ಸೌದಾಮಿನಿ

ನಿರಾಭರಣ ಸುಂದರಿ
ಎನ್ನಂತರಾಳದ ಗೀತಿಕೆ ಮಂಜರಿ |

ಒಡವೆ ತೊಡವಲಂಕಾರವಿರದ
ಸಮದರ್ಶಿ ಸರಳಭಿಸಾರಿಕೆ
ರೂಪಿನೊನಪಿನ ಬಿಂಕ ಬೆಡಗನು
ತೊರೆದ ಸಿಂಗರ ಭೂಮಿಕೆ |

ಝಣ ಝಣ ಶ್ರೀ ಸದ್ದ ಬಯಸದ
ದುಗ್ದ ಹಾಸ ಮೌನದೆ ಮಾನಿನಿ
ಅಡ್ಡಗೋಡೆಯ ಕುಟ್ಟಿ ಕೆಡವಿಸೊ
ತಿಂಗಳಂಗಳ ಸೌದಾಮಿನಿ |

ಅವಳ ದರುಶನ ಕವಿತೆ ಕಾರಣ
ದಿಟ್ಟ ದಿಟ್ಟಿಯ ಭಾವನಾ
ಹೆಮ್ಮೆ ಲಜ್ಜೆಯೊಡಲಾಳ ಹುಡಿನುಡಿ
ಪದ ಪಾದವರ್ಣದ ವರ್ಣನಾ |

ನಿನ್ನ ಪದತಲದಲ್ಲಿ ನನ್ನಯ
ಕೊರಳ ಕೊಳಲಿನ ಗಾನವು
ನನ್ನ ಜೀವನ ಪಥವೆ ನಿನ್ನಯ
ರಾಗಾನುರಾಗ ಸುಸ್ವರ ಸೇತುವು |

ಗುಡಿಸಲಂಗಳ ರಂಗವಲ್ಲಿಯ
ಅರಳು ಮಲ್ಲಿಗೆ ಮ್ಲಾನವು
ಸೂರು ಸೂರಲಿ ಸೂಸೋ ರಶ್ಮಿಯ
ಮುಗ್ದ ಚಂದ್ರಿಕೆ ಗೀತವು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರ ಬಳಸಿ ನಿಂತಿರುವೆನೊ
Next post ನೀಲಿ ಕಾಡು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys