Home / ಕವನ / ಕವಿತೆ / ನಿಶ್ಶಬ್ಧ ಮೌನ

ನಿಶ್ಶಬ್ಧ ಮೌನ

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ
ಕಿಟಕಿಯಾಚೆ ನೋಡಲೇನಿದ್ದಿತು!
ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ
ಸಮುದ್ರದ ಹಡಗಿನ ದೀಪಗಳು,
ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು
ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!
ನಿದ್ದೆ ಸಮಯ ಬೇರೆ ಗಡದ್ದಾದ ನಿದ್ದೆ-
ನಿದ್ದೆ ನಿದ್ದೆ ನಿದ್ದೆ

ಕೈ ಕುಲುಕಿ ಭುಜ ಅಲುಗಾಡಿಸಿ ಏನೋ ಕೇಳಿದಂತೆ….
ಎಚ್ಚರ, ಕಣ್ಮುಚ್ಚಿ ಕಣ್ಣು ಬಿಟ್ಟರೆ
ಮಬ್ಬು ಬೆಳಕಿನಲ್ಲಿ ನಿಶ್ಶಬ್ದ ಮೌನ
ಹೊದಿಕೆಯೊಳಗೆ ಪಯಣಿಗರ ನಿದ್ರೆ
ಬೆನ್ನು ತಿರುಗಿಸಿ ಕಪ್ಪು ಕೋಟಿನ ಆಕೆ ಸರಕ್ಕನೆ ಸರಿದಳು.
ಗಗನಸಖಿ ಅಲ್ಲದೆ ಮತ್ಯಾರಿದ್ದಾರು!

ಹಿಂದೊರಗಿ ಕಣ್ಣು ಮುಚ್ಚಲು ಪ್ರಯತ್ನಿಸಿದೆ
ಕಾಲಿಗೆ ಜಡ ವಸ್ತು ತಗುಲಿ ಮತ್ತೆ ಎಚ್ಚರ
ಹ್ಯಾಂಡ್ ಬ್ಯಾಗ್ ಅಲ್ಲದೇ ಮತ್ತಿನ್ನೇನು?
ಸಮಾಧಾನಿಸಿಕೊಳ್ಳುವಿಕೆ-

ವಿಮಾನ ಕೆಳಮನೆಯ ಸ್ಟೋರೇಜ್
ಕಾರ್ಗೋ ಕಂಟೈನರ್‌ಗಳ ಬಿಡಿಬಿಡಿಯಾದ ದೃಶ್ಯ.
ನೂರಾರು ಸೂಟ್‌ಕೇಸ ಬ್ಯಾಗುಗಳ ಗುಡ್ಡೆ
ಇರಲಿ ಅದಕ್ಕೇನಂತೆ!
ಅದರೊಳಗಡೆ ಅದೆಷ್ಟೋ ಪ್ರೀತಿ ಪ್ರೇಮದ ಪತ್ರಗಳು

ರಾಜಕೀಯ ವ್ಯವಹಾರಗಳ ಕಾಗದಗಳು
ಡಾಲರ್‍ಸ್, ಚೆಕ್, ಡ್ರಾಫ್ಟ್‌ಗಳ ರಾಶಿ
ಚಿನ್ನ ಬೆಳ್ಳಿ ಗಾಂಜಾ ಅಫೀಮುಗಳ ಬಚ್ಚಿಟ್ಟ ಸ್ಥಳ.
ಅದೇ ಅದೇ ಜಾಗತೀಕರಣದ ಪೇಟೆ ಪೇಟೆ….
ಇರಲಿ ಅದಕ್ಕೇನಂತೆ!

ಈ ಕಡೆಗೆ ಶೀತಾಗಾರ ಒಂದರ ಮೇಲೊಂದು ಶೆಲ್ಫ್‌ಗಳು
ಅದರೊಳಗೆ ಹೆಣಗಳ ಪೆಟ್ಟಿಗೆಗಳು
ವಿದೇಶಗಳೊಳಗೆ ಹೆಣವಾದವರು
ಮರಳಿ ಮಣ್ಣಿಗೆ ಮಣ್ಣಾಗಲು ಬರುತ್ತಿದ್ದಾರೆ.
ದಡಕ್ಕನೇ ಎದೆಬಡಿತ ಜೋರಾದದ್ದು.
ನನ್ನ ಕಾಲ ಕೆಳಗಿನ ಮನೆಯಲ್ಲೇ
ಅನಾಥ ಹೆಣಗಳಿದ್ದು ಕೂತಿರಬಹುದೆ
ಹೊರಟಾಗ ಇದೇ ಸೀಟಿನಲ್ಲಿ ಕುಳಿತು
ಈಗ ಇದೇ ಸೀಟಿನ ಕೆಳಗೆ ಏಕಾಂಗಿಯಾಗಿ
ರೋಧಿಸುತ್ತಿರಬಹುದೆ!

ಕೆಳಗೆ ನಿರ್ಜೀವಿಗಳ ಸ್ಮಶಾನ
ಮೇಲೆ ರಾಜನರಮನೆ ಟಚ್
ಕ್ಷಣಾರ್ಧದಲ್ಲಿ ಎದೆಯೊಡೆದು ಭೀತಿ ಮೂಡಿ
ಮೈತುಂಬ ಸಣ್ಣಗೆ ಬೆವರು ನಡುಕ-
ಈ ವಿಮಾನದೊಳಗೆ ಇದೆಲ್ಲ ಇರದಿರಲಿ ದೇವರೆ-
ನನ್ನ ಸೀಟಿನ ಎಲ್ಲ ಲೈಟು ಬಟನ್‌ಗಳು ಶುರುಮಾಡಿ ಕಣ್ಮುಚ್ಚಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...