Home / ಕವನ / ಕವಿತೆ / ವರದಿಗಾರ

ವರದಿಗಾರ

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ಕಂಡಿದನ್ನು ಜನತೆಗೆ ತಿಳಿಸುವನು
ನಿನ್ನ ಪ್ರತಿಭೆ ಹೆಮ್ಮರವಾದದ್ದು
ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು.

ಯಾವುದೇ ಅಸ್ತ್ರವಿಲ್ಲದೆ
ವೀರನಂತೆ ಹೋರಾಡುವಿ
ತನ್ನ ಅಸ್ತ್ರವೇ ಒಂದು ಹಾಳೆ
ನಿನ್ನ ಖಡ್ಗವೇ ನಿನ್ನ ಲೇಖನಿ.

ಹಗಲು ರಾತ್ರಿ ನಿದ್ರೆಗೆಟ್ಟು
ಸಮಾಜ ಸುಧಾರಣೆ ಮಾಡುವಿ
ಭೃಷ್ಟರನ್ನು ಕಂಡು ಮರುದಿನ
ಪತ್ರಿಕೆಯಲ್ಲಿ ಸ್ಫೋಟಿಸುವಿ.

ಭೃಷ್ಟರಿಗೆ ಸಿಂಹ ಸ್ವಪ್ನವಾದಿ
ಶಿಷ್ಟರ ಮಾರ್ಗ ನೀಡುವಲ್ಲಿ ನೀ ಸಫಲನಾದಿ
ಜನತೆ ಸಮಸ್ಯೆಯನ್ನರಿತು ನಿವಾರಿಸುವಲ್ಲಿ
ಸರ್ಕಾರಕ್ಕೆ ಸೇತುವೆವಾಗಿ ಎಚ್ಚರಿಕೆ ನೀಡುವಿ.

ಪತ್ರಿಕೆಯ ಮಹತ್ವ ಅರಿತು
ಪತ್ರಿಕೆಯ ಸೇವೆ ಎಡೆಬಿಡದೆ ಮಾಡುವಿ
ಕಾನೂನ ಚೌಕಟಿನಲ್ಲಿಯೇ ಕಾರ್ಯಮಾಡಿ
ಜನ ಸೇವೆಯೇ ಈಶ್ವರ ಸೇವೆ ನೀ ಮಾಡುವಿ.

ಜನತೆಯ ಸಂಪರ್ಕ ನೀ ಚನ್ನಾಗಿರಿಸಿಕೊಂಡಿದಿ
ನೀನ್ನನು ಎದುರಿಸುವರಿಗೆ ಎದೆತಟ್ಟಿ ನಿಲ್ಲುವಿ
ಪತ್ರಿಕೆಗೆ ಧಕೆಯಾಗದಂತೆ ನೋಡುವಿ ನೀನ ಸೇವೆ ಅವರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...