Home / ಕವನ / ಕವಿತೆ / ರಾವುಗನ್ನಡಿ

ರಾವುಗನ್ನಡಿ

ಆಕಾಶದ ರಾವುಗನ್ನಡಿಯೊಳಗೆ
ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ
ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ
ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ
ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ
ಹೊಸ್ತಿಲಿಗೆ ನೀರು ಹಾಕಿ
ನಮಸ್ಕರಿಸುವಾಗ
ಬಾಳೆ ತೆಂಗುಗಳ ಗರಿಗಳೊಳಗೆ
ಸೂರ್ಯ ಬಂದು
ಮುದ್ದಿಸಿ ಬಿಸಿ ಮಾಡುತ್ತಾನೆ.
ಬೆಳಗಿನ ಕೆಲಸ ಗಜಿಬಿಜಿಯೊಳಗೊಂದಾದಾಗ
ಆಗೀಗ ಸಿಟ್ಟು ಪಿತ್ತೇರಿದಾಗ
ರವಿ ನೆತ್ತಿಗೇರುತ್ತಾನೆ
ಮಧ್ಯಾನ್ಹದ ತೂಕಡಿಕೆಯಲ್ಲಿ
ಮೋಡಾಗಿ ರಾವು ಗನ್ನಡಿಗೆ ರಾಚುತ್ತೇನೆ
ಅಲ್ಲಿ ಚಕೋರೆಯಾಗಿ
ಮೋಡಿನ ವಿವಿಧ ರೂಪದೊಳಗೆ
ಹಳ್ಳ ಹೊಳೆಯಾಗಿ
ಜಾಜಿ ಗುಲಾಬಿಯಾಗಿ
ಬೆಟ್ಟ ಕಂದರವಾಗಿ ಆನೆ ಐರಾವತವಾಗಿ
ಬಂಗಾರದುಂಡೆಯಾಗಿ ಬೆಳ್ಳಿ ಚೌಕಟ್ಟಾಗಿ
ಚಿತ್ರಕಾರರ ಮನಸೂರೆಗೊಳ್ಳುವ ಸುಂದರಿಯಾಗಿ
ವಿಜ್ಞಾನಿಗಳ ಅಭೇದ್ಯ ಕೋಟೆ
ಸೀಳುವ ಶೂನ್ಯವಾಗಿ
ಪ್ರೇಮಿಗಳಿಗೆ ಪ್ರೇಯಸಿಯೋ
ಪ್ರಿಯಕರನೋ ಆಗಿ ನಾನು
ಸುಸ್ತು ಹೊಡೆದಾಗ –
ಜಡ ಕಳೆದುಕೊಳ್ಳಲು ಮೈ ಜಾಲಾಡಿಸುತ್ತೇನೆ
ಮೋಡ ಸರಸಿ ಮಳೆಯಾಗುತ್ತೇನೆ
ಚಿಲಿ ಪಿಲಿ ಪಕ್ಷಿಗಳ
ಮಕ್ಕಳ ಮನ ಗೆದ್ದುಕೊಳ್ಳಲು
ಮುಸ್ಸಂಜೆ ನೆನಪಿಸಿ
ದಾರಿ ತೋರುತ್ತೇನೆ
ಕತ್ತಲು ಸೇರಲು
ಚಂದ್ರನನ್ನು ಕರೆಯುತ್ತೇನೆ
ಚುಕ್ಕೆಯಾಗಿ ನಿನ್ನ ಸೇರುತ್ತೇನೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...