Home / ಕವನ / ಕವಿತೆ / ಮಧುಚಂದ್ರ

ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ
ಬೆಳಗಽನ್ನು ಸುಯ್ದಾ,
ಬೆಳ್ಳಿಯ ಬೆಳಗನ್ನು ಸುಯ್ದಾ,
ಬಾನಲಿ ಮೊಳೆದು ಮೆಲ್ಲಗೆ ಬೆಳೆದು
ಇಳೆಯಲ್ಲಾ ಕಾಣ್ದಾಽ
ಪೂರ್ಣಿ ಇಳೆಯಲ್ಲಾ ಕಾಣ್ದಾ

ಅಮೃತದ ರಸದಾ ಚಿಲುಮೆಯಿಂದಽ
ಭರಭರನೇ ಸುರಿದು
ತಾನೇ ಭರ ಭರನೇ ಸುರಿದು
ಧಗ ಧಗಿಸಿರುವ ಧರಿಣಿಗೆ ತಂಪ
ಸರ ಸರನೇ ತರುವಽ
ತಾನೇ ಸರ ಸರನೇ ತರುವಾಽ

ಗಿರಿಗಳ ಮೇಲೆ ಕಾನನದೊಳಗೆ
ಶೃಂಗಾರದ ಹಾಸು,
ಕಂಡಿತು ಶೃಂಗಾರದ ಹಾಸು,
ಹಾಸಿರುವವರಾರು ಬಾನೆತ್ತರದಿಂ
ದಿಲ್ಲಿಗೇ ತಂದುಽ
ಈಗ ಇಲ್ಲಿಗೇ ತಂಧೂಽ

ಕಾಮನೆ ಬಯಕೆಯ ಮನದಲಿ ತರುವ
ವಿರಹದ ಬೇಗೆಯನುಽ
ತನುವಲಿ ವಿರಹದ ಬೇಗೆಯನು
ಪ್ರಣಯಿಗಳಿಗೆ ಉನ್ಮಾದವ ತರುವ
ತಂಬೆಳಕಿನ ಮಾಲೆ
ಮಿಲನದ ತಂಬೆಳಕಿನ ಮಾಲೆ

ಕಾಡಿನ ಮಧ್ಯದ ಸೆರಗೊಳಗಿಂದ
ಖಗ ಮಿಗದಽ ನಲಿವುಽ
ಕೇಳಿತು ಖಗಮೃಗದಾ ನಲಿವು
ಜೀವ ಸಂಕುಲಗಳ ಚಂದದ ಉಲಿವು
ಮಧು ಚಂದ್ರದ ಹಾಡು
ಹಾಡಿತು ಮಧು ಚಂದ್ರದ ಹಾಡು |

ಕಲೆತವು ತನುವುಽ ಬೆರೆತವು ಮನವುಽ
ಮರೆಸೀತುಽ ಇರವುಽ
ಸುಖದಲಿಽ ಮರೆಸೀತು ಇರವು
ಚಂದನ ಪರಿಮಳ ಹರಡುತ ಬಂತು
ತಂಗಾಳಿಯುಽ ಜೊತೆಗೆ
ಹರ್ಷದ ತಂಗಾಳಿಯು ಜೊತೆಗೆ |

ನಾಚಿದ ನಾಚಿಕೆ ದೂರ ಸರಿಯಿತು
ರತಿ ಮನ್ಮಥರಽಮಿಲನ
ಶೃಂಗಾರದ ಶಿವ-ಶಿವೆಯರಽ ಮಿಲನ
ಪ್ರೇಮ ಜಲಧಿಯ ತೆರೆಯಬ್ಬರದಿ
ಗೇಹ-ದೇಹದ ಸಮ್ಮಿಲನ
ಮರು ಹುಟ್ಟಿನ ಜೋಗುಳ ತೋಂ… ತನನನ… |
(ವರಕವಿ ಬೇಂದ್ರೆಯವರ ಮೂಡಲ ಮನೆಯಾಽ…. ಕವಿತೆಗೆ ಗೌರವದಿಂದ)
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...