕೋವೊಲ್ಲೆ!
ಯೆಚ್ಗೆ ಕೇಳ್ದ್ರೆ ಕೋಪಾ ಬಲ್ಲೆ!
ಮಸ್ತಾಗೈತೆ ನಿನ್ ವಿದ್ದೆ! ೨

ಕೊಲ್ಲೋ ಕೆಲಸ ನಿಂದ್ ಅಲ್ಲಾಣ್ಣ!
ಕೊಲ್ಲೋಕ್ ಒಬ್ಬನ್ ಮಡಗೌನ್ ದೇವ್ರು!
ಈಸ್ವರನಂತ ಔನ್ ಎಸರು!
ಬ್ರಾಂಣ ಒಬ್ಬ ಅಬ್ಯಾಸಿಲ್ದೆ
ಓಮ ಮಾಡಿ ಸುಟ್‌ಕೊಂಡ್ನಂತೆ
ಮೀಸೆ ಜತೇಗ್ ಗಡ್ಡಾನ! ೩

ಇನ್ನಾ ಯೋಳ್ತೀನ್ ಕೇಳ್ ಮುನಿಯಣ್ಣ!
ಮೀನ್‌ಗಳ್ ಬಂದ್ರೆ ತಿನ್ನಾಕ್ ತನ್ನ
ಯೋಳ್ತದಂತೆ ಗಾಳ್ದುಳ:
‘ನನ್ ಇಡದ್ ನುಂಗೋಕ್ ಸುತ್ತೀ ಸುತ್ತೀ
ನೀನ್ ಇಲ್ ಬಂದ್ರೆ ಕುಂತೌನ್ ಅಲ್ಲಿ
ಮೇಲ್ ನಿನ್ ನುಂಗೋಕ್ ಬೆಸ್ತ್ರವ!’ ೪

ಯೆಂಡ ಮಾರೋದ್ ನಿಂದು ಕೆಲಸ!
ಬುಂಡೆ ಒಡೆಯಾದ್ ನಿಂಗ್ ಯಾಕಣ್ಣ!
ಕೋಪಿಸ್ಬೇಡ ಮುನಿಯಣ್ಣ!
ಮನಕೆ ಒಪ್ಪೋ ಮಾತೇಳ್ತೀನಿ-
ನಾನು ರತ್ನ ಯೇನೇಳ್ದೇಂತ
ನೆಪ್ನಾಗ್ ಇಟ್ಕೊ ಮುನಿಯಣ್ಣ! ೫
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...