ಸ್ವಗತ ಗೀತ

ನಾನು ಗೀತೆಯ ಬರೆದು ಹಾಡಿದೆ
ಭಾವ ಭಾರದೆದೆಯ ತಣಿಸಲು
ಎಲ್ಲ ಮರೆತೊಮ್ಮನದಿ ನಲಿದು
ನಿಮ್ಮ ಪ್ರೀತಿಗೆ ನಮಿಸಲು |

ಸೋಲು-ಗೆಲುವೋ, ಗೆಲುವೊ ಸೋಲೋ
ಉಯ್ಯಾಲೆಯಲ್ಲಿ ಝೀಕುತ,
ಕವಿದಮಾವಾಸ್ಯಯ ಇರುಳಿನಲೆಯಲೂ
ಪೂರ್ಣ ಚಂದ್ರಮನೆಡೆಗೆ ನೋಡುತ
ಬದುಕೆ ಯಕ್ಷ ಪ್ರಶ್ನೆಯಾದರೂ
ರಕ್ಷೆಗಾಣಲು ಬಯಸುತ |

ಯಾವ ಸಂಚಿತ ಸಂಚಿನ ಕಾಲ್ಗಳು
ದೀಕ್ಷೆ ತೊಟ್ಟು ತುಳಿ ತುಳಿದರೂ
ಆತ್ಮ ಬಲದತಿಬಲದ ಪ್ರಭೆಯಲಿ
ಛಲದಿ ಸಾಗಿದೆ ಜೀವದುಸಿರು
ನಿತ್ಯ ಸತ್ಯದ ಹೊಳಪಿನಲ್ಲಿ
ಸೋತು ಗೆದ್ದ ಸೊಗಸನು ಸ್ಮರಿಸುತ |

ದಿಕ್ಕೂ ದಿಕ್ಕಿಗೂ ದಿಕ್ಕು ಗಾಣದೆ
ಕವಿದಂಧಕಾರದಿ ಅರಸುತ
ಸೂರ್ಯ ರಶ್ಮಿಯ ಜ್ಞಾನ ನಿಧಿಯಲಿ
ಬಾಳ ಬಂಡಿಯ ನಡೆಸುತ
ಅರಿವಿನರಿವಿನ ನೇಹದಲ್ಲಿ
ಕನಸ ಬಿತ್ತಿ ಬೆಳೆಯುತ |

ನಿಜದ ಗುರಿಯೇ ಇರದಿಹ
ಗುರುನಾಥರಿಲ್ಲಿ ಶವದಲಂಕಾರಕೆ
ಸ್ವಾರ್ಥ ನೀಚ ತಂತ್ರ ದೀಕ್ಷೆ,
ತೊಟ್ಟು ಕಟ್ಟುವ ತಂತ್ರಕೆ,
ಬಾಗದರಿವಿನ ಭಾಗ್ಯದಲ್ಲಿ
ಜೀವ ಧನ್ಯ ಧ್ವನ್ಯವ ಸ್ಮರಿಸುತ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಪರ್ಯಾಸ
Next post ಬೇಕಾಗಿತ್ತೆ ಈ ದೂರದ ಹಾದಿ

ಸಣ್ಣ ಕತೆ

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…