ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು
ನಮಗೀಗ ಬೇಕು

ಯಾರಿಗೆ ಬೇಕು ಷಂಡ
ಬೂದಿ ಮುಚ್ಚಿದ ಕೆಂಡ?
ಬೇಕೀಗ ಪ್ರಜ್ವಲಿಸುತ
ಬೆಳಗುವಾ ಜ್ವಾಲೆ

ಒಳಗೇ ಕುದ್ದರೇನು ಲಾವಾ?
ಜ್ವಾಲಾಮುಖಿ ಹೊರ ಉಕ್ಕಿ
ಸುರಿಯಬೇಕು
ಕೆಡುಕೆಲ್ಲವ ಸುಡಬೇಕು

ಉಕ್ಕುಕ್ಕಿ ಬರುವ
ಬಿಕ್ಕುಗಳ ಒಳತಳ್ಳಿ
ಆಂತರ್ಯ ಸುಟ್ಟರೇನು?
ಭೋರ್ಗರೆದು ಬರಲಿ
ಕಣ್ಣೀರ ಶರಧಿ
ಕೊಚ್ಚಿ ಹೋಗಲಿ ಕೊಳೆಯು
ಉಳಿದೀತು ಹಸನು!

ಉಸಿರು ತಾಗೀತೆಂದು
ಒಳಗೆಳೆದುಕೊಂಡು
ಬಚ್ಚಿಟ್ಟ ನಿಟ್ಟುಸಿರು
ಇನ್ನಾದರೂ ಹೊರಚಿಮ್ಮಬೇಕು
ಬಿರುಗಾಳಿಯಾಗಿ
ಹಗುರಾದುದೆಲ್ಲವೂ ತೂರಿಹೋಗಬೇಕು,
ಗಟ್ಟಿ ಉಳಿಯಬೇಕು!

ಮಣ್ಣೊಳಗೇ ಹೂತು
ನಿರ್ವೀರ್ಯವಾದೆಲ್ಲ ಕಾಳು
ತನ್ನೊಳಗಿನ ಜೊಳ್ಳೆಲ್ಲಾ ತೂರಿ
ಬಂಡೆ ಸೀಳುತ
ಮೊಳೆತು ಬರಬೇಕು
ಹಸಿರು ತರಬೇಕು!

ಮನದ ಆಳದಲ್ಲೆಲ್ಲೋ
ಅವಿತಿಟ್ಟ
ಅವ್ಯಕ್ತ ಭಾವಗಳು
ಎಲ್ಲ ಮುಸುಗುಗಳ
ಒದ್ದು
ಹೊರ ಹೊಮ್ಮಬೇಕು
ಸವಿ ಮಾತಾಗಬೇಕು!

ಬಚ್ಚಿಟ್ಟ ಬೆಳಕು
ಹೊರಹೊಮ್ಮಬೇಕು
ಕತ್ತಲಲಿ ಕಾದಿದ್ದು ಸಾಕು
ಇನ್ನು ಬೆಳಗಾಗಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತ್ಯಕ್ಷ
Next post ಸೀರೆಯೊಳಗಡೆ ಕಷ್ಟವಿದೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…