ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ
ಹಾಗೆಂದರೇನು?
ಕಷ್ಟಕ್ಕೆ ಸೀರೆಯೇ ಆಗಬೇಕೇನು?
ಹಾಗಿದ್ದರೆ ಬೇಡಬಿಡಿ ಸೀರೆ
ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ
ಇಲ್ಲವೇ ಪ್ಯಾಂಟು ಮತ್ತು ಅಂಗಿ

ಹಾಕಿಕೊಳ್ಳದಿರಿ ಬೇಲಿ
ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ
ಹೆಣ್ಣು ಅಬಲೆ, ದುರ್ಬಲೆ
ಅಂದುಕೊಳ್ಳದಿರಿ

ಮಾತಿರಲಿ ಮೊನಚು ಮೊಳೆಯಂತೆ
ದೌರ್ಜನ್ಯಕ್ಕಿರಲಿ ಕನಲಿ
ಕುದಿವ ಕುಲುಮೆಯ ತಾಪ

ಬಗ್ಗಿದಷ್ಟು ಮೆಟ್ಟುವ ಆಸೆ
ಪ್ರಾಣಿ ಸಹಜ ಗುಣ
ದಿಕ್ಕರಿಸಿ, ಉಕ್ಕಿ ಬರಲಿದೆ
ಸೌಜನ್ಯ ಸನ್ಮಾನ

ದೂರು ಹೇಳದಿರಿ ನಿರುತ
ಧೈರ್ಯವಿರೆ, ದರ್ಪದ
ಬೆನ್ನಿಗೊಂದು ಗುದ್ದಿ, ಪಾಠ ಕಲಿಸಿ
ದುಗುಡ ಪರಿಹಿಸಿಕೊಳ್ಳಿ

ತಾಳ್ಮೆಯೆಂದರೆ ಸೀರೆ
ಕರುಣೆಯೆಂದರೆ ಸೀರೆ
ಶೀಲವೆಂದರೂ ಸೀರೆ

ಉಬ್ಬಿಸಿ ಎತ್ತರ ತೋರಿಸಿ
ದೊಪ್ಪನೆ ಕೆಳಗೆ ತಳ್ಳಿ ಬಿಡುವವರ
ಕೂಡ ಇರಲಿ ಜಾಗೃತಿ

ಹಾತೆಯಾಗದಿರಿ
ಬೆಳಕಿನ ಮುದ್ದಿಗೋಸ್ಕರ
ಜ್ವಾಲೆಗೆ ಬಲಿಯಾಗುವ
ಬದಲಿಗೆ ಮಿಂಚು ಹುಳುವಾಗಿ
ನಿಮ್ಮ ಪಾಲಿಗೆ ನೀವೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಬೇಕು
Next post ಪ್ರಿಯದರ್ಶಿನಿ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…