Home / ಕವನ / ಕವಿತೆ / ಮಧುಚಂದ್ರ

ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ
ಬೆಳಗಽನ್ನು ಸುಯ್ದಾ,
ಬೆಳ್ಳಿಯ ಬೆಳಗನ್ನು ಸುಯ್ದಾ,
ಬಾನಲಿ ಮೊಳೆದು ಮೆಲ್ಲಗೆ ಬೆಳೆದು
ಇಳೆಯಲ್ಲಾ ಕಾಣ್ದಾಽ
ಪೂರ್ಣಿ ಇಳೆಯಲ್ಲಾ ಕಾಣ್ದಾ

ಅಮೃತದ ರಸದಾ ಚಿಲುಮೆಯಿಂದಽ
ಭರಭರನೇ ಸುರಿದು
ತಾನೇ ಭರ ಭರನೇ ಸುರಿದು
ಧಗ ಧಗಿಸಿರುವ ಧರಿಣಿಗೆ ತಂಪ
ಸರ ಸರನೇ ತರುವಽ
ತಾನೇ ಸರ ಸರನೇ ತರುವಾಽ

ಗಿರಿಗಳ ಮೇಲೆ ಕಾನನದೊಳಗೆ
ಶೃಂಗಾರದ ಹಾಸು,
ಕಂಡಿತು ಶೃಂಗಾರದ ಹಾಸು,
ಹಾಸಿರುವವರಾರು ಬಾನೆತ್ತರದಿಂ
ದಿಲ್ಲಿಗೇ ತಂದುಽ
ಈಗ ಇಲ್ಲಿಗೇ ತಂಧೂಽ

ಕಾಮನೆ ಬಯಕೆಯ ಮನದಲಿ ತರುವ
ವಿರಹದ ಬೇಗೆಯನುಽ
ತನುವಲಿ ವಿರಹದ ಬೇಗೆಯನು
ಪ್ರಣಯಿಗಳಿಗೆ ಉನ್ಮಾದವ ತರುವ
ತಂಬೆಳಕಿನ ಮಾಲೆ
ಮಿಲನದ ತಂಬೆಳಕಿನ ಮಾಲೆ

ಕಾಡಿನ ಮಧ್ಯದ ಸೆರಗೊಳಗಿಂದ
ಖಗ ಮಿಗದಽ ನಲಿವುಽ
ಕೇಳಿತು ಖಗಮೃಗದಾ ನಲಿವು
ಜೀವ ಸಂಕುಲಗಳ ಚಂದದ ಉಲಿವು
ಮಧು ಚಂದ್ರದ ಹಾಡು
ಹಾಡಿತು ಮಧು ಚಂದ್ರದ ಹಾಡು |

ಕಲೆತವು ತನುವುಽ ಬೆರೆತವು ಮನವುಽ
ಮರೆಸೀತುಽ ಇರವುಽ
ಸುಖದಲಿಽ ಮರೆಸೀತು ಇರವು
ಚಂದನ ಪರಿಮಳ ಹರಡುತ ಬಂತು
ತಂಗಾಳಿಯುಽ ಜೊತೆಗೆ
ಹರ್ಷದ ತಂಗಾಳಿಯು ಜೊತೆಗೆ |

ನಾಚಿದ ನಾಚಿಕೆ ದೂರ ಸರಿಯಿತು
ರತಿ ಮನ್ಮಥರಽಮಿಲನ
ಶೃಂಗಾರದ ಶಿವ-ಶಿವೆಯರಽ ಮಿಲನ
ಪ್ರೇಮ ಜಲಧಿಯ ತೆರೆಯಬ್ಬರದಿ
ಗೇಹ-ದೇಹದ ಸಮ್ಮಿಲನ
ಮರು ಹುಟ್ಟಿನ ಜೋಗುಳ ತೋಂ… ತನನನ… |
(ವರಕವಿ ಬೇಂದ್ರೆಯವರ ಮೂಡಲ ಮನೆಯಾಽ…. ಕವಿತೆಗೆ ಗೌರವದಿಂದ)
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ