ಕ್ಷೀರ ಸಾಗರ

ನೊರೆನೊರೆಯಾದ ಮೋಡಗಳ ಕ್ಷೀರಸಾಗರ
ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ
ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು
ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ-
ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ.
ವಿಷವುಂಡ ನೀಲಕಂಠನ ತೇಲುಗಣ್ಣು ಮೆಳ್ಳಗಣ್ಣು
ಜೀವನೆತ್ತಿಯ ಮೇಲೆ ಅದರೊಳಗೆ
ಗಂಗೆ ನೋರೂಡಿಸಿ ಬದುಕಿಸಿ ಮುಗುಳ್ನಗೆ-
ಸಪ್ತಹೆಡೆಯ ವಿಷಾನಿಲ ಸುತ್ತೆಲ್ಲ
ಹದಿನಾಲ್ಕು ಕಣ್ಣುಗಳಿಗೆ ರತ್ನ ಪಚ್ಚೆಯ ಸಿಂಗಾರ
ನೂರಿಪ್ಪತ್ತು ಹರಳಿನ ವಜ್ರದೆಳೆ
ಮಣಿಮಾಣಿಕ್ಯದ ಭಾರವಾದ ಎದೆ, ಸೊಕ್ಕಿದ ಮೈ
ಲಕ್ಷ್ಮಿಯ ಮೃದು ಸ್ಪರ್ಶ ವಿಷ್ಣುವಿನ ಐಶಾರಾಮಿ ನಗೆ-
ಮಗಳನ್ನೇ ಕೆಡವಿದ ಬ್ರಹ್ಮ ಪರಾರಿ
ಗುಡಿಗುಂಡಾರ ಮಠಗಳಿಲ್ಲದೆ ಎಲ್ಲಿದ್ದಾನೋ
ಆದರೂ ಇದು ಬ್ರಹ್ಮನ ಸೃಷ್ಟಿ;
ಸರಸ್ವತಿ ಗೋಜಲಿಗೆ ಬಿದ್ದು ವೀಣೆ ಹಿಡಿದು
ತಂತಿ ಮೀಟಿದರೆ ಅಪಸ್ವರ ಮತ್ತೆ ಮತ್ತೆ
ತಂತಿ ಬಿಗಿದು ಲಯಹೊಂದಿಸಲು ಪುಸ್ತಕ ತಡಕಾಡಿ
ವೀಣಾ ಪಾಣಿಗೆ ಕಣ್ಣುತೇವ
ಹೊಯ್ದಾಟ, ಅಲುಗಾಟ, ಕುಲಕಾಟ-
ಅರೆನಿದ್ರೆ-
ಮತ್ತೆ ಕಿಡಕಿ, ಮತ್ತದೇ ಕ್ಷೀರಸಾಗರ
ನೊರೆ ನೊರೆ
ಅರೆರೆ! ವೃಷಭಾವತಿಯಂತಿದೆಯಲ್ಲ, ಕಸಕಡ್ಡಿ ಕಚಡ-
ಕಣ್ಣು ಒರೆಸಿಕೊಂಡಷ್ಟೂ ಕಂಡುಬರುವ
ಫ್ಯಾಕ್ಟರಿಯ ಕೊಳೆಯ ನೊರೆ ಥೂ, ಥೂ
ದಟ್ಟ ಹೊಗೆಯ ಸದ್ದಿಲ್ಲದ ಕಡಲಿಗೆ ರಾಜಕೀಯ ಕಡಗೋಲು
ಒಂದೆಡೆ ರಾಜಕೀಯ ಮತ್ತೊಂದೆಡೆ ನಕ್ಸಲ್ ಭಯೋತ್ಪಾದಕರು
ಮಂಥಿಸಿದಷ್ಟು ಮಂಥಿಸಿದಷ್ಟು ಕೊಳಕೆದ್ದು ಗಬ್ಬುವಾಸನೆ.
ರಕ್ತ ಸಾವು ನೋವುಗಳ ಚೀತ್ಕಾರ
ಹೊಯ್ದಾಟ, ಅಲುಗಾಟ, ಕುಲುಕಾಟ-
ಮತ್ತದೇ ಕಿಡಕಿ ಮತ್ತದೇ ನೊರೆಯ ಕ್ಷೀರಸಾಗರ
ಮೇಲೆ ಇಡಿಯಾಗಿ ಫಳಫಳಿಸುವ ಸೂರ್ಯ.

ಕ್ಯಾಲೆಂಡರಿನ ಆಟೋಟಕೆ ಕಡಿವಾಣ ಹಾಕಿ
ಹೈವಾನಾದದ್ದು; ದುರುಳರಿಗೆ ಮಟ್ಟಹಾಕಲು.
ಎಲ್ಲೆಡೆ ಬಿಸಿವಾತಾವರಣ ಬಿಸಿಯುಸಿರೇರಿಸಿ
ಎದೆಗೊದ್ದು ಕೆಡುವುತ್ತಿರುವುದು
ಮಾಯಾಲೋಕದ ಮಂಥನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಕನಸುಗಳೆ ಬನ್ನಿ
Next post ಹೊಸಗಾದೆಗಳು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys