ಅಮ್ಮ – ಬೆಂಕಿ

ಅಮ್ಮ ಪ್ರತಿದಿವಸ ಒಲೆಸಾರಿಸಿ
ರಂಗೋಲಿ ಇಡುತ್ತಿದ್ದಳು ಎದೆಯ
ಒಲೆಯ ಉರಿ ಎಂದೂ ಆಗಲೇ ಇಲ್ಲ.
ಅವರಿವರ ದೊಡ್ಡವರು ಮಾತುಗಳು
ಅವಳ ಒಲೆಯ ಗೂಡು ಕಣ್ಣುಗಳು
ಯಾವಾಗಲೂ ಊದಿಕೊಂಡಂತೆ
ಉಸಿರುಗಳು ಗಾಳಿಯಲಿ ತೇಲಿ
ಅವಳು ಮತ್ತೆ ಒಲೆ ಊದುತ್ತಿದ್ದಾಳೆ.

ಸತ್ತ ಕ್ಷಣಗಳು ಮತ್ತೆ ಪುಟ ವಿರಿಸಿ
ಒಲೆ ಹೊತ್ತಿಸುವ ಕಾಯಕ ಅವಳಿಗಲ್ಲದೇ
ಇನ್ನಾರಿಗೆ ಗೊತ್ತು | ಸಂತೆಯಲಿ
ಎಲ್ಲಾ ವಸ್ತುಗಳ ಮಾರಾಟ, ಅವಳ ಕನಸು
ಬಿಕರಿಗೆ, ರಾತ್ರಿಯ ಪಹರಿಗೆ ಯಾವ ಮಜಲು?
ನಡೇದೇ ನಡೆದಳು ಕಾಲಸಪ್ಪಳ ಯಾರಿಗೂ ಕೇಳಲಿಲ್ಲ.

ಅತ್ತ ಕಂದಮ್ಮಗಳ ತಲೆತೊಡೆಗೇರಿಸಿಕೊಂಡು,
ಬಡಿಯುತ್ತಿದ್ದಾಳೆ ಭೂಮಿಯ ಗುಂಡಗಿನ ರೊಟ್ಟಿ
ಒಲೆಯೊಂದು ಮಾತ್ರ ಅವಳ ಬೆಚ್ಚಗಿರಿಸಿದೆ
ಕಿಚ್ಚು ಅರಳಿಸಿ ಬೇಯಿಸುತ್ತಾಳೆ ಬಿಳಿ
ಘಮ ಘಮಿಸುವ ಅನ್ನ ಎಲ್ಲಾ
ಪಾಡುಗಳು ಅವಳು ಕಟ್ಟುವ ಬುತ್ತೀಗಂಟು.

ಊದಿದ ಒಲೆಯ ಬೆಂಕಿ ಅಮ್ಮ
ಅವಳುಸಿರು ಒಲೆಯ ಬೆಂಕಿ
ಅವರ ಹೆಗಲಮೇಲೆ ಎಲ್ಲರ ಜಾಗ
ಎಲ್ಲವೂ ಮೇಳೈಸಿದ ಹಿತದ ರಾಗ
ಅಮ್ಮ ಬೆಂಕಿ ಶ್ರೇಷ್ಠ ದೈನಂದಿಕ ಚಟುವಟಿಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋಡು ಉಷೆ !
Next post ಚಿರಂತನ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys