ಸೌದಾಮಿನಿ

ನಿರಾಭರಣ ಸುಂದರಿ
ಎನ್ನಂತರಾಳದ ಗೀತಿಕೆ ಮಂಜರಿ |

ಒಡವೆ ತೊಡವಲಂಕಾರವಿರದ
ಸಮದರ್ಶಿ ಸರಳಭಿಸಾರಿಕೆ
ರೂಪಿನೊನಪಿನ ಬಿಂಕ ಬೆಡಗನು
ತೊರೆದ ಸಿಂಗರ ಭೂಮಿಕೆ |

ಝಣ ಝಣ ಶ್ರೀ ಸದ್ದ ಬಯಸದ
ದುಗ್ದ ಹಾಸ ಮೌನದೆ ಮಾನಿನಿ
ಅಡ್ಡಗೋಡೆಯ ಕುಟ್ಟಿ ಕೆಡವಿಸೊ
ತಿಂಗಳಂಗಳ ಸೌದಾಮಿನಿ |

ಅವಳ ದರುಶನ ಕವಿತೆ ಕಾರಣ
ದಿಟ್ಟ ದಿಟ್ಟಿಯ ಭಾವನಾ
ಹೆಮ್ಮೆ ಲಜ್ಜೆಯೊಡಲಾಳ ಹುಡಿನುಡಿ
ಪದ ಪಾದವರ್ಣದ ವರ್ಣನಾ |

ನಿನ್ನ ಪದತಲದಲ್ಲಿ ನನ್ನಯ
ಕೊರಳ ಕೊಳಲಿನ ಗಾನವು
ನನ್ನ ಜೀವನ ಪಥವೆ ನಿನ್ನಯ
ರಾಗಾನುರಾಗ ಸುಸ್ವರ ಸೇತುವು |

ಗುಡಿಸಲಂಗಳ ರಂಗವಲ್ಲಿಯ
ಅರಳು ಮಲ್ಲಿಗೆ ಮ್ಲಾನವು
ಸೂರು ಸೂರಲಿ ಸೂಸೋ ರಶ್ಮಿಯ
ಮುಗ್ದ ಚಂದ್ರಿಕೆ ಗೀತವು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರ ಬಳಸಿ ನಿಂತಿರುವೆನೊ
Next post ನೀಲಿ ಕಾಡು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…