Home / ಕವನ / ಕವಿತೆ / ಕ್ಷೀರ ಸಾಗರ

ಕ್ಷೀರ ಸಾಗರ

ನೊರೆನೊರೆಯಾದ ಮೋಡಗಳ ಕ್ಷೀರಸಾಗರ
ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ
ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು
ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ-
ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ.
ವಿಷವುಂಡ ನೀಲಕಂಠನ ತೇಲುಗಣ್ಣು ಮೆಳ್ಳಗಣ್ಣು
ಜೀವನೆತ್ತಿಯ ಮೇಲೆ ಅದರೊಳಗೆ
ಗಂಗೆ ನೋರೂಡಿಸಿ ಬದುಕಿಸಿ ಮುಗುಳ್ನಗೆ-
ಸಪ್ತಹೆಡೆಯ ವಿಷಾನಿಲ ಸುತ್ತೆಲ್ಲ
ಹದಿನಾಲ್ಕು ಕಣ್ಣುಗಳಿಗೆ ರತ್ನ ಪಚ್ಚೆಯ ಸಿಂಗಾರ
ನೂರಿಪ್ಪತ್ತು ಹರಳಿನ ವಜ್ರದೆಳೆ
ಮಣಿಮಾಣಿಕ್ಯದ ಭಾರವಾದ ಎದೆ, ಸೊಕ್ಕಿದ ಮೈ
ಲಕ್ಷ್ಮಿಯ ಮೃದು ಸ್ಪರ್ಶ ವಿಷ್ಣುವಿನ ಐಶಾರಾಮಿ ನಗೆ-
ಮಗಳನ್ನೇ ಕೆಡವಿದ ಬ್ರಹ್ಮ ಪರಾರಿ
ಗುಡಿಗುಂಡಾರ ಮಠಗಳಿಲ್ಲದೆ ಎಲ್ಲಿದ್ದಾನೋ
ಆದರೂ ಇದು ಬ್ರಹ್ಮನ ಸೃಷ್ಟಿ;
ಸರಸ್ವತಿ ಗೋಜಲಿಗೆ ಬಿದ್ದು ವೀಣೆ ಹಿಡಿದು
ತಂತಿ ಮೀಟಿದರೆ ಅಪಸ್ವರ ಮತ್ತೆ ಮತ್ತೆ
ತಂತಿ ಬಿಗಿದು ಲಯಹೊಂದಿಸಲು ಪುಸ್ತಕ ತಡಕಾಡಿ
ವೀಣಾ ಪಾಣಿಗೆ ಕಣ್ಣುತೇವ
ಹೊಯ್ದಾಟ, ಅಲುಗಾಟ, ಕುಲಕಾಟ-
ಅರೆನಿದ್ರೆ-
ಮತ್ತೆ ಕಿಡಕಿ, ಮತ್ತದೇ ಕ್ಷೀರಸಾಗರ
ನೊರೆ ನೊರೆ
ಅರೆರೆ! ವೃಷಭಾವತಿಯಂತಿದೆಯಲ್ಲ, ಕಸಕಡ್ಡಿ ಕಚಡ-
ಕಣ್ಣು ಒರೆಸಿಕೊಂಡಷ್ಟೂ ಕಂಡುಬರುವ
ಫ್ಯಾಕ್ಟರಿಯ ಕೊಳೆಯ ನೊರೆ ಥೂ, ಥೂ
ದಟ್ಟ ಹೊಗೆಯ ಸದ್ದಿಲ್ಲದ ಕಡಲಿಗೆ ರಾಜಕೀಯ ಕಡಗೋಲು
ಒಂದೆಡೆ ರಾಜಕೀಯ ಮತ್ತೊಂದೆಡೆ ನಕ್ಸಲ್ ಭಯೋತ್ಪಾದಕರು
ಮಂಥಿಸಿದಷ್ಟು ಮಂಥಿಸಿದಷ್ಟು ಕೊಳಕೆದ್ದು ಗಬ್ಬುವಾಸನೆ.
ರಕ್ತ ಸಾವು ನೋವುಗಳ ಚೀತ್ಕಾರ
ಹೊಯ್ದಾಟ, ಅಲುಗಾಟ, ಕುಲುಕಾಟ-
ಮತ್ತದೇ ಕಿಡಕಿ ಮತ್ತದೇ ನೊರೆಯ ಕ್ಷೀರಸಾಗರ
ಮೇಲೆ ಇಡಿಯಾಗಿ ಫಳಫಳಿಸುವ ಸೂರ್ಯ.

ಕ್ಯಾಲೆಂಡರಿನ ಆಟೋಟಕೆ ಕಡಿವಾಣ ಹಾಕಿ
ಹೈವಾನಾದದ್ದು; ದುರುಳರಿಗೆ ಮಟ್ಟಹಾಕಲು.
ಎಲ್ಲೆಡೆ ಬಿಸಿವಾತಾವರಣ ಬಿಸಿಯುಸಿರೇರಿಸಿ
ಎದೆಗೊದ್ದು ಕೆಡುವುತ್ತಿರುವುದು
ಮಾಯಾಲೋಕದ ಮಂಥನ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...