ಶ್ರೀ ಕಾಡಸಿದ್ದೇಶ್ವರಾ!

ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು
ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು
ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು!
ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!!

ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು
ಹಿಂದೊಮ್ಮೆ, ಪ್ರಕೃತಿ ರೌದ್ರರಮಣೀಯತೆ ತಾಳಿತ್ತು,
ನಿನ್ನ ಅಧ್ಯಕ್ಷತೆಯಲಿ ಸರ್ವವೂ ನಿಯತ ಸ್ವಚ್ಛಂಧವಿತ್ತು,
ಇಂದೋ ಸೌ೦ದರ್ಯ ಸುಕುಮಾರತೆ ಮೆರೆಯುತ್ತಿವೆ!

ಕಾಡೆಲ್ಲಾ ನಾಡಿನಾ ಬಯಲಾಯ್ತು; ಮೋಡ ಮಿಂಚಾಯ್ತು
ಕಾಡು ನಗುವ ನಂದನವಾಯ್ತು; ಮಿಂಚು ಬೆಳಕಾಯ್ತು.
ಕಡು ಕಾಡೇ ನಾಡಿಗೆ ಪ್ರಥಮ ನಾಂದಿಯಾಯ್ತು
ನೋಡು ವಿದ್ಯಾನಗರವೇ ಮೈದಾಳಿತು; ಶ್ರೀ ಕಾಡಸಿದ್ದೇಶ್ವರಾ !

ಕಾಡಿನಲಿ ತಪಗೈಯ್ಯೆ ವಾಸಿಸಲು ಶ್ರೀ ಕಾಡಸಿದ್ದೇಶ್ವರನಾದೆ,
ಸೌಂದರ್ಯ ಪೋಷಕನಾಗಿ ನಾಡ ಶ್ರೀ ಸಿದ್ದೇಶ್ವರನಾದೆ.
ಕಾಡನ್ನು ಸತ್ಯ-ಸತ್ವಗಳಲಿ ಮೆರೆವ ನಂದನವಾಗಿಸಿದೆ !
ನಿನ್ನ ತಪೋವನವನೇ ಸಂಸ್ಕೃತಿಯ ಬೀಡಾಗಿಸಿದೆ !!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಯಾಗ್ರ
Next post ಅವಧಾನ-ಸಾವಧಾನ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…