Home / ಕವನ / ಕವಿತೆ / ಅಮ್ಮ – ಬೆಂಕಿ

ಅಮ್ಮ – ಬೆಂಕಿ

ಅಮ್ಮ ಪ್ರತಿದಿವಸ ಒಲೆಸಾರಿಸಿ
ರಂಗೋಲಿ ಇಡುತ್ತಿದ್ದಳು ಎದೆಯ
ಒಲೆಯ ಉರಿ ಎಂದೂ ಆಗಲೇ ಇಲ್ಲ.
ಅವರಿವರ ದೊಡ್ಡವರು ಮಾತುಗಳು
ಅವಳ ಒಲೆಯ ಗೂಡು ಕಣ್ಣುಗಳು
ಯಾವಾಗಲೂ ಊದಿಕೊಂಡಂತೆ
ಉಸಿರುಗಳು ಗಾಳಿಯಲಿ ತೇಲಿ
ಅವಳು ಮತ್ತೆ ಒಲೆ ಊದುತ್ತಿದ್ದಾಳೆ.

ಸತ್ತ ಕ್ಷಣಗಳು ಮತ್ತೆ ಪುಟ ವಿರಿಸಿ
ಒಲೆ ಹೊತ್ತಿಸುವ ಕಾಯಕ ಅವಳಿಗಲ್ಲದೇ
ಇನ್ನಾರಿಗೆ ಗೊತ್ತು | ಸಂತೆಯಲಿ
ಎಲ್ಲಾ ವಸ್ತುಗಳ ಮಾರಾಟ, ಅವಳ ಕನಸು
ಬಿಕರಿಗೆ, ರಾತ್ರಿಯ ಪಹರಿಗೆ ಯಾವ ಮಜಲು?
ನಡೇದೇ ನಡೆದಳು ಕಾಲಸಪ್ಪಳ ಯಾರಿಗೂ ಕೇಳಲಿಲ್ಲ.

ಅತ್ತ ಕಂದಮ್ಮಗಳ ತಲೆತೊಡೆಗೇರಿಸಿಕೊಂಡು,
ಬಡಿಯುತ್ತಿದ್ದಾಳೆ ಭೂಮಿಯ ಗುಂಡಗಿನ ರೊಟ್ಟಿ
ಒಲೆಯೊಂದು ಮಾತ್ರ ಅವಳ ಬೆಚ್ಚಗಿರಿಸಿದೆ
ಕಿಚ್ಚು ಅರಳಿಸಿ ಬೇಯಿಸುತ್ತಾಳೆ ಬಿಳಿ
ಘಮ ಘಮಿಸುವ ಅನ್ನ ಎಲ್ಲಾ
ಪಾಡುಗಳು ಅವಳು ಕಟ್ಟುವ ಬುತ್ತೀಗಂಟು.

ಊದಿದ ಒಲೆಯ ಬೆಂಕಿ ಅಮ್ಮ
ಅವಳುಸಿರು ಒಲೆಯ ಬೆಂಕಿ
ಅವರ ಹೆಗಲಮೇಲೆ ಎಲ್ಲರ ಜಾಗ
ಎಲ್ಲವೂ ಮೇಳೈಸಿದ ಹಿತದ ರಾಗ
ಅಮ್ಮ ಬೆಂಕಿ ಶ್ರೇಷ್ಠ ದೈನಂದಿಕ ಚಟುವಟಿಕೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...