ಕನಿಷ್ಟದಲ್ಲಿ ಹುಟ್ಟಿದೆ. ಉತ್ತಮದಲ್ಲಿ ಬೆಳೆದೆ.
ಸತ್ಯಶರಣರ ಪಾದವಿಡಿದೆ.  ಆ ಶರಣರ
ಪಾದವಿಡಿದು ಗುರುವ ಕಂಡೆ.
ಲಿಂಗವ ಕಂಡೆ.  ಜಂಗಮವ ಕಂಡೆ.
ಪ್ರಸಾದವ ಕಂಡೆ.  ಪಾದೋದಕವ ಕಂಡೆ.
ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಿತ್ತು.
ಕಂಗಳ ಮುಂದಣ ಕತ್ತಲೆ ಹರಿಯಲೊಡನೆ ಮಂಗಳ ಮಹಾ
ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ