ವರದಿಗಾರ

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ಕಂಡಿದನ್ನು ಜನತೆಗೆ ತಿಳಿಸುವನು
ನಿನ್ನ ಪ್ರತಿಭೆ ಹೆಮ್ಮರವಾದದ್ದು
ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು.

ಯಾವುದೇ ಅಸ್ತ್ರವಿಲ್ಲದೆ
ವೀರನಂತೆ ಹೋರಾಡುವಿ
ತನ್ನ ಅಸ್ತ್ರವೇ ಒಂದು ಹಾಳೆ
ನಿನ್ನ ಖಡ್ಗವೇ ನಿನ್ನ ಲೇಖನಿ.

ಹಗಲು ರಾತ್ರಿ ನಿದ್ರೆಗೆಟ್ಟು
ಸಮಾಜ ಸುಧಾರಣೆ ಮಾಡುವಿ
ಭೃಷ್ಟರನ್ನು ಕಂಡು ಮರುದಿನ
ಪತ್ರಿಕೆಯಲ್ಲಿ ಸ್ಫೋಟಿಸುವಿ.

ಭೃಷ್ಟರಿಗೆ ಸಿಂಹ ಸ್ವಪ್ನವಾದಿ
ಶಿಷ್ಟರ ಮಾರ್ಗ ನೀಡುವಲ್ಲಿ ನೀ ಸಫಲನಾದಿ
ಜನತೆ ಸಮಸ್ಯೆಯನ್ನರಿತು ನಿವಾರಿಸುವಲ್ಲಿ
ಸರ್ಕಾರಕ್ಕೆ ಸೇತುವೆವಾಗಿ ಎಚ್ಚರಿಕೆ ನೀಡುವಿ.

ಪತ್ರಿಕೆಯ ಮಹತ್ವ ಅರಿತು
ಪತ್ರಿಕೆಯ ಸೇವೆ ಎಡೆಬಿಡದೆ ಮಾಡುವಿ
ಕಾನೂನ ಚೌಕಟಿನಲ್ಲಿಯೇ ಕಾರ್ಯಮಾಡಿ
ಜನ ಸೇವೆಯೇ ಈಶ್ವರ ಸೇವೆ ನೀ ಮಾಡುವಿ.

ಜನತೆಯ ಸಂಪರ್ಕ ನೀ ಚನ್ನಾಗಿರಿಸಿಕೊಂಡಿದಿ
ನೀನ್ನನು ಎದುರಿಸುವರಿಗೆ ಎದೆತಟ್ಟಿ ನಿಲ್ಲುವಿ
ಪತ್ರಿಕೆಗೆ ಧಕೆಯಾಗದಂತೆ ನೋಡುವಿ ನೀನ ಸೇವೆ ಅವರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಿಯದರ್ಶಿನಿ
Next post ಆರೋಪ – ೧೪

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…