ಪ್ರಿಯದರ್ಶಿನಿ

ರಾಷ್ಟ್ರೀಯ ಶೋಕದ ಹನ್ನೆರಡು
ದಿನಗಳೂ ಮುಗಿದುವು-
ಒಂದು ಯುಗವೆ ಮುಗಿದಂತೆ
ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ
ಚೆಲ್ಲಿಯೂ ಆಯಿತು-
ನೀನು ಬಯಸಿದಂತೆ

ಕೆಂಪು ಕೋಟೆಯ ಬುರುಜುಗಳಿಂದು
ಯಮುನೆಯ ಕೆಂಪಿನಲ್ಲಿ ಕದಡಿವೆ
ಒಂಟಿ ದೋಣಿಗಳು ನಿಂತಲ್ಲೆ ನಿಂತಿದೆ
ಯಾವುದೂ ಎಂದಿನಂತಿಲ್ಲ
ಎಲ್ಲ ಬದಲಾಯಿಸಿದೆ

ಆದರೂ ಮುಂದಿನ ವರ್ಷ
ಚಿನಾರ್ ಮರಗಳ ತುಂಬ
ಮತ್ತೆ ಹೂ ಬಿಡುವುವು
ಕಾಡಿನ ದಾರಿಗಳಲ್ಲೆಲ್ಲ
ಎಲೆಗಳು ಬೀಳುವುವು
ಪರ್ವತಗಳ ಶಿಖರಗಳು ಇನ್ನೊಮ್ಮೆ
ಹಿಮದಿಂದ ಮುಚ್ಚುವುವು-
ಆಗ ನೀನಿರುವುದಿಲ್ಲ
ನಮ್ಮ ನೆನಪಿನಲ್ಲಲ್ಲದೆ ಇನ್ನೆಲ್ಲಿಯೂ

ಪ್ರಿಯದರ್ಶಿನಿ-
ನೀನಿರದ ಈ ದಾರಿಗಳನ್ನು
ಹೇಗೆ ನೆನೆಯಲಿ?
ಆ ಪರ್ವತಗಳನ್ನು
ಹೇಗೆ ನೋಡಲಿ?
ನಮ್ಮ ನೆನಪುಗಳನ್ನಾದರೂ
ಎಲ್ಲಿ ಮರೆಸಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀರೆಯೊಳಗಡೆ ಕಷ್ಟವಿದೆ
Next post ವರದಿಗಾರ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…