ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ
ಹುಚಮುಂಡಿ ಮೆಣಸಿಂಡಿ ಚಟ್ನಿಯಾದೆ
ಈ ಬಂಡಾ ಆ ಮಂಡಾ ಜೋಡು ಕೋಣರ ಕೂಡಿ
ನೆಗ್ಗೀದ ತಾಬಂಡಿ ತೂತು ಆದೆ

ಸೀರಿಯೊಬ್ಬನು ಸೆಳೆದ ಚರ್ಮವೊಬ್ಬನು ಹರಿದ
ಲಟಪಟ ಯಲುಬೆಲ್ಲ ಲಡ್ಡು ಆತ
ಗಟ್ಟಿಮುಟ್ಟಿನ ಹೇಂತಿ ಚಿಪ್ಪಾದೆ ಚಿಬ್ಲಾದೆ
ಡಾಳಿಂಬ್ರ ರಸಬಣ್ಣ ಇದ್ಲಿಯಾತ

ಕೆಂಗೋದಿ ಹೋಳೀಗಿ ಗುಂಡಾನ ನನಗಲ್ಲ
ಹಳಸೀದ ತಂಬೂಳಿ ಸಾರು ಆತ
ಪೆಂಡಿಪಿಂಡಿಯ ತುರುಬ ಕಸಬರಗಿ ಸಿಂಬ್ಯಾತ
ಕೈಕಾಲು ಬಡದಂಟು ಸೀಬು ಆತ

ಕರಿಗಡಬು ಬೆಡಗೀನ ನನಕಯ್ಯಿ ನನಮಯ್ಯಿ
ಗುಳಿಬಿದ್ದ ಗಾರೀಗಿ ತೂತು ಆತ
ಕರದಂಟು ನನಗದ್ದ ಹೆಗ್ಗಣದ ಗುದ್ದಾತ
ಕಲಸಕ್ರಿ ನನಮೂಗು ಸಿಂಬ್ಳಸೋರ್ತ

ಒಬ್ಬ ಗಂಡನು ಹುಂಬಾ ಇನ್ನೊಬ್ಬ ಮಾಶುಂಬಾ
ಒಳಗೊಬ್ಬ ಹೊರಗೊಬ್ಬ ಜಗ್ಗತಾರ
ಶಿವಯೋಗಿ ಆ ಗಂಡ ಪೂಜೇರಿ ಈ ಗಂಡ
ಒಳಕಲ್ಲು ಗುಣಕಲ್ಲು ಮಾಡತಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚದುರಂಗ ಪ್ರವೀಣೆ ರಂಗಿ
Next post ಪತ್ರ ಪ್ರೇಮ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…