ಸ್ವಗತ ಗೀತ

ನಾನು ಗೀತೆಯ ಬರೆದು ಹಾಡಿದೆ
ಭಾವ ಭಾರದೆದೆಯ ತಣಿಸಲು
ಎಲ್ಲ ಮರೆತೊಮ್ಮನದಿ ನಲಿದು
ನಿಮ್ಮ ಪ್ರೀತಿಗೆ ನಮಿಸಲು |

ಸೋಲು-ಗೆಲುವೋ, ಗೆಲುವೊ ಸೋಲೋ
ಉಯ್ಯಾಲೆಯಲ್ಲಿ ಝೀಕುತ,
ಕವಿದಮಾವಾಸ್ಯಯ ಇರುಳಿನಲೆಯಲೂ
ಪೂರ್ಣ ಚಂದ್ರಮನೆಡೆಗೆ ನೋಡುತ
ಬದುಕೆ ಯಕ್ಷ ಪ್ರಶ್ನೆಯಾದರೂ
ರಕ್ಷೆಗಾಣಲು ಬಯಸುತ |

ಯಾವ ಸಂಚಿತ ಸಂಚಿನ ಕಾಲ್ಗಳು
ದೀಕ್ಷೆ ತೊಟ್ಟು ತುಳಿ ತುಳಿದರೂ
ಆತ್ಮ ಬಲದತಿಬಲದ ಪ್ರಭೆಯಲಿ
ಛಲದಿ ಸಾಗಿದೆ ಜೀವದುಸಿರು
ನಿತ್ಯ ಸತ್ಯದ ಹೊಳಪಿನಲ್ಲಿ
ಸೋತು ಗೆದ್ದ ಸೊಗಸನು ಸ್ಮರಿಸುತ |

ದಿಕ್ಕೂ ದಿಕ್ಕಿಗೂ ದಿಕ್ಕು ಗಾಣದೆ
ಕವಿದಂಧಕಾರದಿ ಅರಸುತ
ಸೂರ್ಯ ರಶ್ಮಿಯ ಜ್ಞಾನ ನಿಧಿಯಲಿ
ಬಾಳ ಬಂಡಿಯ ನಡೆಸುತ
ಅರಿವಿನರಿವಿನ ನೇಹದಲ್ಲಿ
ಕನಸ ಬಿತ್ತಿ ಬೆಳೆಯುತ |

ನಿಜದ ಗುರಿಯೇ ಇರದಿಹ
ಗುರುನಾಥರಿಲ್ಲಿ ಶವದಲಂಕಾರಕೆ
ಸ್ವಾರ್ಥ ನೀಚ ತಂತ್ರ ದೀಕ್ಷೆ,
ತೊಟ್ಟು ಕಟ್ಟುವ ತಂತ್ರಕೆ,
ಬಾಗದರಿವಿನ ಭಾಗ್ಯದಲ್ಲಿ
ಜೀವ ಧನ್ಯ ಧ್ವನ್ಯವ ಸ್ಮರಿಸುತ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಪರ್ಯಾಸ
Next post ಬೇಕಾಗಿತ್ತೆ ಈ ದೂರದ ಹಾದಿ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…