Home / ಲೇಖನ / ವಿಜ್ಞಾನ / ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ಮಾಯೆ ಎಂಥಹ ಅಪಾಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ದನಕರುಗಳಿಗೆ ತೊಂದರೆ, ನೀರನ ಹರಿವಿಗೆ ತಡೆ, ಬೆಳೆಗಳ ಬೇರುಗಳಿಗೆ ತೊಂದರೆ ಅಲ್ಲದೇ ಇವುಗಳಿಂದ ಪರಿಸರಮಾಲಿನ್ಯ ಕೂಡಾ ಯತೆಚ್ಚೆವಾಗಿ ಆಗಿ ಮಾನವನಿಗೆ ಮಾರಕವಾಗುವ ವಿಷಯ ತಿಳಿದಿದೆ. ದನಗಳು ತಿಂದರೆ ಸತ್ತುಹೋಗುತ್ತವೆ, ಮನುಷ್ಯ ತಿಂದರೆ ಕರುಳನ್ನು ಸುತ್ತಿಸಿಕೊಂಡು ಮರಣ ಅಪ್ಪುತ್ತಾನೆ. ಭೂಮಿಯಲ್ಲಿ ಹೂತರೆ ನೂರಿನ್ನೂರು ವರ್ಷವಾದರೂ ಕರಗದೇ ಇರುತ್ತದೆ. ಇವುಗಳನ್ನು ಸುಟ್ಟುಹಾಕಿದರೆ ಇದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಹೊಗೆ (ಇಂಗಾಲ ಡೈ ಆಕ್ಸೈಡ್) ಯು ಮನುಷ್ಯನ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ. ಇಂಥಹ ಅಪಾಯಕಾರಿ ಪಾಲಿಥಿನನ್ನೇ ತಡೆಹಿಡಿಯಬೇಕೆಂದು ಸರಕಾರ ಆಜ್ಞೆ ಹೊರಡಿಸಿದರೂ ಸಫಲವಾಗಲಿಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥಮಾಡಿಕೊಳ್ಳದೇ ಈ ಮಾಯೆಗೆ ಮರುಳಾಗಿದ್ದಾರೆ.

ಇಂಥಹ ಸಂದರ್ಭದಲ್ಲಿ ಛತ್ತೀಸಗಡದ ಯುವ ವಿಜ್ಞಾನಿ ಅವಧಿಯ ಎಂಬುವರು ಸೊಸೈಟಿ ಫಾರ್ ಪಾರ್‍ಥೆನಿಯಂ ಮ್ಯಾನೋಜಮೆಂಟ್ ಸಂಯೋಜಕರಾಗಿದ್ದುಕೊಂಡು ಈ ಪ್ಲಾಸ್ಟಿಕನ್ನು ತಿಂದು ಅರಗಿಸಿಕೊಳ್ಳಬಲ್ಲ ಕೀಟಗಳನ್ನು ಪತ್ತೆಹಚ್ಚಿದ್ದಾರೆ. ೧೩೫ ಕೀಟಗಳ ಮೇಲೆ ಪ್ರಯೋಗ ನಡಿಸಿದ (೨ ವರ್ಷ) ‘ಅವಧಿಯಾ’ ಎಂಬ ವಿಜ್ಞಾನಿ ಇವುಗಳಲ್ಲಿ ೫ ಕೀಟಗಳು ಈ ಪಾಲಿಥಿನನ್ನು ತಿಂದು ಅರಗಿಸಿಕೊಳ್ಳಬಲ್ಲದೆಂದು ದೃಢೀಕರಿಸಿದ್ದಾರೆ. ಈ ‘ಪ್ಲಾಸ್ಬಿಕ್ ಬಗ್’ ಅನ್ನು ತಾನು ೧೯೯೯ರಲ್ಲಿ ಕಂಡು ಹಿಡಿದಿದ್ದಾಗಿ ಹೇಳಿದ್ದಾರೆ. ಚಳಿಗಾಲದಲ್ಲಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆ ಎಂದೂ ಹೇಳಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...