ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ
ಹಾಗೆಂದರೇನು?
ಕಷ್ಟಕ್ಕೆ ಸೀರೆಯೇ ಆಗಬೇಕೇನು?
ಹಾಗಿದ್ದರೆ ಬೇಡಬಿಡಿ ಸೀರೆ
ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ
ಇಲ್ಲವೇ ಪ್ಯಾಂಟು ಮತ್ತು ಅಂಗಿ

ಹಾಕಿಕೊಳ್ಳದಿರಿ ಬೇಲಿ
ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ
ಹೆಣ್ಣು ಅಬಲೆ, ದುರ್ಬಲೆ
ಅಂದುಕೊಳ್ಳದಿರಿ

ಮಾತಿರಲಿ ಮೊನಚು ಮೊಳೆಯಂತೆ
ದೌರ್ಜನ್ಯಕ್ಕಿರಲಿ ಕನಲಿ
ಕುದಿವ ಕುಲುಮೆಯ ತಾಪ

ಬಗ್ಗಿದಷ್ಟು ಮೆಟ್ಟುವ ಆಸೆ
ಪ್ರಾಣಿ ಸಹಜ ಗುಣ
ದಿಕ್ಕರಿಸಿ, ಉಕ್ಕಿ ಬರಲಿದೆ
ಸೌಜನ್ಯ ಸನ್ಮಾನ

ದೂರು ಹೇಳದಿರಿ ನಿರುತ
ಧೈರ್ಯವಿರೆ, ದರ್ಪದ
ಬೆನ್ನಿಗೊಂದು ಗುದ್ದಿ, ಪಾಠ ಕಲಿಸಿ
ದುಗುಡ ಪರಿಹಿಸಿಕೊಳ್ಳಿ

ತಾಳ್ಮೆಯೆಂದರೆ ಸೀರೆ
ಕರುಣೆಯೆಂದರೆ ಸೀರೆ
ಶೀಲವೆಂದರೂ ಸೀರೆ

ಉಬ್ಬಿಸಿ ಎತ್ತರ ತೋರಿಸಿ
ದೊಪ್ಪನೆ ಕೆಳಗೆ ತಳ್ಳಿ ಬಿಡುವವರ
ಕೂಡ ಇರಲಿ ಜಾಗೃತಿ

ಹಾತೆಯಾಗದಿರಿ
ಬೆಳಕಿನ ಮುದ್ದಿಗೋಸ್ಕರ
ಜ್ವಾಲೆಗೆ ಬಲಿಯಾಗುವ
ಬದಲಿಗೆ ಮಿಂಚು ಹುಳುವಾಗಿ
ನಿಮ್ಮ ಪಾಲಿಗೆ ನೀವೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಬೇಕು
Next post ಪ್ರಿಯದರ್ಶಿನಿ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…