Home / ಕವನ / ಕವಿತೆ / ಅಮ್ಮ – ಬೆಂಕಿ

ಅಮ್ಮ – ಬೆಂಕಿ

ಅಮ್ಮ ಪ್ರತಿದಿವಸ ಒಲೆಸಾರಿಸಿ
ರಂಗೋಲಿ ಇಡುತ್ತಿದ್ದಳು ಎದೆಯ
ಒಲೆಯ ಉರಿ ಎಂದೂ ಆಗಲೇ ಇಲ್ಲ.
ಅವರಿವರ ದೊಡ್ಡವರು ಮಾತುಗಳು
ಅವಳ ಒಲೆಯ ಗೂಡು ಕಣ್ಣುಗಳು
ಯಾವಾಗಲೂ ಊದಿಕೊಂಡಂತೆ
ಉಸಿರುಗಳು ಗಾಳಿಯಲಿ ತೇಲಿ
ಅವಳು ಮತ್ತೆ ಒಲೆ ಊದುತ್ತಿದ್ದಾಳೆ.

ಸತ್ತ ಕ್ಷಣಗಳು ಮತ್ತೆ ಪುಟ ವಿರಿಸಿ
ಒಲೆ ಹೊತ್ತಿಸುವ ಕಾಯಕ ಅವಳಿಗಲ್ಲದೇ
ಇನ್ನಾರಿಗೆ ಗೊತ್ತು | ಸಂತೆಯಲಿ
ಎಲ್ಲಾ ವಸ್ತುಗಳ ಮಾರಾಟ, ಅವಳ ಕನಸು
ಬಿಕರಿಗೆ, ರಾತ್ರಿಯ ಪಹರಿಗೆ ಯಾವ ಮಜಲು?
ನಡೇದೇ ನಡೆದಳು ಕಾಲಸಪ್ಪಳ ಯಾರಿಗೂ ಕೇಳಲಿಲ್ಲ.

ಅತ್ತ ಕಂದಮ್ಮಗಳ ತಲೆತೊಡೆಗೇರಿಸಿಕೊಂಡು,
ಬಡಿಯುತ್ತಿದ್ದಾಳೆ ಭೂಮಿಯ ಗುಂಡಗಿನ ರೊಟ್ಟಿ
ಒಲೆಯೊಂದು ಮಾತ್ರ ಅವಳ ಬೆಚ್ಚಗಿರಿಸಿದೆ
ಕಿಚ್ಚು ಅರಳಿಸಿ ಬೇಯಿಸುತ್ತಾಳೆ ಬಿಳಿ
ಘಮ ಘಮಿಸುವ ಅನ್ನ ಎಲ್ಲಾ
ಪಾಡುಗಳು ಅವಳು ಕಟ್ಟುವ ಬುತ್ತೀಗಂಟು.

ಊದಿದ ಒಲೆಯ ಬೆಂಕಿ ಅಮ್ಮ
ಅವಳುಸಿರು ಒಲೆಯ ಬೆಂಕಿ
ಅವರ ಹೆಗಲಮೇಲೆ ಎಲ್ಲರ ಜಾಗ
ಎಲ್ಲವೂ ಮೇಳೈಸಿದ ಹಿತದ ರಾಗ
ಅಮ್ಮ ಬೆಂಕಿ ಶ್ರೇಷ್ಠ ದೈನಂದಿಕ ಚಟುವಟಿಕೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...