ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು
ನಮಗೀಗ ಬೇಕು

ಯಾರಿಗೆ ಬೇಕು ಷಂಡ
ಬೂದಿ ಮುಚ್ಚಿದ ಕೆಂಡ?
ಬೇಕೀಗ ಪ್ರಜ್ವಲಿಸುತ
ಬೆಳಗುವಾ ಜ್ವಾಲೆ

ಒಳಗೇ ಕುದ್ದರೇನು ಲಾವಾ?
ಜ್ವಾಲಾಮುಖಿ ಹೊರ ಉಕ್ಕಿ
ಸುರಿಯಬೇಕು
ಕೆಡುಕೆಲ್ಲವ ಸುಡಬೇಕು

ಉಕ್ಕುಕ್ಕಿ ಬರುವ
ಬಿಕ್ಕುಗಳ ಒಳತಳ್ಳಿ
ಆಂತರ್ಯ ಸುಟ್ಟರೇನು?
ಭೋರ್ಗರೆದು ಬರಲಿ
ಕಣ್ಣೀರ ಶರಧಿ
ಕೊಚ್ಚಿ ಹೋಗಲಿ ಕೊಳೆಯು
ಉಳಿದೀತು ಹಸನು!

ಉಸಿರು ತಾಗೀತೆಂದು
ಒಳಗೆಳೆದುಕೊಂಡು
ಬಚ್ಚಿಟ್ಟ ನಿಟ್ಟುಸಿರು
ಇನ್ನಾದರೂ ಹೊರಚಿಮ್ಮಬೇಕು
ಬಿರುಗಾಳಿಯಾಗಿ
ಹಗುರಾದುದೆಲ್ಲವೂ ತೂರಿಹೋಗಬೇಕು,
ಗಟ್ಟಿ ಉಳಿಯಬೇಕು!

ಮಣ್ಣೊಳಗೇ ಹೂತು
ನಿರ್ವೀರ್ಯವಾದೆಲ್ಲ ಕಾಳು
ತನ್ನೊಳಗಿನ ಜೊಳ್ಳೆಲ್ಲಾ ತೂರಿ
ಬಂಡೆ ಸೀಳುತ
ಮೊಳೆತು ಬರಬೇಕು
ಹಸಿರು ತರಬೇಕು!

ಮನದ ಆಳದಲ್ಲೆಲ್ಲೋ
ಅವಿತಿಟ್ಟ
ಅವ್ಯಕ್ತ ಭಾವಗಳು
ಎಲ್ಲ ಮುಸುಗುಗಳ
ಒದ್ದು
ಹೊರ ಹೊಮ್ಮಬೇಕು
ಸವಿ ಮಾತಾಗಬೇಕು!

ಬಚ್ಚಿಟ್ಟ ಬೆಳಕು
ಹೊರಹೊಮ್ಮಬೇಕು
ಕತ್ತಲಲಿ ಕಾದಿದ್ದು ಸಾಕು
ಇನ್ನು ಬೆಳಗಾಗಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತ್ಯಕ್ಷ
Next post ಸೀರೆಯೊಳಗಡೆ ಕಷ್ಟವಿದೆ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys