ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು
ನಮಗೀಗ ಬೇಕು

ಯಾರಿಗೆ ಬೇಕು ಷಂಡ
ಬೂದಿ ಮುಚ್ಚಿದ ಕೆಂಡ?
ಬೇಕೀಗ ಪ್ರಜ್ವಲಿಸುತ
ಬೆಳಗುವಾ ಜ್ವಾಲೆ

ಒಳಗೇ ಕುದ್ದರೇನು ಲಾವಾ?
ಜ್ವಾಲಾಮುಖಿ ಹೊರ ಉಕ್ಕಿ
ಸುರಿಯಬೇಕು
ಕೆಡುಕೆಲ್ಲವ ಸುಡಬೇಕು

ಉಕ್ಕುಕ್ಕಿ ಬರುವ
ಬಿಕ್ಕುಗಳ ಒಳತಳ್ಳಿ
ಆಂತರ್ಯ ಸುಟ್ಟರೇನು?
ಭೋರ್ಗರೆದು ಬರಲಿ
ಕಣ್ಣೀರ ಶರಧಿ
ಕೊಚ್ಚಿ ಹೋಗಲಿ ಕೊಳೆಯು
ಉಳಿದೀತು ಹಸನು!

ಉಸಿರು ತಾಗೀತೆಂದು
ಒಳಗೆಳೆದುಕೊಂಡು
ಬಚ್ಚಿಟ್ಟ ನಿಟ್ಟುಸಿರು
ಇನ್ನಾದರೂ ಹೊರಚಿಮ್ಮಬೇಕು
ಬಿರುಗಾಳಿಯಾಗಿ
ಹಗುರಾದುದೆಲ್ಲವೂ ತೂರಿಹೋಗಬೇಕು,
ಗಟ್ಟಿ ಉಳಿಯಬೇಕು!

ಮಣ್ಣೊಳಗೇ ಹೂತು
ನಿರ್ವೀರ್ಯವಾದೆಲ್ಲ ಕಾಳು
ತನ್ನೊಳಗಿನ ಜೊಳ್ಳೆಲ್ಲಾ ತೂರಿ
ಬಂಡೆ ಸೀಳುತ
ಮೊಳೆತು ಬರಬೇಕು
ಹಸಿರು ತರಬೇಕು!

ಮನದ ಆಳದಲ್ಲೆಲ್ಲೋ
ಅವಿತಿಟ್ಟ
ಅವ್ಯಕ್ತ ಭಾವಗಳು
ಎಲ್ಲ ಮುಸುಗುಗಳ
ಒದ್ದು
ಹೊರ ಹೊಮ್ಮಬೇಕು
ಸವಿ ಮಾತಾಗಬೇಕು!

ಬಚ್ಚಿಟ್ಟ ಬೆಳಕು
ಹೊರಹೊಮ್ಮಬೇಕು
ಕತ್ತಲಲಿ ಕಾದಿದ್ದು ಸಾಕು
ಇನ್ನು ಬೆಳಗಾಗಬೇಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತ್ಯಕ್ಷ
Next post ಸೀರೆಯೊಳಗಡೆ ಕಷ್ಟವಿದೆ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…