ಪ್ರಿಯದರ್ಶಿನಿ

ರಾಷ್ಟ್ರೀಯ ಶೋಕದ ಹನ್ನೆರಡು
ದಿನಗಳೂ ಮುಗಿದುವು-
ಒಂದು ಯುಗವೆ ಮುಗಿದಂತೆ
ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ
ಚೆಲ್ಲಿಯೂ ಆಯಿತು-
ನೀನು ಬಯಸಿದಂತೆ

ಕೆಂಪು ಕೋಟೆಯ ಬುರುಜುಗಳಿಂದು
ಯಮುನೆಯ ಕೆಂಪಿನಲ್ಲಿ ಕದಡಿವೆ
ಒಂಟಿ ದೋಣಿಗಳು ನಿಂತಲ್ಲೆ ನಿಂತಿದೆ
ಯಾವುದೂ ಎಂದಿನಂತಿಲ್ಲ
ಎಲ್ಲ ಬದಲಾಯಿಸಿದೆ

ಆದರೂ ಮುಂದಿನ ವರ್ಷ
ಚಿನಾರ್ ಮರಗಳ ತುಂಬ
ಮತ್ತೆ ಹೂ ಬಿಡುವುವು
ಕಾಡಿನ ದಾರಿಗಳಲ್ಲೆಲ್ಲ
ಎಲೆಗಳು ಬೀಳುವುವು
ಪರ್ವತಗಳ ಶಿಖರಗಳು ಇನ್ನೊಮ್ಮೆ
ಹಿಮದಿಂದ ಮುಚ್ಚುವುವು-
ಆಗ ನೀನಿರುವುದಿಲ್ಲ
ನಮ್ಮ ನೆನಪಿನಲ್ಲಲ್ಲದೆ ಇನ್ನೆಲ್ಲಿಯೂ

ಪ್ರಿಯದರ್ಶಿನಿ-
ನೀನಿರದ ಈ ದಾರಿಗಳನ್ನು
ಹೇಗೆ ನೆನೆಯಲಿ?
ಆ ಪರ್ವತಗಳನ್ನು
ಹೇಗೆ ನೋಡಲಿ?
ನಮ್ಮ ನೆನಪುಗಳನ್ನಾದರೂ
ಎಲ್ಲಿ ಮರೆಸಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀರೆಯೊಳಗಡೆ ಕಷ್ಟವಿದೆ
Next post ವರದಿಗಾರ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…