ಬನ್ನಿ ಕನಸುಗಳೆ ಬನ್ನಿ

ಬನ್ನಿ ಕನಸುಗಳೆ ಬನ್ನಿ
ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ |

ಮಣ್ಣಿನಲಿ ದಿನಕಟ್ಟೋ
ಮಣ್ಣಣುಗರನು ಸಂತೈಸ ಬನ್ನಿ
ಮಣ್ಣಲ್ಲಿ ಮಣ್ಣಾಗೋ
ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ |

ದುಡಿ-ದುಡಿದು ದಣಿ-ದಣಿವ
ತನುಮನವನೋಲೈಸಲು ಬನ್ನಿ
ಸುಲಿ-ಸುಲಿದು ಕೂಡಿಡುವ
ಮನವ ಕರಗಿಸಿ ಮುದದಿ ಹಿಡಿದು ತನ್ನಿ

ಅಲೆದಲೆದು ಹಣ್ಣಾಗೋ
ಅಲೆಮಾರಿಯಾ ಕೈ ಹಿಡಿದು ಬನ್ನಿ
ಒಲಿದೊಲಿದು ನಗೆಬೀರೊ
ಬೆಸುಗೆ ಸೊಗಸನು ಮನದುಂಬಿ ಕರೆದು ತನ್ನಿ

ಉಸಿರ್‍ಹುಸಿರ ಹಸಿರ ಝರಿ
ತೊರೆ ಜಿನುಗ ಝೀಕಿಸ ಬನ್ನಿ
ಮರಳ್ನೆಲದ ಕೂಪದೊಳು
ಚಿಲುಮೆ ಚಿನ್ಮನ ಬಾಳ್ಚೆಲುವ ತನ್ನಿ

ತಂತ್ರಯುಗದತಂತ್ರಗಳ
ಭೀತಿ ದೂರವಿಡ ಲೋಡೋಡಿ ಬನ್ನಿ
ಶಾಂತ-ಶಮ-ಕ್ಷಮತೆಯ
ಬಾನ್ ಬೆಳಕ ಸ್ಪುರಿಸೋ ನಿಯತಿ ತನ್ನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೋರನ ಪೆಪ್ಪರಮಿಂಟು
Next post ಕ್ಷೀರ ಸಾಗರ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys