Home / ಕವನ / ಕವಿತೆ / ಬೇಕಾಗಿತ್ತೆ ಈ ದೂರದ ಹಾದಿ

ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು
ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ
ಎಲ್ಲೋ ಬುಲ್‌ಡೋಜರ್‌ದ ಸದ್ದು
ಜಾಲಾಡಿಸಿದ ಅನುಭವ
ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು
ಗಗನಸಖಿಯ ಒಂದೇ ಸಮನದ ಉಲಿತ
“ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ”

ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ
ಸಾವಿನಂಚಿಗೆ ಕರೆಯುವ ಎದೆ ಬಡಿತ
ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ
ಘರ್ಜನೆ ದಟೈಸಿದ ಕಪ್ಪು ಛಾಯೆ
ಉಸಿರುಗಟ್ಟಿ ಕಿತ್ತೋಡುವ
ನೊರೆನೊರೆಯ ಬಿಳಿಮೋಡ ಮೊಲಗಳು
ಬಿಟ್ಟೂಬಿಡದೆ ಎಗ್ಗರಿಸಿ
ಹೆದರಿಸುವ ಡೈನಾಸೋರುಗಳು

ಸಾವಿರಾರು ಮೈಲು ಹಿಂದೆ ಬಿಟ್ಟು ಬಂದ
ಮಕ್ಕಳ ಮುಗ್ಧ ಮುಖ; ಮುಂದೆ
ಸಾವಿರಾರು ಮೈಲಿನಲಿ ಕಾತರಿಸಿ ಕಾಯುತಿರುವ
ಜೀವದ ಜೀವ
ಒಬ್ಬೊಂಟಿ ಪಯಣಿಗಳು ಕಣ್ತುಂಬ ನೀರು.

ಮತ್ತೆ ಮತ್ತೆ ಅದೇ ಉಲಿತ
(ಏಳದಿರಿ ಸೀಟುಬಿಟ್ಟು, ನಡೆದಾಡದಿರಿ,
ಹೊರಗಡೆ ಭಾರಿ ಮೋಡಗಳು, ಗುಡುಗುಮಿಂಚು
ಬಿಗಿಯಾಗಿರಲಿ ಸೊಂಟಪಟ್ಟಿ ಎದೆಗುಂದದಿರಿ)

ಅಜ್ಜಿಯ ಪ್ರೀತಿ ಅಮ್ಮ ಅಪ್ಪನ ಬಾಳದೋಣಿ
ಸಾಧನೆಯ ಕನಸಿಗೆ ಕಾಲುಹಾದಿಯಲಿ
ಓಡಾಡಿ ದಕ್ಕಿಸಿಕೊಂಡ ಹೆಮ್ಮೆ
ಈತ ಒಮ್ಮೊಮ್ಮೆ ಸೂರ್ಯ ಚಂದ್ರ
ಎಲ್ಲರ ಮುಖಗಳು ಕಣ್ಣಿಗೆ ಕಟ್ಟುತ್ತವೆ
ದುಗುಡಿನ ಸವಾರಿಗರು
ಕಾಣದ ದೇವರಿಗೆ ಹರಕೆ ಹೊರುವ ಸಮಯ

ಬೇಕಾಗಿತ್ತೆ ಈ ದೂರದ ಹಾದಿ,
ಹಣದ ಬೆನ್ನೇರಿಕೆಗೇನಾದರು ಒಳಸಂಚೆ…..
ಕನವರಿಕೆ ಕಳವಳ ತಳಮಳ
ಬಿಕ್ಕಳಿಕೆ ಅಸಹಾಯಕತೆ
ಕಿಡಕಿಯಾಚೆ ಆನೆಗಳ ಗುದ್ದಾಟ
ಸೀಳಿ ಹೊರಟಿರುವ ಈ ಜಂಬೋಸವಾರಿ…..
ಸಾವಿಗೆ ಕ್ಷಣ ಗಣನೆ ಇದ್ದೀತೆ?
ಅಯ್ಯೋ ದೇವರೆ ಬೇಕಾಗಿತ್ತೆ…..
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ