ನೀಲಿ ಕಾಡು

ಯಾರದೀ ವಿಶಾಲತೋಟ ಕಾಡು ಮೇಡು?
ಯಾರಿದರ ಮಾಲಿಕ?
ಬೆಳೆಸಿಕೊಂಡಿದ್ದಾನೆ ಅಲ್ಲಲ್ಲಿ
ಸೂರ್ಯ ಚಂದ್ರ ತಾರೆಯರ
ಮಂಗಳ ಬುಧ ಗುರು ಶುಕ್ರ
ಶನಿ ರಾಹು ಕೇತು
ಗ್ರಹ ನಕ್ಷತ್ರಗಳಾ ಬೆಳೆ!

ಆಗಾಗ ಬೆಳೆಸುವನು ಮತ್ತೆ
ಕಾಲನ ಕಾದಾಟಕೆ ಮಿಂಚು ಮೋಡ
ಧುಮಕೇತು ಗ್ರಹಗಳ ಕಚ್ಚಾಟ
ನಕ್ಷತ್ರಗಳ ತಿಕ್ಕಾಟ
ನೇಗಿಲಯೋಗಿ ಸಪ್ತರ್ಷಿಗಳ ಪ್ರೀತಿ
ನೀಲಿಕಾಡು ಮತ್ತೆ ಶಾಂತ
ಯಾರಿದರ ಮಾಲಿಕ-

ಕಾಮನಬಿಲ್ಲಾಗಿ ಕಾಮಣ್ಣ
ಹೊಸಹೊಸ ಬೀಜಗಳಾ ಬಿಡಿಸಿ
ಯುರೆನಸ್ ನಪ್ಚೂನ್ ಪ್ಲೂಟೋ….
….ಬೆಳೆಗಳಾ ಬೆಳೆಸುತಾ…
ಶಿವ ಸಂಚರಿಸುವಾ ಕಾಡಿದು

ಬೆಳೆಸಿಕೊಳ್ಳಬಹುದಿಲ್ಲಿ ನಾವೂ
ಕಲ್ಪನೆಗಳ ಮೂಟೆ ಮೂಟೆ ಕನಸುಗಳ ಬೆಳೆ
ಹಾಲುನೊರೆಯ ತೆರೆಗಳ ಸಾಲುಗಳ ನಡುವೆ
ಬೆಳ್ಳಿ ಮೋಡಗಳಂಚಿಗೆ
ಮನಸುಗಳ ಬೀಜ ಹಾಕಿ
ಭಾವ ತೇವಗೊಳಿಸಿ
ಪ್ರೀತಿ ಹದವಾಗಿಸಿದರೆ
ಕಣ್ತುಂಬ ನೀಲಿ ಕಾಡೇಕಾಡು
ಓಡಾಡಿ ಸುಖಿಸಬಹುದೊಂದಿಷ್ಟು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌದಾಮಿನಿ
Next post ಮಂಗಪ್ಪ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…