Home / ಕವನ / ಕವಿತೆ / ಮಾಂತ್ರಿಕ

ಮಾಂತ್ರಿಕ

ಬಯಲಲಿ ಮಕ್ಕಳು ಹಾರಿಸಿದ
ಗಾಳಿಪಟ ಮನೆಯ ಒಳಗೆ
ಬಿದಿರು ಗೋಂದು ಬಣ್ಣದ ಹಾಳೆ ತುಂಡು.
ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ
ಗಂಗೆ ಹರಿದಳು ಎದೆಯ ಬಯಲಲಿ.

ದಿಕ್ಕು ದಿಕ್ಕಿನ ಚಲನೆ ಬದಲಿಸಿ
ಮದು ಹದಗೊಂಡ ಮನಸ್ಸು ಬಯಲು
ಆಲಯದೊಳಗಿರಿಸಿ ಎಲ್ಲಿರುವೆ ನೀನು
ಇಲ್ಲಿ ಇರಿಸಿ ಗೋಡೆಗಳು ತೂಗಿ ಹಾಕಿದ
ಭಾವಚಿತ್ರಗಳ ನೆನಪು ಕನ್ನಡಿಯಲಿ ಪ್ರತಿಬಿಂಬ.

ಪರಿಮಳ ಹೂಸೂಸಿ ಗಾಳಿಗಂಧ
ತೇಲಿದ ಸಂಜೆ ನೆರಳು ಬೆಳಕಿನಾಟಕೆ
ಕರಗಿ ನೀರಾಗಿ ಹನಿಹನಿ ಕವಿತೆಯ ಸಾಲುಗಳು
ಭಾವ ತರಂಗದಲಿ ಹಾರುತ ಬಂದ ಚಿಟ್ಟೆಗಳು
ಹೂಗಳ ಆಯ್ದು ತಂದ ಪುಟ್ಟ ಕೈಗಳು.

ಮೊದಲು ಕಣ್ಣಿಗೆ ಕಾಡಿಗೆ ತೀಡಿದ ದೇವರ
ಮನೆದೀಪ ಬೆಳಗಿದ ಬೆಳಕು ಎಲ್ಲೆಡೆ,
ಪ್ರತಿಫಲಿಸಿ ತೂಗುವ ತೊಟ್ಟಿಲಲಿ ಮೇರುಗೀತೆ,
ಮಮತೆಯಿಂದ ರಕ್ಷಿಸಿದ ತಾಯಿ ಬೇರು
ಚಿಗುರು ಚಿಮ್ಮಿ ಸೂಸಿ ಅರಳಿದ ಮಲ್ಲಿಗೆ ಘಮಘಮ.

ಭಾವರಂಗಿನ ಪದಗಳಿಗೆ ಗಾಳಿ ಬೆಳಕು
ಮಿಂಚು ಹರಸಿ ಹಾಯ್ದ ಫಲಕುಗಳು
ಎದೆ ತೆರೆದ ಹಾಡಾಗಿ ಹೂ ಚಿಟ್ಟೆ ನಕ್ಷತ್ರಗಳರಳಿ
ಕವಿತೆ ತಂದ ಮಂತ್ರದಂಡ ಇದ್ದ ಎಲ್ಲಾ
ವಿಸ್ಮಯಗಳ ಇಂದ್ಹಾಂಗ ಅನಿಸಿ ಚೈತನ್ಯ ತಂದ ಮಾಂತ್ರಿಕ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...