Home / ಕವನ / ಕವಿತೆ / ಕವಿಯ ಬಯಕೆ

ಕವಿಯ ಬಯಕೆ

ಕವಿಯಾಗಿ ಸಲ್ಲಿಸುವ ಮಧುರಗಾನದ ಸೊಂಪು
ನುಣ್ದನಿಗಳಿಂಪಿನಿಂ ಬರೆದು ಪೊಗಳುವ ಮಾತು
ಸಾಲುಗಳ ಲೀಲೆಯಲಿ ಬರೆದ ಬಡಗಬ್ಬಿಗನ
ನಾಲ್ಪಂಕ್ತಿ ಕವನವದು ಏನು ಕಲ್ಪಿತ ವಾಣಿ!
ವೇದಗಳು ಶಾಸ್ತ್ರಗಳು ಕವಿಜಿಹ್ವೆ ಉಕ್ತಿಗಳು
ಯಾರ ಹಂಗನು ಕಾಯೆ ಹೇಳಿ ನಲಿವುವೊ ಏನೊ!
ತಮ್ಮ ಹೃದಯದ ಬಯಕೆ ಪದ್ಯ ಸಾಲ್ಗಳ ಮಾಲೆ.
ಕವಿಯು ಮರೆ ಮೋಸವನು ಎತ್ತಿ ತೋರುವ ಇಹದ
ಬಿಚ್ಚು ಮನಸಿನ ಬೇಹುಗಾರನೆಂದರೆ ಏನು?

ಅವನ ಬಯಕೆ ಅದೇನು?  ಜೀವನದ ಸಮರವನು
ಸಾಮರಸ ವಾದದಲಿ ಹಾಡಿತೋರಿಸಿ ನಲಿದು
ಜನದ ಪಾಡಿಗೆ ತಾನು ಪಾಲುಗಾರನು ಆಗಿ
ಕಳ್ಳ ಜೀವದ ತಂತ್ರಗಳ ಬಯಲಿಗೆಳೆ ತಂದು
ಜ್ಞಾನಿಗಳ ನಿಷ್ಪಕ್ಷ ತಲೆಗಳನು ತೂಗಿಸುತ
ತಾನು ಹಾಡಿದ ಗಾನ ಯಾರು ಪೊಗಳುವರೆಂದು
ತನ್ನ ವಾದಕೆ ಯಾರು ಮನ್ನಣೆಯ ಸಲಿಸುವರು
ಎಂದು ನೋಡುವ ತಾನು ಬರೆದ ಹಾಡ್ಗಳನೆಲ್ಲ
ಕ್ರಮವಾಂತು ಹೇಳಯವುದೆ ಅವನ ಜೀವದ ಬಯಕೆ!

ಮಧುರವಾದಾ ಕೀರ್ತಿ ಕವಿವರನೆ ಬಯಸುವನು
ತಾನು ಲೋಕಕೆ ಅಂದ ವಿಶ್ವರಹಸ್ಯದ ಸೊಲ್ಲು
ಪಾಪಿಯಾದವನೊಬ್ಬ ಹೇಳಿ ನಲಿದೊಡೆ ಕವಿಯು
ಹಿಗ್ಗುವನು, ಎಲ್ಲರಂತೆಯೆ ಪೇಳಲಿಚ್ಚಿಪನು!
ಆದಿ ಕವಿಯನು ಮೀರ್ವ ಬಯಕೆ ಅವನಲ್ಲಿಲ್ಲ!
ತನ್ನ ಒಣ ಮಾತುಗಳು ಮನ್ನಣೆಯ ದೃಷ್ಟಿಯಲಿ
ಹೊರಳಿದರೆ, ತನ್ನ ಸೇವೆಯು ರಸಿಕ ವೃಂದವದು
ಗಣಿಸಿದರೆ, ತನ್ನ ಬಿರುನುಡಿ ಜನಕೆ ನೀತಿಯನು
ಕಲಿಸಿದರೆ, ಅದೆ ಜಗದ ಕವಿ ಪ್ರಯತ್ನದ ಫಲವು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...