ಶ್ರೀ ಕಾಡಸಿದ್ದೇಶ್ವರಾ!

ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು
ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು
ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು!
ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!!

ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು
ಹಿಂದೊಮ್ಮೆ, ಪ್ರಕೃತಿ ರೌದ್ರರಮಣೀಯತೆ ತಾಳಿತ್ತು,
ನಿನ್ನ ಅಧ್ಯಕ್ಷತೆಯಲಿ ಸರ್ವವೂ ನಿಯತ ಸ್ವಚ್ಛಂಧವಿತ್ತು,
ಇಂದೋ ಸೌ೦ದರ್ಯ ಸುಕುಮಾರತೆ ಮೆರೆಯುತ್ತಿವೆ!

ಕಾಡೆಲ್ಲಾ ನಾಡಿನಾ ಬಯಲಾಯ್ತು; ಮೋಡ ಮಿಂಚಾಯ್ತು
ಕಾಡು ನಗುವ ನಂದನವಾಯ್ತು; ಮಿಂಚು ಬೆಳಕಾಯ್ತು.
ಕಡು ಕಾಡೇ ನಾಡಿಗೆ ಪ್ರಥಮ ನಾಂದಿಯಾಯ್ತು
ನೋಡು ವಿದ್ಯಾನಗರವೇ ಮೈದಾಳಿತು; ಶ್ರೀ ಕಾಡಸಿದ್ದೇಶ್ವರಾ !

ಕಾಡಿನಲಿ ತಪಗೈಯ್ಯೆ ವಾಸಿಸಲು ಶ್ರೀ ಕಾಡಸಿದ್ದೇಶ್ವರನಾದೆ,
ಸೌಂದರ್ಯ ಪೋಷಕನಾಗಿ ನಾಡ ಶ್ರೀ ಸಿದ್ದೇಶ್ವರನಾದೆ.
ಕಾಡನ್ನು ಸತ್ಯ-ಸತ್ವಗಳಲಿ ಮೆರೆವ ನಂದನವಾಗಿಸಿದೆ !
ನಿನ್ನ ತಪೋವನವನೇ ಸಂಸ್ಕೃತಿಯ ಬೀಡಾಗಿಸಿದೆ !!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಯಾಗ್ರ
Next post ಅವಧಾನ-ಸಾವಧಾನ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…