ಬಂಧನ

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು
ಕಡಲ ನಡುವೆ ಈಸಿದೆ
ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು
ದಣಿದು ನಾನು ಬಳಲಿದೆ

ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ!
ಮುಗಿಯ ಬಹುದೆ ಕಡಲು?
ಮುಗಿಯಲಿಲ್ಲ ತಿಳಿಯಲಿಲ್ಲ; ಕೈಯಬೀಸಿದೆ
ಇನ್ನು ತಾಳದೆನ್ನ ಒಡಲು

ಹಿರಿಯ ಕಿರಿಯ ತೆರೆಗಳೆಲ್ಲ ಹಿಂದೆ ಹಾಕಿದೆ
ಹೃದಯ ಮುಂದೆ ಚಾಚಿದೆ
ಕಣ್ಣು ಕಂಡ ದೂರವನ್ನು ಎಲ್ಲೋ ದಾಟಿದೆ
ಇನ್ನು ಮುಂದೆ ಹಾರಿದೆ

ಬೀಸುಗಾಳಿ ಬಿರುಗಾಳಿ ಎಲ್ಲ ಸಹಿಸಿದೆ
ತೋಳ ಬೀಸಿ ಮತ್ತೆ ಈಸಿದೆ
ಗಗನ ಮೇಲೆ ನೀರು ಕೆಳಗೆ; ಮುಂದೋಡಿದೆ
ಅರಿಯದ ಗುರಿಯತ್ತ ಸಾಗಿದೆ

ಎನಿತೊ ಏನೋ ಈಸಿ ಬಂದೆ. ಇನ್ನೇನು ಮು೦ದೆ?
ಕಿರಿಯ ತೋಳು ಸಹಿಸಬಹುದೆ?
ಎನಿತೊ ತೆರೆಯನೇರಿ ಅಳಲ ತಾಳದಾದೆ
ನನ್ನ ಗುರಿಯ ದಾರಿ ಅರಿಯದೆ ಹೋದೆ

ನಿಂತರೆ ಮರಣ, ನಡೆದರೆ ನರಕ ವೇದನ
ಅಯ್ಯೊ ವಿಧಿಯ ಬಾಧನ !
ಯಾರು ಇಲ್ಲ ಇಲ್ಲಿ ಎನಗೆ ಕೇಳಲೆನ್ನ ಕ್ರಂದನ
ಯಾರೆನಗೆ ಬಿಡಿಸಲೀ ಬಂಧನ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಡೆ
Next post ಏನು ಪೋಸು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys