ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ
ಹಾಗೆಂದರೇನು?
ಕಷ್ಟಕ್ಕೆ ಸೀರೆಯೇ ಆಗಬೇಕೇನು?
ಹಾಗಿದ್ದರೆ ಬೇಡಬಿಡಿ ಸೀರೆ
ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ
ಇಲ್ಲವೇ ಪ್ಯಾಂಟು ಮತ್ತು ಅಂಗಿ

ಹಾಕಿಕೊಳ್ಳದಿರಿ ಬೇಲಿ
ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ
ಹೆಣ್ಣು ಅಬಲೆ, ದುರ್ಬಲೆ
ಅಂದುಕೊಳ್ಳದಿರಿ

ಮಾತಿರಲಿ ಮೊನಚು ಮೊಳೆಯಂತೆ
ದೌರ್ಜನ್ಯಕ್ಕಿರಲಿ ಕನಲಿ
ಕುದಿವ ಕುಲುಮೆಯ ತಾಪ

ಬಗ್ಗಿದಷ್ಟು ಮೆಟ್ಟುವ ಆಸೆ
ಪ್ರಾಣಿ ಸಹಜ ಗುಣ
ದಿಕ್ಕರಿಸಿ, ಉಕ್ಕಿ ಬರಲಿದೆ
ಸೌಜನ್ಯ ಸನ್ಮಾನ

ದೂರು ಹೇಳದಿರಿ ನಿರುತ
ಧೈರ್ಯವಿರೆ, ದರ್ಪದ
ಬೆನ್ನಿಗೊಂದು ಗುದ್ದಿ, ಪಾಠ ಕಲಿಸಿ
ದುಗುಡ ಪರಿಹಿಸಿಕೊಳ್ಳಿ

ತಾಳ್ಮೆಯೆಂದರೆ ಸೀರೆ
ಕರುಣೆಯೆಂದರೆ ಸೀರೆ
ಶೀಲವೆಂದರೂ ಸೀರೆ

ಉಬ್ಬಿಸಿ ಎತ್ತರ ತೋರಿಸಿ
ದೊಪ್ಪನೆ ಕೆಳಗೆ ತಳ್ಳಿ ಬಿಡುವವರ
ಕೂಡ ಇರಲಿ ಜಾಗೃತಿ

ಹಾತೆಯಾಗದಿರಿ
ಬೆಳಕಿನ ಮುದ್ದಿಗೋಸ್ಕರ
ಜ್ವಾಲೆಗೆ ಬಲಿಯಾಗುವ
ಬದಲಿಗೆ ಮಿಂಚು ಹುಳುವಾಗಿ
ನಿಮ್ಮ ಪಾಲಿಗೆ ನೀವೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಬೇಕು
Next post ಪ್ರಿಯದರ್ಶಿನಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys