Home / ಲೇಖನ / ವಿಜ್ಞಾನ / ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಕೀಟಗಳು

ಪ್ಲಾಸ್ಟಿಕ್ ಮಾಯೆ ಎಂಥಹ ಅಪಾಯಕಾರಿ ಎಂಬುವುದು ಎಲ್ಲರಿಗೂ ಗೊತ್ತು. ದನಕರುಗಳಿಗೆ ತೊಂದರೆ, ನೀರನ ಹರಿವಿಗೆ ತಡೆ, ಬೆಳೆಗಳ ಬೇರುಗಳಿಗೆ ತೊಂದರೆ ಅಲ್ಲದೇ ಇವುಗಳಿಂದ ಪರಿಸರಮಾಲಿನ್ಯ ಕೂಡಾ ಯತೆಚ್ಚೆವಾಗಿ ಆಗಿ ಮಾನವನಿಗೆ ಮಾರಕವಾಗುವ ವಿಷಯ ತಿಳಿದಿದೆ. ದನಗಳು ತಿಂದರೆ ಸತ್ತುಹೋಗುತ್ತವೆ, ಮನುಷ್ಯ ತಿಂದರೆ ಕರುಳನ್ನು ಸುತ್ತಿಸಿಕೊಂಡು ಮರಣ ಅಪ್ಪುತ್ತಾನೆ. ಭೂಮಿಯಲ್ಲಿ ಹೂತರೆ ನೂರಿನ್ನೂರು ವರ್ಷವಾದರೂ ಕರಗದೇ ಇರುತ್ತದೆ. ಇವುಗಳನ್ನು ಸುಟ್ಟುಹಾಕಿದರೆ ಇದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಹೊಗೆ (ಇಂಗಾಲ ಡೈ ಆಕ್ಸೈಡ್) ಯು ಮನುಷ್ಯನ ಉಸಿರಾಟವನ್ನೇ ನಿಲ್ಲಿಸಿ ಬಿಡುತ್ತದೆ. ಇಂಥಹ ಅಪಾಯಕಾರಿ ಪಾಲಿಥಿನನ್ನೇ ತಡೆಹಿಡಿಯಬೇಕೆಂದು ಸರಕಾರ ಆಜ್ಞೆ ಹೊರಡಿಸಿದರೂ ಸಫಲವಾಗಲಿಲ್ಲ. ಪ್ರಜ್ಞಾವಂತ ಜನರು ಇದನ್ನು ಅರ್ಥಮಾಡಿಕೊಳ್ಳದೇ ಈ ಮಾಯೆಗೆ ಮರುಳಾಗಿದ್ದಾರೆ.

ಇಂಥಹ ಸಂದರ್ಭದಲ್ಲಿ ಛತ್ತೀಸಗಡದ ಯುವ ವಿಜ್ಞಾನಿ ಅವಧಿಯ ಎಂಬುವರು ಸೊಸೈಟಿ ಫಾರ್ ಪಾರ್‍ಥೆನಿಯಂ ಮ್ಯಾನೋಜಮೆಂಟ್ ಸಂಯೋಜಕರಾಗಿದ್ದುಕೊಂಡು ಈ ಪ್ಲಾಸ್ಟಿಕನ್ನು ತಿಂದು ಅರಗಿಸಿಕೊಳ್ಳಬಲ್ಲ ಕೀಟಗಳನ್ನು ಪತ್ತೆಹಚ್ಚಿದ್ದಾರೆ. ೧೩೫ ಕೀಟಗಳ ಮೇಲೆ ಪ್ರಯೋಗ ನಡಿಸಿದ (೨ ವರ್ಷ) ‘ಅವಧಿಯಾ’ ಎಂಬ ವಿಜ್ಞಾನಿ ಇವುಗಳಲ್ಲಿ ೫ ಕೀಟಗಳು ಈ ಪಾಲಿಥಿನನ್ನು ತಿಂದು ಅರಗಿಸಿಕೊಳ್ಳಬಲ್ಲದೆಂದು ದೃಢೀಕರಿಸಿದ್ದಾರೆ. ಈ ‘ಪ್ಲಾಸ್ಬಿಕ್ ಬಗ್’ ಅನ್ನು ತಾನು ೧೯೯೯ರಲ್ಲಿ ಕಂಡು ಹಿಡಿದಿದ್ದಾಗಿ ಹೇಳಿದ್ದಾರೆ. ಚಳಿಗಾಲದಲ್ಲಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆ ಎಂದೂ ಹೇಳಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...