ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ
ಹಾಗೆಂದರೇನು?
ಕಷ್ಟಕ್ಕೆ ಸೀರೆಯೇ ಆಗಬೇಕೇನು?
ಹಾಗಿದ್ದರೆ ಬೇಡಬಿಡಿ ಸೀರೆ
ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ
ಇಲ್ಲವೇ ಪ್ಯಾಂಟು ಮತ್ತು ಅಂಗಿ

ಹಾಕಿಕೊಳ್ಳದಿರಿ ಬೇಲಿ
ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ
ಹೆಣ್ಣು ಅಬಲೆ, ದುರ್ಬಲೆ
ಅಂದುಕೊಳ್ಳದಿರಿ

ಮಾತಿರಲಿ ಮೊನಚು ಮೊಳೆಯಂತೆ
ದೌರ್ಜನ್ಯಕ್ಕಿರಲಿ ಕನಲಿ
ಕುದಿವ ಕುಲುಮೆಯ ತಾಪ

ಬಗ್ಗಿದಷ್ಟು ಮೆಟ್ಟುವ ಆಸೆ
ಪ್ರಾಣಿ ಸಹಜ ಗುಣ
ದಿಕ್ಕರಿಸಿ, ಉಕ್ಕಿ ಬರಲಿದೆ
ಸೌಜನ್ಯ ಸನ್ಮಾನ

ದೂರು ಹೇಳದಿರಿ ನಿರುತ
ಧೈರ್ಯವಿರೆ, ದರ್ಪದ
ಬೆನ್ನಿಗೊಂದು ಗುದ್ದಿ, ಪಾಠ ಕಲಿಸಿ
ದುಗುಡ ಪರಿಹಿಸಿಕೊಳ್ಳಿ

ತಾಳ್ಮೆಯೆಂದರೆ ಸೀರೆ
ಕರುಣೆಯೆಂದರೆ ಸೀರೆ
ಶೀಲವೆಂದರೂ ಸೀರೆ

ಉಬ್ಬಿಸಿ ಎತ್ತರ ತೋರಿಸಿ
ದೊಪ್ಪನೆ ಕೆಳಗೆ ತಳ್ಳಿ ಬಿಡುವವರ
ಕೂಡ ಇರಲಿ ಜಾಗೃತಿ

ಹಾತೆಯಾಗದಿರಿ
ಬೆಳಕಿನ ಮುದ್ದಿಗೋಸ್ಕರ
ಜ್ವಾಲೆಗೆ ಬಲಿಯಾಗುವ
ಬದಲಿಗೆ ಮಿಂಚು ಹುಳುವಾಗಿ
ನಿಮ್ಮ ಪಾಲಿಗೆ ನೀವೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಬೇಕು
Next post ಪ್ರಿಯದರ್ಶಿನಿ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…