ನಿಜ ಒಪ್ಪಂದ

ದುಃಖ ತುಂಬಿದ ಜೀವನ ನನ್ನದು
ಸುಖಿ ಜೀವನ ದೊರೆಯುವದು ಎಂದು?

ಆಹಾ ಎಲ್ಲಿಯೂ ಕಾಣೆ ನಾ
ಇಂಥ ದುಃಖಿ ಜೀವನ
ಅಳಿಸಲಾರೆಯೋ ಓ ದೇವ
ಅಳಿಸಿ ನೀಡಲಾರೇಯೇ ಸುಖಿ ಜೀವನ?

ಎಲ್ಲಿಲ್ಲದ ಮರುಳು ಮನ
ನನ್ನನ್ನು ಕೊರೆದು ಸಣ್ಣಾಗಿಸಿದೆ
ನನ್ನನ್ನು ಯಾರು ಉಪಚರಿಸುವರು?
ನಿನ್ನಿಂದಲೇ ನಾ ಹೊಸದಾರಿ ಕಾಣುವೇ

ಶೋಧ ಮಾಡಿ ತೋರು ನೀ ಮಾರ್ಗ
ನಿನ್ನಿಂದಲೇ ನಾ ಬದುಕುವೇ
ನಿನ್ನಿಂದಲೇ ನಾ ಸುಖಿಸುವೇ ದೇವ!

ಅಂಧಕಾರವ ನನ್ನನ್ನು ಆವರಿಸಿದೆ
ಅರಿಯದೇ ಮಂತ್ರ ಮುಗ್ಗದನಾಗಿಸಿದೆ
ತಿಳಿಯದೇ ನಾ ಕಂಗೆಟ್ಟೆ
ತಿಳಿದು ಅರಿಯದೇ ನಾ ಹೊರಟೆ

ಇಪ್ಪತೊಂದನೆಯ ಶತಮಾನ ಅವಸ್ಥೆಯಲ್ಲಿ
ನಾ ಕಂಡುಕೊಂಡೆ ಬೇರೊಂದು ಜೀವನದ ತಿರುವು
ಅವಧಿಯಲ್ಲಿ ಕಂಡುಕೊಂಡೆನೊಂದು ಸ್ವಪ್ನ
ಆ ಸ್ವಪ್ನವೇ ನಿಜ ಜೀವನದ ಒಪ್ಪಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮೋಟರ್‌ಬೈಕನ್ನೇರಿ
Next post ನಿರೀಕ್ಷೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…