ರಾತ್ರಿ

ಹಕ್ಕಿ-ಪಕ್ಕಿ ಮೂಕವಾಗಿ
ಗಿರಿ-ಶಿಖರ ಮೌನತಾಳಿ

ಗಿಡ-ಮರ ಆಗೊಮ್ಮೆ ಈಗೊಮ್ಮೆ
ಸುಯ್ಯೆಂದು ಉಸಿರು ಬಿಡುತಿವೆ
ಎಲ್ಲೋ ನರಿಯ ಕೂಗೊಂದು ಕೇಳುತಿದೆ
ಜಿರ್ರೋ ಎನ್ನುತಿದೆ ಜೀರುಂಡೆ

ಖಗ-ಮೃಗ ಬರುತಿಹವು ಬಾಯಾರಿಸಲು
ನದಿ-ಸಾಗರದೊಡಲು ಸೇರಲು
ಬಯಸುತಿವೆ ಹಳ್ಳ-ಕೊಳ್ಳ
ರಮಿಸುತಿಹವು ತೊಗಲಿಗೆ-ತೊಗಲು

ಚುಕ್ಕಿಗಳು ನಲಿತಿಹವು ಬಾನಂಗಳದಲಿ
ಚಂದಿರನು ಮಲ್ಲಿಗೆಯಂತೆ ನಳ-ನಳಿಸಿ
ತುಂಟ ತನದಲಿ ನೀಡುತ ಕಚಗುಳಿ
ಬೆಳ್ದಿಂಗಳ ಕಂಪಸೂಸಿ ಕಿಲ-ಕಿಲನೆ ನಗುತಿಹನು

ಬೀದಿ ಬದಿಯಲಿ ಗಟಾರದ ನೀರಿನಲಿ
ಕಂಡ ಚಂದಿರನ ಹಿಡಿಯಲು ಬಿದ್ದಿಹನೊಬ್ಬ
ಅಮಲಿನಲಿ ತಡಬಡಿಸಿ ನುಡಿದ
ಅಂಧಕಾರದ ಅಮಲಿನ
ಮಾಯೆಯಲ್ಲಡಗಿಹುದು ಈ ಜಗವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೩
Next post ಬಕೆಟ್ ಸವಾರ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…