ಕವಿಯ ಬಯಕೆ

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು
ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು
ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ
ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ!
ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು
ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ!
ತಮ್ಮ ಹೃದಯದ ಬಯಕೆ ಪದ್ಯ ಸಾಲ್ಗಳ ಮಾಲೆ.
ಕವಿಯು ಮರೆ ಮೋಸವನು ಎತ್ತಿ ತೋರುವ ಇಹದ
ಬಿಚ್ಚು ಮನಸಿನ ಬೇಹುಗಾರನೆಂದರೆ ಏನು?

ಅವನ ಬಯಕೆ ಅದೇನು?  ಜೀವನದ ಸಮರವನು
ಸಾಮರಸ ವಾದದಲಿ ಹಾಡಿತೋರಿಸಿ ನಲಿದು
ಜನದ ಪಾಡಿಗೆ ತಾನು ಪಾಲುಗಾರನು ಆಗಿ
ಕಳ್ಳ ಜೀವದ ತಂತ್ರಗಳ ಬಯಲಿಗೆಳೆ ತಂದು
ಜ್ಞಾನಿಗಳ ನಿಷ್ಪಕ್ಷ ತಲೆಗಳನು ತೂಗಿಸುತ
ತಾನು ಹಾಡಿದ ಗಾನ ಯಾರು ಪೊಗಳುವರೆಂದು
ತನ್ನ ವಾದಕೆ ಯಾರು ಮನ್ನಣೆಯ ಸಲಿಸುವರು
ಎಂದು ನೋಡುವ ತಾನು ಬರೆದ ಹಾಡ್ಗಳನೆಲ್ಲ
ಕ್ರಮವಾಂತು ಹೇಳಯವುದೆ ಅವನ ಜೀವದ ಬಯಕೆ!

ಮಧುರವಾದಾ ಕೀರ್ತಿ ಕವಿವರನೆ ಬಯಸುವನು
ತಾನು ಲೋಕಕೆ ಅಂದ ವಿಶ್ವರಹಸ್ಯದ ಸೊಲ್ಲು
ಪಾಪಿಯಾದವನೊಬ್ಬ ಹೇಳಿ ನಲಿದೊಡೆ ಕವಿಯು
ಹಿಗ್ಗುವನು, ಎಲ್ಲರಂತೆಯೆ ಪೇಳಲಿಚ್ಚಿಪನು!
ಆದಿ ಕವಿಯನು ಮೀರ್ವ ಬಯಕೆ ಅವನಲ್ಲಿಲ್ಲ!
ತನ್ನ ಒಣ ಮಾತುಗಳು ಮನ್ನಣೆಯ ದೃಷ್ಟಿಯಲಿ
ಹೊರಳಿದರೆ, ತನ್ನ ಸೇವೆಯು ರಸಿಕ ವೃಂದವದು
ಗಣಿಸಿದರೆ, ತನ್ನ ಬಿರುನುಡಿ ಜನಕೆ ನೀತಿಯನು
ಕಲಿಸಿದರೆ, ಅದೆ ಜಗದ ಕವಿ ಪ್ರಯತ್ನದ ಫಲವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೧
Next post ನನ್ನ ಸಾಮರ್ಥ್ಯ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…