ಸ್ವಗತ ಗೀತ

ನಾನು ಗೀತೆಯ ಬರೆದು ಹಾಡಿದೆ
ಭಾವ ಭಾರದೆದೆಯ ತಣಿಸಲು
ಎಲ್ಲ ಮರೆತೊಮ್ಮನದಿ ನಲಿದು
ನಿಮ್ಮ ಪ್ರೀತಿಗೆ ನಮಿಸಲು |

ಸೋಲು-ಗೆಲುವೋ, ಗೆಲುವೊ ಸೋಲೋ
ಉಯ್ಯಾಲೆಯಲ್ಲಿ ಝೀಕುತ,
ಕವಿದಮಾವಾಸ್ಯಯ ಇರುಳಿನಲೆಯಲೂ
ಪೂರ್ಣ ಚಂದ್ರಮನೆಡೆಗೆ ನೋಡುತ
ಬದುಕೆ ಯಕ್ಷ ಪ್ರಶ್ನೆಯಾದರೂ
ರಕ್ಷೆಗಾಣಲು ಬಯಸುತ |

ಯಾವ ಸಂಚಿತ ಸಂಚಿನ ಕಾಲ್ಗಳು
ದೀಕ್ಷೆ ತೊಟ್ಟು ತುಳಿ ತುಳಿದರೂ
ಆತ್ಮ ಬಲದತಿಬಲದ ಪ್ರಭೆಯಲಿ
ಛಲದಿ ಸಾಗಿದೆ ಜೀವದುಸಿರು
ನಿತ್ಯ ಸತ್ಯದ ಹೊಳಪಿನಲ್ಲಿ
ಸೋತು ಗೆದ್ದ ಸೊಗಸನು ಸ್ಮರಿಸುತ |

ದಿಕ್ಕೂ ದಿಕ್ಕಿಗೂ ದಿಕ್ಕು ಗಾಣದೆ
ಕವಿದಂಧಕಾರದಿ ಅರಸುತ
ಸೂರ್ಯ ರಶ್ಮಿಯ ಜ್ಞಾನ ನಿಧಿಯಲಿ
ಬಾಳ ಬಂಡಿಯ ನಡೆಸುತ
ಅರಿವಿನರಿವಿನ ನೇಹದಲ್ಲಿ
ಕನಸ ಬಿತ್ತಿ ಬೆಳೆಯುತ |

ನಿಜದ ಗುರಿಯೇ ಇರದಿಹ
ಗುರುನಾಥರಿಲ್ಲಿ ಶವದಲಂಕಾರಕೆ
ಸ್ವಾರ್ಥ ನೀಚ ತಂತ್ರ ದೀಕ್ಷೆ,
ತೊಟ್ಟು ಕಟ್ಟುವ ತಂತ್ರಕೆ,
ಬಾಗದರಿವಿನ ಭಾಗ್ಯದಲ್ಲಿ
ಜೀವ ಧನ್ಯ ಧ್ವನ್ಯವ ಸ್ಮರಿಸುತ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಪರ್ಯಾಸ
Next post ಬೇಕಾಗಿತ್ತೆ ಈ ದೂರದ ಹಾದಿ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys