ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ
ಬೆಳಗಽನ್ನು ಸುಯ್ದಾ,
ಬೆಳ್ಳಿಯ ಬೆಳಗನ್ನು ಸುಯ್ದಾ,
ಬಾನಲಿ ಮೊಳೆದು ಮೆಲ್ಲಗೆ ಬೆಳೆದು
ಇಳೆಯಲ್ಲಾ ಕಾಣ್ದಾಽ
ಪೂರ್ಣಿ ಇಳೆಯಲ್ಲಾ ಕಾಣ್ದಾ

ಅಮೃತದ ರಸದಾ ಚಿಲುಮೆಯಿಂದಽ
ಭರಭರನೇ ಸುರಿದು
ತಾನೇ ಭರ ಭರನೇ ಸುರಿದು
ಧಗ ಧಗಿಸಿರುವ ಧರಿಣಿಗೆ ತಂಪ
ಸರ ಸರನೇ ತರುವಽ
ತಾನೇ ಸರ ಸರನೇ ತರುವಾಽ

ಗಿರಿಗಳ ಮೇಲೆ ಕಾನನದೊಳಗೆ
ಶೃಂಗಾರದ ಹಾಸು,
ಕಂಡಿತು ಶೃಂಗಾರದ ಹಾಸು,
ಹಾಸಿರುವವರಾರು ಬಾನೆತ್ತರದಿಂ
ದಿಲ್ಲಿಗೇ ತಂದುಽ
ಈಗ ಇಲ್ಲಿಗೇ ತಂಧೂಽ

ಕಾಮನೆ ಬಯಕೆಯ ಮನದಲಿ ತರುವ
ವಿರಹದ ಬೇಗೆಯನುಽ
ತನುವಲಿ ವಿರಹದ ಬೇಗೆಯನು
ಪ್ರಣಯಿಗಳಿಗೆ ಉನ್ಮಾದವ ತರುವ
ತಂಬೆಳಕಿನ ಮಾಲೆ
ಮಿಲನದ ತಂಬೆಳಕಿನ ಮಾಲೆ

ಕಾಡಿನ ಮಧ್ಯದ ಸೆರಗೊಳಗಿಂದ
ಖಗ ಮಿಗದಽ ನಲಿವುಽ
ಕೇಳಿತು ಖಗಮೃಗದಾ ನಲಿವು
ಜೀವ ಸಂಕುಲಗಳ ಚಂದದ ಉಲಿವು
ಮಧು ಚಂದ್ರದ ಹಾಡು
ಹಾಡಿತು ಮಧು ಚಂದ್ರದ ಹಾಡು |

ಕಲೆತವು ತನುವುಽ ಬೆರೆತವು ಮನವುಽ
ಮರೆಸೀತುಽ ಇರವುಽ
ಸುಖದಲಿಽ ಮರೆಸೀತು ಇರವು
ಚಂದನ ಪರಿಮಳ ಹರಡುತ ಬಂತು
ತಂಗಾಳಿಯುಽ ಜೊತೆಗೆ
ಹರ್ಷದ ತಂಗಾಳಿಯು ಜೊತೆಗೆ |

ನಾಚಿದ ನಾಚಿಕೆ ದೂರ ಸರಿಯಿತು
ರತಿ ಮನ್ಮಥರಽಮಿಲನ
ಶೃಂಗಾರದ ಶಿವ-ಶಿವೆಯರಽ ಮಿಲನ
ಪ್ರೇಮ ಜಲಧಿಯ ತೆರೆಯಬ್ಬರದಿ
ಗೇಹ-ದೇಹದ ಸಮ್ಮಿಲನ
ಮರು ಹುಟ್ಟಿನ ಜೋಗುಳ ತೋಂ… ತನನನ… |
(ವರಕವಿ ಬೇಂದ್ರೆಯವರ ಮೂಡಲ ಮನೆಯಾಽ…. ಕವಿತೆಗೆ ಗೌರವದಿಂದ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಂತ್ರಿಕ
Next post ಫ್ಹರ್ ಕೋಟು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys