ರಾತ್ರಿ

ಹಕ್ಕಿ-ಪಕ್ಕಿ ಮೂಕವಾಗಿ
ಗಿರಿ-ಶಿಖರ ಮೌನತಾಳಿ

ಗಿಡ-ಮರ ಆಗೊಮ್ಮೆ ಈಗೊಮ್ಮೆ
ಸುಯ್ಯೆಂದು ಉಸಿರು ಬಿಡುತಿವೆ
ಎಲ್ಲೋ ನರಿಯ ಕೂಗೊಂದು ಕೇಳುತಿದೆ
ಜಿರ್ರೋ ಎನ್ನುತಿದೆ ಜೀರುಂಡೆ

ಖಗ-ಮೃಗ ಬರುತಿಹವು ಬಾಯಾರಿಸಲು
ನದಿ-ಸಾಗರದೊಡಲು ಸೇರಲು
ಬಯಸುತಿವೆ ಹಳ್ಳ-ಕೊಳ್ಳ
ರಮಿಸುತಿಹವು ತೊಗಲಿಗೆ-ತೊಗಲು

ಚುಕ್ಕಿಗಳು ನಲಿತಿಹವು ಬಾನಂಗಳದಲಿ
ಚಂದಿರನು ಮಲ್ಲಿಗೆಯಂತೆ ನಳ-ನಳಿಸಿ
ತುಂಟ ತನದಲಿ ನೀಡುತ ಕಚಗುಳಿ
ಬೆಳ್ದಿಂಗಳ ಕಂಪಸೂಸಿ ಕಿಲ-ಕಿಲನೆ ನಗುತಿಹನು

ಬೀದಿ ಬದಿಯಲಿ ಗಟಾರದ ನೀರಿನಲಿ
ಕಂಡ ಚಂದಿರನ ಹಿಡಿಯಲು ಬಿದ್ದಿಹನೊಬ್ಬ
ಅಮಲಿನಲಿ ತಡಬಡಿಸಿ ನುಡಿದ
ಅಂಧಕಾರದ ಅಮಲಿನ
ಮಾಯೆಯಲ್ಲಡಗಿಹುದು ಈ ಜಗವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುರ್‍ಕಾ ೩
Next post ಬಕೆಟ್ ಸವಾರ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…