Home / ಕವನ / ಕವಿತೆ / ಬೆಳಕು ಬೇಕು

ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು
ನಮಗೀಗ ಬೇಕು

ಯಾರಿಗೆ ಬೇಕು ಷಂಡ
ಬೂದಿ ಮುಚ್ಚಿದ ಕೆಂಡ?
ಬೇಕೀಗ ಪ್ರಜ್ವಲಿಸುತ
ಬೆಳಗುವಾ ಜ್ವಾಲೆ

ಒಳಗೇ ಕುದ್ದರೇನು ಲಾವಾ?
ಜ್ವಾಲಾಮುಖಿ ಹೊರ ಉಕ್ಕಿ
ಸುರಿಯಬೇಕು
ಕೆಡುಕೆಲ್ಲವ ಸುಡಬೇಕು

ಉಕ್ಕುಕ್ಕಿ ಬರುವ
ಬಿಕ್ಕುಗಳ ಒಳತಳ್ಳಿ
ಆಂತರ್ಯ ಸುಟ್ಟರೇನು?
ಭೋರ್ಗರೆದು ಬರಲಿ
ಕಣ್ಣೀರ ಶರಧಿ
ಕೊಚ್ಚಿ ಹೋಗಲಿ ಕೊಳೆಯು
ಉಳಿದೀತು ಹಸನು!

ಉಸಿರು ತಾಗೀತೆಂದು
ಒಳಗೆಳೆದುಕೊಂಡು
ಬಚ್ಚಿಟ್ಟ ನಿಟ್ಟುಸಿರು
ಇನ್ನಾದರೂ ಹೊರಚಿಮ್ಮಬೇಕು
ಬಿರುಗಾಳಿಯಾಗಿ
ಹಗುರಾದುದೆಲ್ಲವೂ ತೂರಿಹೋಗಬೇಕು,
ಗಟ್ಟಿ ಉಳಿಯಬೇಕು!

ಮಣ್ಣೊಳಗೇ ಹೂತು
ನಿರ್ವೀರ್ಯವಾದೆಲ್ಲ ಕಾಳು
ತನ್ನೊಳಗಿನ ಜೊಳ್ಳೆಲ್ಲಾ ತೂರಿ
ಬಂಡೆ ಸೀಳುತ
ಮೊಳೆತು ಬರಬೇಕು
ಹಸಿರು ತರಬೇಕು!

ಮನದ ಆಳದಲ್ಲೆಲ್ಲೋ
ಅವಿತಿಟ್ಟ
ಅವ್ಯಕ್ತ ಭಾವಗಳು
ಎಲ್ಲ ಮುಸುಗುಗಳ
ಒದ್ದು
ಹೊರ ಹೊಮ್ಮಬೇಕು
ಸವಿ ಮಾತಾಗಬೇಕು!

ಬಚ್ಚಿಟ್ಟ ಬೆಳಕು
ಹೊರಹೊಮ್ಮಬೇಕು
ಕತ್ತಲಲಿ ಕಾದಿದ್ದು ಸಾಕು
ಇನ್ನು ಬೆಳಗಾಗಬೇಕು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...