Home / ಕವನ / ಕವಿತೆ / ರಾವುಗನ್ನಡಿ

ರಾವುಗನ್ನಡಿ

ಆಕಾಶದ ರಾವುಗನ್ನಡಿಯೊಳಗೆ
ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ
ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ
ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ
ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ
ಹೊಸ್ತಿಲಿಗೆ ನೀರು ಹಾಕಿ
ನಮಸ್ಕರಿಸುವಾಗ
ಬಾಳೆ ತೆಂಗುಗಳ ಗರಿಗಳೊಳಗೆ
ಸೂರ್ಯ ಬಂದು
ಮುದ್ದಿಸಿ ಬಿಸಿ ಮಾಡುತ್ತಾನೆ.
ಬೆಳಗಿನ ಕೆಲಸ ಗಜಿಬಿಜಿಯೊಳಗೊಂದಾದಾಗ
ಆಗೀಗ ಸಿಟ್ಟು ಪಿತ್ತೇರಿದಾಗ
ರವಿ ನೆತ್ತಿಗೇರುತ್ತಾನೆ
ಮಧ್ಯಾನ್ಹದ ತೂಕಡಿಕೆಯಲ್ಲಿ
ಮೋಡಾಗಿ ರಾವು ಗನ್ನಡಿಗೆ ರಾಚುತ್ತೇನೆ
ಅಲ್ಲಿ ಚಕೋರೆಯಾಗಿ
ಮೋಡಿನ ವಿವಿಧ ರೂಪದೊಳಗೆ
ಹಳ್ಳ ಹೊಳೆಯಾಗಿ
ಜಾಜಿ ಗುಲಾಬಿಯಾಗಿ
ಬೆಟ್ಟ ಕಂದರವಾಗಿ ಆನೆ ಐರಾವತವಾಗಿ
ಬಂಗಾರದುಂಡೆಯಾಗಿ ಬೆಳ್ಳಿ ಚೌಕಟ್ಟಾಗಿ
ಚಿತ್ರಕಾರರ ಮನಸೂರೆಗೊಳ್ಳುವ ಸುಂದರಿಯಾಗಿ
ವಿಜ್ಞಾನಿಗಳ ಅಭೇದ್ಯ ಕೋಟೆ
ಸೀಳುವ ಶೂನ್ಯವಾಗಿ
ಪ್ರೇಮಿಗಳಿಗೆ ಪ್ರೇಯಸಿಯೋ
ಪ್ರಿಯಕರನೋ ಆಗಿ ನಾನು
ಸುಸ್ತು ಹೊಡೆದಾಗ –
ಜಡ ಕಳೆದುಕೊಳ್ಳಲು ಮೈ ಜಾಲಾಡಿಸುತ್ತೇನೆ
ಮೋಡ ಸರಸಿ ಮಳೆಯಾಗುತ್ತೇನೆ
ಚಿಲಿ ಪಿಲಿ ಪಕ್ಷಿಗಳ
ಮಕ್ಕಳ ಮನ ಗೆದ್ದುಕೊಳ್ಳಲು
ಮುಸ್ಸಂಜೆ ನೆನಪಿಸಿ
ದಾರಿ ತೋರುತ್ತೇನೆ
ಕತ್ತಲು ಸೇರಲು
ಚಂದ್ರನನ್ನು ಕರೆಯುತ್ತೇನೆ
ಚುಕ್ಕೆಯಾಗಿ ನಿನ್ನ ಸೇರುತ್ತೇನೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...