ಬಂಧನ

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು
ಕಡಲ ನಡುವೆ ಈಸಿದೆ
ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು
ದಣಿದು ನಾನು ಬಳಲಿದೆ

ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ!
ಮುಗಿಯ ಬಹುದೆ ಕಡಲು?
ಮುಗಿಯಲಿಲ್ಲ ತಿಳಿಯಲಿಲ್ಲ; ಕೈಯಬೀಸಿದೆ
ಇನ್ನು ತಾಳದೆನ್ನ ಒಡಲು

ಹಿರಿಯ ಕಿರಿಯ ತೆರೆಗಳೆಲ್ಲ ಹಿಂದೆ ಹಾಕಿದೆ
ಹೃದಯ ಮುಂದೆ ಚಾಚಿದೆ
ಕಣ್ಣು ಕಂಡ ದೂರವನ್ನು ಎಲ್ಲೋ ದಾಟಿದೆ
ಇನ್ನು ಮುಂದೆ ಹಾರಿದೆ

ಬೀಸುಗಾಳಿ ಬಿರುಗಾಳಿ ಎಲ್ಲ ಸಹಿಸಿದೆ
ತೋಳ ಬೀಸಿ ಮತ್ತೆ ಈಸಿದೆ
ಗಗನ ಮೇಲೆ ನೀರು ಕೆಳಗೆ; ಮುಂದೋಡಿದೆ
ಅರಿಯದ ಗುರಿಯತ್ತ ಸಾಗಿದೆ

ಎನಿತೊ ಏನೋ ಈಸಿ ಬಂದೆ. ಇನ್ನೇನು ಮು೦ದೆ?
ಕಿರಿಯ ತೋಳು ಸಹಿಸಬಹುದೆ?
ಎನಿತೊ ತೆರೆಯನೇರಿ ಅಳಲ ತಾಳದಾದೆ
ನನ್ನ ಗುರಿಯ ದಾರಿ ಅರಿಯದೆ ಹೋದೆ

ನಿಂತರೆ ಮರಣ, ನಡೆದರೆ ನರಕ ವೇದನ
ಅಯ್ಯೊ ವಿಧಿಯ ಬಾಧನ !
ಯಾರು ಇಲ್ಲ ಇಲ್ಲಿ ಎನಗೆ ಕೇಳಲೆನ್ನ ಕ್ರಂದನ
ಯಾರೆನಗೆ ಬಿಡಿಸಲೀ ಬಂಧನ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಡೆ
Next post ಏನು ಪೋಸು

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…