ಪ್ರಿಯದರ್ಶಿನಿ

ರಾಷ್ಟ್ರೀಯ ಶೋಕದ ಹನ್ನೆರಡು
ದಿನಗಳೂ ಮುಗಿದುವು-
ಒಂದು ಯುಗವೆ ಮುಗಿದಂತೆ
ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ
ಚೆಲ್ಲಿಯೂ ಆಯಿತು-
ನೀನು ಬಯಸಿದಂತೆ

ಕೆಂಪು ಕೋಟೆಯ ಬುರುಜುಗಳಿಂದು
ಯಮುನೆಯ ಕೆಂಪಿನಲ್ಲಿ ಕದಡಿವೆ
ಒಂಟಿ ದೋಣಿಗಳು ನಿಂತಲ್ಲೆ ನಿಂತಿದೆ
ಯಾವುದೂ ಎಂದಿನಂತಿಲ್ಲ
ಎಲ್ಲ ಬದಲಾಯಿಸಿದೆ

ಆದರೂ ಮುಂದಿನ ವರ್ಷ
ಚಿನಾರ್ ಮರಗಳ ತುಂಬ
ಮತ್ತೆ ಹೂ ಬಿಡುವುವು
ಕಾಡಿನ ದಾರಿಗಳಲ್ಲೆಲ್ಲ
ಎಲೆಗಳು ಬೀಳುವುವು
ಪರ್ವತಗಳ ಶಿಖರಗಳು ಇನ್ನೊಮ್ಮೆ
ಹಿಮದಿಂದ ಮುಚ್ಚುವುವು-
ಆಗ ನೀನಿರುವುದಿಲ್ಲ
ನಮ್ಮ ನೆನಪಿನಲ್ಲಲ್ಲದೆ ಇನ್ನೆಲ್ಲಿಯೂ

ಪ್ರಿಯದರ್ಶಿನಿ-
ನೀನಿರದ ಈ ದಾರಿಗಳನ್ನು
ಹೇಗೆ ನೆನೆಯಲಿ?
ಆ ಪರ್ವತಗಳನ್ನು
ಹೇಗೆ ನೋಡಲಿ?
ನಮ್ಮ ನೆನಪುಗಳನ್ನಾದರೂ
ಎಲ್ಲಿ ಮರೆಸಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೀರೆಯೊಳಗಡೆ ಕಷ್ಟವಿದೆ
Next post ವರದಿಗಾರ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…