ನೀಲಿ ಕಾಡು

ಯಾರದೀ ವಿಶಾಲತೋಟ ಕಾಡು ಮೇಡು?
ಯಾರಿದರ ಮಾಲಿಕ?
ಬೆಳೆಸಿಕೊಂಡಿದ್ದಾನೆ ಅಲ್ಲಲ್ಲಿ
ಸೂರ್ಯ ಚಂದ್ರ ತಾರೆಯರ
ಮಂಗಳ ಬುಧ ಗುರು ಶುಕ್ರ
ಶನಿ ರಾಹು ಕೇತು
ಗ್ರಹ ನಕ್ಷತ್ರಗಳಾ ಬೆಳೆ!

ಆಗಾಗ ಬೆಳೆಸುವನು ಮತ್ತೆ
ಕಾಲನ ಕಾದಾಟಕೆ ಮಿಂಚು ಮೋಡ
ಧುಮಕೇತು ಗ್ರಹಗಳ ಕಚ್ಚಾಟ
ನಕ್ಷತ್ರಗಳ ತಿಕ್ಕಾಟ
ನೇಗಿಲಯೋಗಿ ಸಪ್ತರ್ಷಿಗಳ ಪ್ರೀತಿ
ನೀಲಿಕಾಡು ಮತ್ತೆ ಶಾಂತ
ಯಾರಿದರ ಮಾಲಿಕ-

ಕಾಮನಬಿಲ್ಲಾಗಿ ಕಾಮಣ್ಣ
ಹೊಸಹೊಸ ಬೀಜಗಳಾ ಬಿಡಿಸಿ
ಯುರೆನಸ್ ನಪ್ಚೂನ್ ಪ್ಲೂಟೋ….
….ಬೆಳೆಗಳಾ ಬೆಳೆಸುತಾ…
ಶಿವ ಸಂಚರಿಸುವಾ ಕಾಡಿದು

ಬೆಳೆಸಿಕೊಳ್ಳಬಹುದಿಲ್ಲಿ ನಾವೂ
ಕಲ್ಪನೆಗಳ ಮೂಟೆ ಮೂಟೆ ಕನಸುಗಳ ಬೆಳೆ
ಹಾಲುನೊರೆಯ ತೆರೆಗಳ ಸಾಲುಗಳ ನಡುವೆ
ಬೆಳ್ಳಿ ಮೋಡಗಳಂಚಿಗೆ
ಮನಸುಗಳ ಬೀಜ ಹಾಕಿ
ಭಾವ ತೇವಗೊಳಿಸಿ
ಪ್ರೀತಿ ಹದವಾಗಿಸಿದರೆ
ಕಣ್ತುಂಬ ನೀಲಿ ಕಾಡೇಕಾಡು
ಓಡಾಡಿ ಸುಖಿಸಬಹುದೊಂದಿಷ್ಟು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌದಾಮಿನಿ
Next post ಮಂಗಪ್ಪ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys