Home / ಕವನ / ಕವಿತೆ / ಬೇಕಾಗಿತ್ತೆ ಈ ದೂರದ ಹಾದಿ

ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು
ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ
ಎಲ್ಲೋ ಬುಲ್‌ಡೋಜರ್‌ದ ಸದ್ದು
ಜಾಲಾಡಿಸಿದ ಅನುಭವ
ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು
ಗಗನಸಖಿಯ ಒಂದೇ ಸಮನದ ಉಲಿತ
“ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ”

ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ
ಸಾವಿನಂಚಿಗೆ ಕರೆಯುವ ಎದೆ ಬಡಿತ
ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ
ಘರ್ಜನೆ ದಟೈಸಿದ ಕಪ್ಪು ಛಾಯೆ
ಉಸಿರುಗಟ್ಟಿ ಕಿತ್ತೋಡುವ
ನೊರೆನೊರೆಯ ಬಿಳಿಮೋಡ ಮೊಲಗಳು
ಬಿಟ್ಟೂಬಿಡದೆ ಎಗ್ಗರಿಸಿ
ಹೆದರಿಸುವ ಡೈನಾಸೋರುಗಳು

ಸಾವಿರಾರು ಮೈಲು ಹಿಂದೆ ಬಿಟ್ಟು ಬಂದ
ಮಕ್ಕಳ ಮುಗ್ಧ ಮುಖ; ಮುಂದೆ
ಸಾವಿರಾರು ಮೈಲಿನಲಿ ಕಾತರಿಸಿ ಕಾಯುತಿರುವ
ಜೀವದ ಜೀವ
ಒಬ್ಬೊಂಟಿ ಪಯಣಿಗಳು ಕಣ್ತುಂಬ ನೀರು.

ಮತ್ತೆ ಮತ್ತೆ ಅದೇ ಉಲಿತ
(ಏಳದಿರಿ ಸೀಟುಬಿಟ್ಟು, ನಡೆದಾಡದಿರಿ,
ಹೊರಗಡೆ ಭಾರಿ ಮೋಡಗಳು, ಗುಡುಗುಮಿಂಚು
ಬಿಗಿಯಾಗಿರಲಿ ಸೊಂಟಪಟ್ಟಿ ಎದೆಗುಂದದಿರಿ)

ಅಜ್ಜಿಯ ಪ್ರೀತಿ ಅಮ್ಮ ಅಪ್ಪನ ಬಾಳದೋಣಿ
ಸಾಧನೆಯ ಕನಸಿಗೆ ಕಾಲುಹಾದಿಯಲಿ
ಓಡಾಡಿ ದಕ್ಕಿಸಿಕೊಂಡ ಹೆಮ್ಮೆ
ಈತ ಒಮ್ಮೊಮ್ಮೆ ಸೂರ್ಯ ಚಂದ್ರ
ಎಲ್ಲರ ಮುಖಗಳು ಕಣ್ಣಿಗೆ ಕಟ್ಟುತ್ತವೆ
ದುಗುಡಿನ ಸವಾರಿಗರು
ಕಾಣದ ದೇವರಿಗೆ ಹರಕೆ ಹೊರುವ ಸಮಯ

ಬೇಕಾಗಿತ್ತೆ ಈ ದೂರದ ಹಾದಿ,
ಹಣದ ಬೆನ್ನೇರಿಕೆಗೇನಾದರು ಒಳಸಂಚೆ…..
ಕನವರಿಕೆ ಕಳವಳ ತಳಮಳ
ಬಿಕ್ಕಳಿಕೆ ಅಸಹಾಯಕತೆ
ಕಿಡಕಿಯಾಚೆ ಆನೆಗಳ ಗುದ್ದಾಟ
ಸೀಳಿ ಹೊರಟಿರುವ ಈ ಜಂಬೋಸವಾರಿ…..
ಸಾವಿಗೆ ಕ್ಷಣ ಗಣನೆ ಇದ್ದೀತೆ?
ಅಯ್ಯೋ ದೇವರೆ ಬೇಕಾಗಿತ್ತೆ…..
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...