ರಾವುಗನ್ನಡಿ

ಆಕಾಶದ ರಾವುಗನ್ನಡಿಯೊಳಗೆ
ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ
ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ
ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ
ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ
ಹೊಸ್ತಿಲಿಗೆ ನೀರು ಹಾಕಿ
ನಮಸ್ಕರಿಸುವಾಗ
ಬಾಳೆ ತೆಂಗುಗಳ ಗರಿಗಳೊಳಗೆ
ಸೂರ್ಯ ಬಂದು
ಮುದ್ದಿಸಿ ಬಿಸಿ ಮಾಡುತ್ತಾನೆ.
ಬೆಳಗಿನ ಕೆಲಸ ಗಜಿಬಿಜಿಯೊಳಗೊಂದಾದಾಗ
ಆಗೀಗ ಸಿಟ್ಟು ಪಿತ್ತೇರಿದಾಗ
ರವಿ ನೆತ್ತಿಗೇರುತ್ತಾನೆ
ಮಧ್ಯಾನ್ಹದ ತೂಕಡಿಕೆಯಲ್ಲಿ
ಮೋಡಾಗಿ ರಾವು ಗನ್ನಡಿಗೆ ರಾಚುತ್ತೇನೆ
ಅಲ್ಲಿ ಚಕೋರೆಯಾಗಿ
ಮೋಡಿನ ವಿವಿಧ ರೂಪದೊಳಗೆ
ಹಳ್ಳ ಹೊಳೆಯಾಗಿ
ಜಾಜಿ ಗುಲಾಬಿಯಾಗಿ
ಬೆಟ್ಟ ಕಂದರವಾಗಿ ಆನೆ ಐರಾವತವಾಗಿ
ಬಂಗಾರದುಂಡೆಯಾಗಿ ಬೆಳ್ಳಿ ಚೌಕಟ್ಟಾಗಿ
ಚಿತ್ರಕಾರರ ಮನಸೂರೆಗೊಳ್ಳುವ ಸುಂದರಿಯಾಗಿ
ವಿಜ್ಞಾನಿಗಳ ಅಭೇದ್ಯ ಕೋಟೆ
ಸೀಳುವ ಶೂನ್ಯವಾಗಿ
ಪ್ರೇಮಿಗಳಿಗೆ ಪ್ರೇಯಸಿಯೋ
ಪ್ರಿಯಕರನೋ ಆಗಿ ನಾನು
ಸುಸ್ತು ಹೊಡೆದಾಗ –
ಜಡ ಕಳೆದುಕೊಳ್ಳಲು ಮೈ ಜಾಲಾಡಿಸುತ್ತೇನೆ
ಮೋಡ ಸರಸಿ ಮಳೆಯಾಗುತ್ತೇನೆ
ಚಿಲಿ ಪಿಲಿ ಪಕ್ಷಿಗಳ
ಮಕ್ಕಳ ಮನ ಗೆದ್ದುಕೊಳ್ಳಲು
ಮುಸ್ಸಂಜೆ ನೆನಪಿಸಿ
ದಾರಿ ತೋರುತ್ತೇನೆ
ಕತ್ತಲು ಸೇರಲು
ಚಂದ್ರನನ್ನು ಕರೆಯುತ್ತೇನೆ
ಚುಕ್ಕೆಯಾಗಿ ನಿನ್ನ ಸೇರುತ್ತೇನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಲಂಕಾರ
Next post ಲಿಂಗಮ್ಮನ ವಚನಗಳು – ೧೯

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…